ಸ್ಟೇರಿಂಗ್ ರಾಡ್ ತುಂಡಾಗಿ ಕೆಎಸ್​​ಆರ್​ಟಿಸಿ ಬಸ್​​ ಅಪಘಾತ; ಚಾಲಕ ಸೇರಿ ಹಲವರಿಗೆ ಗಾಯ - KSRTC Bus Accident

By ETV Bharat Karnataka Team

Published : May 13, 2024, 7:23 AM IST

thumbnail
ಕೆಎಸ್​​ಆರ್​ಟಿಸಿ ಬಸ್​​ ಬಸ್ ಅಪಘಾತ (ETV Bharat)

ಚಿಕ್ಕಮಗಳೂರು: ಕೆಎಸ್‌​ಆರ್​​ಟಿಸಿ ಬಸ್​​ನ ಸ್ಟೇರಿಂಗ್ ರಾಡ್ ತುಂಡಾಗಿ ಮಣ್ಣಿನ ದಿಬ್ಬಕ್ಕೆ ಗುದ್ದಿರುವ ಘಟನೆ ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆಯಿತು. ಬಸ್​ ಚಾಲಕ ದೇವರಾಜ್​ ಕಾಲಿಗೆ ಗಂಭೀರ ಗಾಯವಾಗಿದ್ದು, ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. 

ಘಟನೆ ತಿಳಿದು ಕೂಡಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಲ್ದೂರು ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು.

ಚಿಕ್ಕಮಗಳೂರಿನಿಂದ ಆಲ್ದೂರಿಗೆ ಬಸ್ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಚಿಕ್ಕಮಗಳೂರು - ಶೃಂಗೇರಿ ರಸ್ತೆಮಾರ್ಗದ ಕೂದುವಳ್ಳಿ ಸಮೀಪ ಘಟನೆ ಸಂಭವಿಸಿದೆ. ರಸ್ತೆ ತಿರುವಿನಲ್ಲಿ ದಿಬ್ಬಕ್ಕೆ ಗುದ್ದಿದ ಬಸ್​​ ಅಲ್ಲೇ ಬಾಕಿಯಾಗಿತ್ತು. ಇದರಿಂದ ಇತರೆ ವಾಹನ ಸಂಚಾರಕ್ಕೆ ಕೆಲಕಾಲ ಅಡಚಣೆಯಾಗಿ ರಸ್ತೆಯುದ್ದ ಟ್ರಾಫಿಕ್ ಜಾಮ್ ಉಂಟಾಯಿತು. 

ಈ ರಸ್ತೆಮಾರ್ಗ ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಒದಗಿಸುವ ರಾಷ್ಟ್ರೀಯ ಹೆದ್ದಾರಿಯಾಗಿದೆ. 

ಇದನ್ನೂ ಓದಿ: ಬಂಡೀಪುರದ ಪ್ರವೇಶದ್ವಾರ ಬಳಿ ಕೆಟ್ಟು ನಿಂತ ಕಂಟೈನರ್; ವೀಕೆಂಡ್ ಖುಷಿಯಲ್ಲಿದ್ದ ಪ್ರವಾಸಿಗರಿಗೆ ಟ್ರಾಫಿಕ್ ಬಿಸಿ - Mysore Ooty National Highway

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.