ಕಮಲ್​ನಾಥ್​ ಅವಾಚ್ಯ ಶಬ್ದ ಬಳಕೆ: ಸಚಿವೆ ಸ್ಮೃತಿ ಇರಾನಿ ಹೇಳಿದ್ದಿಷ್ಟು!

By

Published : Oct 20, 2020, 5:22 PM IST

thumbnail

ಬಿಜೆಪಿ ಸಚಿವೆ ಕುರಿತು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಅವಾಚ್ಯ ಶಬ್ದ ಬಳಕೆ ಮಾಡಿದ್ದು, ಇದಕ್ಕೆ ಸ್ಮೃತಿ ಇರಾನಿ ಆಕ್ರೋಶ ವ್ಯಕ್ತಪಡಿದ್ದಾರೆ. ಕಮಲ್​ನಾಥ್​ ಮಾತ್ರವಲ್ಲ, ಕಾಂಗ್ರೆಸ್​ನಲ್ಲಿ ಕೆಲಸ ಮಾಡುತ್ತಿರುವ ಮಹಿಳಾ ಕಾರ್ಯಕರ್ತರ ಮೇಲೆ ಅವರ ಪಕ್ಷದವರೇ ಕೆಲ ದಿನಗಳ ಹಿಂದೆ ಹಲ್ಲೆ ನಡೆಸಿದ್ದರು. ಇದ್ದರಿಂದ ಆ ಪಕ್ಷದಲ್ಲಿ ಮಹಿಳೆಯರನ್ನ ಯಾವ ರೀತಿಯಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬುದು ಗೊತ್ತಾಗುತ್ತದೆ. ಇಂತಹ ಘಟನೆಗಳು ಕಾಂಗ್ರೆಸ್​ ಪಕ್ಷದ ನಿಜಾಂಶ ಹೊರಗೆಳೆಯುತ್ತಿವೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ. ಕಮಲ್​ನಾಥ್​ ಹೇಳಿಕೆಗೆ ಬಿಜೆಪಿ ನಾಯಕರು ಸೇರಿ ಅನೇಕರು ಈಗಾಗಲೇ ಕಿಡಿ ಕಾರುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.