ETV Bharat / state

ಮನೆ ಕಟ್ಟಲು ತೆಗೆದ ಬುನಾದಿ ಗುಂಡಿಯಲ್ಲಿ ಮುಳುಗಿ ಮೂವರು ಬಾಲಕರು ಸಾವು

author img

By

Published : Nov 3, 2021, 3:00 PM IST

ಮಳೆ ನೀರು ತುಂಬಿದ ಗುಂಡಿಯಲ್ಲಿ ಈಜಾಡಲು ಇಳಿದ ಮೂವರು ಬಾಲಕರು ದುರ್ಮರಣ ಹೊಂದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಗುಂಡಿಯಲ್ಲಿ ಮುಳಗಿ ಮೂವರು ಬಾಲಕರು ಸಾವು
ಗುಂಡಿಯಲ್ಲಿ ಮುಳಗಿ ಮೂವರು ಬಾಲಕರು ಸಾವು

ಕಲಬುರಗಿ: ನೀರು ತುಂಬಿದ್ದ ಗುಂಡಿಯಲ್ಲಿ‌ ಈಜಾಡಲು ಹೋದ ಮೂವರು ಬಾಲಕರು ದುರ್ಮರಣ ಹೊಂದಿರುವ ಘಟನೆ ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ. ಮೃತರನ್ನು ದರ್ಶನ್ (12), ಪ್ರಶಾಂತ್​ (10) ಹಾಗು ವಿಘ್ನೇಶ್ (9) ಎಂದು ಗುರುತಿಸಲಾಗಿದೆ.

ಮನೆ‌ ಕಟ್ಟುವುದಕ್ಕೆ ಕಾಲಮ್ ಹಾಕಿ ತಗ್ಗು ತೋಡಲಾಗಿದೆ. ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ತಗ್ಗುಗುಂಡಿ‌ ಜಲಾವೃತವಾಗಿತ್ತು. ಮಳೆನೀರು ತುಂಬಿದ ಗುಂಡಿಗೆ ಈ ಬಾಲಕರು ಇಳಿದಿದ್ದಾರೆ. ಈ ಸಂದರ್ಭದಲ್ಲಿ ದುರಂತ ಸಂಭವಿಸಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.