ಪರೇಶ್ ಮೇಸ್ತಾ ಪ್ರಕರಣ: ಹುಂಬು ಧೈರ್ಯ ಪ್ರದರ್ಶಿಸಿದ್ದ ಯುವಕರಿಗೆ ತ್ರಿಶಂಕು ಸ್ಥಿತಿ
ಕಳೆದ ಎರಡು ವರ್ಷಗಳ ಹಿಂದೆ ಹೊನ್ನಾವರದ ಯುವಕ ಪರೇಶ್ ಮೇಸ್ತಾ ಅಸಹಜ ಸಾವು ಪ್ರಕರಣ ಇಡೀ ಉತ್ತರಕನ್ನಡ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತ್ತು. ಪರೇಶ್ನನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಸೇರಿದಂತೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಸಾಕಷ್ಟು ಗಲಭೆಗಳು ನಡೆದ ಪರಿಣಾಮ ಸಾವಿರಾರು ಯುವಕರ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಅಂದು ಹುಂಬು ಧೈರ್ಯ ಮೆರೆದಿದ್ದ ಯುವಕರು ಇಂದು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.