ಸೆಲೆಬ್ರಿಟಿ ಕ್ರಿಕೆಟ್‌ ಲೀಗ್: ​ರಾಯ್ಪುರಕ್ಕೆ ಹಾರಿದ ಕರ್ನಾಟಕ ಬುಲ್ಡೋಜರ್ಸ್ ತಂಡ

By

Published : Feb 16, 2023, 9:16 PM IST

thumbnail

ದೇವನಹಳ್ಳಿ: ಕ್ರೀಡೆ ಮತ್ತು ಮನರಂಜನೆ ಒದಗಿಸುತ್ತಿರುವ ಸೆಲೆಬ್ರಿಟಿ ಕ್ರಿಕೆಟ್​ ಲೀಗ್ (ಸಿಸಿಎಲ್) ಈ ಬಾರಿ ರಾಯ್​ಪುರದಲ್ಲಿ ನಡೆಯುತ್ತಿದ್ದು, ಕರ್ನಾಟಕ ಬುಲ್ಡೋಜರ್ ತಂಡ ಇಂದು ಛತ್ತೀಸ್​ಗಢದತ್ತ ಪ್ರಯಾಣ ಬೆಳೆಸಿತು. ಸಂಜೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ತಂಡ 5.20 ರ ಸುಮಾರಿಗೆ ರಾಯ್​ಪುರಕ್ಕೆ ವಿಮಾನವೇರಿದರು. ತಂಡದ ನಾಯಕ ನಟ ಪ್ರದೀಪ್ ಮಾತನಾಡಿ, ಈ ಬಾರಿ ಒಂದು ತಿಂಗಳಿನಿಂದ ನಟ ಕಿಚ್ಚ ಸುದೀಪ್ ನೇತೃತ್ವದಲ್ಲಿ ಸಾಕಷ್ಟು ತರಬೇತಿ ಪಡೆದಿದ್ದೇವೆ. 18 ರಂದು ಬೆಂಗಾಲಿ ಟೈಗರ್ಸ್ ಜೊತೆ ಮೊದಲ ಪಂದ್ಯವಿದೆ. ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಸಿಸಿಎಲ್ ಕಪ್​ ಗೆದ್ದೇ ಗೆಲ್ಲುತ್ತೇವೆ ಎಂದು ​ವಿಶ್ವಾಸ ವ್ಯಕ್ತಪಡಿಸಿದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.