ಕರ್ನಾಟಕ

karnataka

ಕಾಲುವೆ ವಿವಾದ: ಭದ್ರಾಪುರದಲ್ಲಿ ವ್ಯಕ್ತಿ ಕೊಲೆ, ನಾಲ್ವರಿಗೆ ಗಾಯ

By

Published : Mar 6, 2020, 10:19 AM IST

ಶಿವಮೊಗ್ಗದಲ್ಲಿ ಜಮೀನಿಗೆ ನೀರು ಹರಿಸಿದ ವಿಚಾರವಾಗಿ ಒಬ್ಬನ ಕೊಲೆ ಮಾಡಿರುವ ಘಟನೆ ಜರುಗಿದೆ.

ಓರ್ವನ ಕೊಲೆ
ಓರ್ವನ ಕೊಲೆ

ಶಿವಮೊಗ್ಗ:ಜಮೀನಿಗೆ ನೀರು ಹರಿಸುವ ಕಾಲುವೆ ವಿಚಾರವಾಗಿ ಒಬ್ಬನ ಕೊಲೆ ಮಾಡಿರುವ ಘಟನೆ, ಜಿಲ್ಲೆಯ ಭದ್ರಾಪುರದಲ್ಲಿ ನಡೆದಿದೆ.

ಭದ್ರಾಪುರದ ಕರಿಯಪ್ಪ(65) ಕೊಲೆಯಾದ ವ್ಯಕ್ತಿ. ಕರಿಯಪ್ಪ ನಿನ್ನೆ ರಾತ್ರಿ ತಮ್ಮ ಜಮೀನಿಗೆ ನೀರು ಹರಿಸಲು ಪುತ್ರನೊಂದಿಗೆ ಹೋದಾಗ ಅದೇ ಗ್ರಾಮದ ಪರಮೇಶಪ್ಪ, ರಮೇಶ್, ನಿಂಗಣ್ಣ, ವಿಕ್ಕಿ ಹೀಗೆ ಹತ್ತು ಜನ ಗುದ್ದಲಿ, ರಾಡ್​​​​ಗಳಿಂದ ಹಲ್ಲೆ ನಡೆಸಿದ್ದಾರೆ. ಕರಿಯಪ್ಪನ ತಲೆಗೆ ಜೋರಾಗಿ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ‌. ಪುತ್ರ ನಾಗರಾಜ್​ಗೆ ತಲೆ ಹಾಗೂ ಕೈ ಕಾಲಿಗೆ ಹಲ್ಲೆ ಮಾಡಿದ್ದಾರೆ. ಇನ್ನು ಕರಿಯಪ್ಪನ ಸಹಾಯಕ್ಕೆ ಬಂದವರ ಮೇಲೂ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದವರನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಕುರಿತು 10 ಜನರ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details