ಜಂಗಲ್​ ಸಫಾರಿ ವೇಳೆ ಪ್ರವಾಸಿಗರ ಮೇಲೆ ದಾಳಿಗೆ ಯತ್ನಿಸಿದ ಹುಲಿ; ಚಾಲಕನ ವಿರುದ್ದ ಪ್ರಕರಣ ದಾಖಲು

By

Published : Apr 27, 2023, 1:47 PM IST

thumbnail

ನೈನಿತಾಲ್ (ಉತ್ತರಾಖಂಡ): ಜೀಪ್​ನಲ್ಲಿ ಜಂಗಲ್​ ಸಫಾರಿಗೆ ತೆರಳುತ್ತಿದ್ದ ಪ್ರವಾಸಿಗರ ಮೇಲೆ ಹುಲಿಯೊಂದು ದಾಳಿ ನಡೆಸಲು ಯತ್ನಿಸಿರುವ ಘಟನೆ ಇಲ್ಲಿಯ ರಾಮನಗರ ಕಾರ್ಬೆಟ್ ಪಾರ್ಕ್ ಸೀತಾಬಾನಿ ಅರಣ್ಯದಲ್ಲಿ ನಡೆದಿದೆ.  ಸಫಾರಿ ವೇಳೆ ರಸ್ತೆ ಪಕ್ಕದಲ್ಲಿ ಹುಲಿ ಕಂಡು ಬಂದಿದೆ. ಇದನ್ನು ನೋಡಲೆಂದು ಚಾಲಕ ಜೀಪ್​ ಅನ್ನು ರಸ್ತೆ ಮೇಲೆ ನಿಲ್ಲಿಸಿದ್ದಾನೆ. ಈ ವೇಳೆ ಹುಲಿ ಇದ್ದಕ್ಕಿದ್ದಂತೆ ಪ್ರವಾಸಿಗರ ಜೀಪಿನ ಮೇಲೆ ದಾಳಿಗೆ ಮುಂದಾಗಿದೆ. 

ಇದರಿಂದ ಜೀಪಿನಲ್ಲಿ ಕುಳಿತಿದ್ದ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದಾರೆ. ಅಲ್ಲದೇ ಹುಲಿ ದಾಳಿ ನಡೆಸುತ್ತದೆ ಎಂದು ಕಿರುಚಾಡಿದರು ಭಯ ಪಡದ ಹುಲಿ ದಾಳಿಕೆ ಯತ್ನಿಸಿದೆ. ಈ ವೇಳೆ, ಚಾಲಕ ಜೀಪನ್ನು ವೇಗವಾಗಿ ಮುಂದೆ ಚಲಾಯಿಸಿದ್ದಾನೆ. ಬಳಿಕ ಜೀಪನ್ನು ಹಿಂದೆ ಕೊಂಡೊಯ್ದಿದ್ದಾನೆ. ಇದರಿಂದ ಹೆದರಿದ ಹುಲಿ ಕಾಡಿನೊಳಗೆ ಓಡಿ ಹೋಗಿದೆ. ಈ ಘಟನೆಯಿಂದ ಅರಣ್ಯ ಇಲಾಖೆ ಸಫಾರಿ ಬಗ್ಗೆ ನಿಗಾವಹಿಸಿದೆ. 

ಇನ್ನು ಜಿಪ್ಸಿ ಚಾಲಕ ಹುಲಿಯ ಬಳಿ ಜೀಪು ನಿಲ್ಲಿಸಿ ಅದನ್ನು ಪ್ರಚೋದಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆ ಅದು ದಾಳಿಗೆ ಮುಂದಾಗಿದೆ ಎನ್ನಲಾಗಿದೆ. ಚಾಲಕನ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂಬಂಧಿಸಿದ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ. 

ಇದನ್ನೂ ಓದಿ: 24 ಗಂಟೆಯೊಳಗೆ ಇಬ್ಬರನ್ನು ಬಲಿ ಪಡೆದ ಹುಲಿ.. ಬೆಚ್ಚಿಬಿದ್ದ ಮಡಿಕೇರಿ ಜನ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.