ಕಲಘಟಗಿ: ಗಜಪಡೆ ಹಾವಳಿಗೆ ಬೆಳೆಗಳು ನಾಶ, ಕಂಗಾಲಾದ ರೈತರು

By

Published : Dec 3, 2020, 12:12 PM IST

thumbnail

ಹುಬ್ಬಳ್ಳಿ: ಆನೆಗಳ ಹಾವಳಿಗೆ ಕಲಘಟಗಿ ತಾಲೂಕಿನ ರೈತರು ಕಂಗಾಲಾಗಿದ್ದಾರೆ. ಕಳೆದ ಒಂದು ವಾರದಿಂದ ಇಲ್ಲೇ ಬೀಡು ಬಿಟ್ಟಿರುವ ಆನೆಗಳು ಅನ್ನದಾತರಿಗೆ ಕಣ್ಣೀರು ತರಿಸಿವೆ. ಬೀರವಳ್ಳಿ ಗ್ರಾಮದ ಸುತ್ತಮುತ್ತ ಠಿಕಾಣಿ ಹೂಡಿರುವ ಆನೆಗಳ ಹಿಂಡು ರೈತರ ಬೆಳೆಗಳನ್ನು ನಾಶಗೊಳಿಸುತ್ತಿವೆ. ಸುಮಾರು 6-7 ಆನೆಗಳಿದ್ದು, ಡ್ರೋನ್​​​ ಕ್ಯಾಮರಾದಲ್ಲಿ ಆನೆಗಳ ದೃಶ್ಯ ಸೆರೆಯಾಗಿದೆ. ಹೊಲಗಳಿಗೆ ನುಗ್ಗಿ ಕಬ್ಬು, ಭತ್ತ, ತೊಗರಿ, ಮೆಕ್ಕೆಜೋಳವನ್ನು ನಾಶ ಮಾಡುತ್ತಿವೆ. ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಗಜ ಪಡೆಯನ್ನು ವಾಪಸ್ ಕಾಡಿಗೆ ಅಟ್ಟಲು ಹರಸಾಹಸ ಪಡುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.