ಕರ್ನಾಟಕ

karnataka

ಕೊಡಗಿನಲ್ಲಿ ಮತ್ತೆ ಗುಂಡಿನ ಸದ್ದು: ಹೆಂಡತಿ, ಸಂಬಂಧಿಗೆ ಗುಂಡಿಕ್ಕಿ‌ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

By

Published : Oct 15, 2021, 9:54 PM IST

Updated : Oct 15, 2021, 10:52 PM IST

ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕಿರಗೂರಿನಲ್ಲಿ ಜಮೀನು ವಿವಾದ ಹಾಗೂ ಅಡಕೆ ಬೆಳೆ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳ ಮೂವರ ಕೊಲೆಯಲ್ಲಿ ಅಂತ್ಯವಾಗಿದೆ. ವ್ಯಕ್ತಿಯೊಬ್ಬ ಸಂಬಂಧಿ ಹಾಗೂ ಅಡ್ಡ ಬಂದ ಹೆಂಡತಿಗೆ ಗುಂಡಿಕ್ಕಿ ಕೊಂದು ಹಾಕಿದ್ದಾನೆ. ಕೊನೆಗೂ ತಾನೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

Man fire on his wife , brother and committed suicide in Kodagu
ಹೆಂಡತಿ, ತಮ್ಮನ್ನು ಗುಂಡಿಕ್ಕಿ‌ಕೊಂದು ವ್ಯಕ್ತಿ ಆತ್ಮಹತ್ಯೆ

ಮಡಿಕೇರಿ(ಕೊಡಗು): ಅಡಕೆ ಬೆಳೆ ವಿಚಾರಕ್ಕೆ ಉಂಟಾದ ಕಲಹದಲ್ಲಿ ಸಂಬಂಧಿ ಹಾಗೂ ಹೆಂಡತಿಗೆ ಗುಂಡಿಟ್ಟು, ಕೊನೆಗೂ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಕೊಡಗಿನಲ್ಲಿ ಮತ್ತೆ ಗುಂಡಿನ ಸದ್ದು: ಹೆಂಡತಿ, ಸಂಬಂಧಿಗೆ ಗುಂಡಿಕ್ಕಿ‌ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಪೊನ್ನಂಪೇಟೆ ತಾಲೂಕಿನ ಕಿರಗೂರಿನಲ್ಲಿ ಇಂತದ್ದೊಂದು ಭಯಾನಕ ಘಟನೆ ನಡೆದಿದೆ. ಕಿರಗೂರು ಗ್ರಾಮದ ಮಧು (42) ಮೃತ ದುರ್ದೈವಿ. ಇನ್ನು, ಮಧುಗೆ ಗುಂಡಿಡುವಾಗ ತಡೆಯಲು ಹೋದ ಆತನ ಪತ್ನಿ ಯಶೋಧಾ ಮೇಲೂ ಸಾಗರ್​​ ಸೋಮಯ್ಯ ಎಂಬುವರು ಗುಂಡು ಹಾರಿಸಿದ್ದಾರೆ. ಇದರ ಪರಿಣಾಮ ಯಶೋಧಾ ಸ್ಥಿತಿ ಗಂಭೀರವಾಗಿತ್ತು, ಈ ಹಿನ್ನೆಲೆಯಲ್ಲಿ ಅವರನ್ನು ಮೈಸೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ನಡುದಾರಿಯಲ್ಲೇ ಯಶೋಧಾ ಕೊನೆಯುಸಿರೆಳೆದಿದ್ದಾಳೆ.

ಕೊಡಗಿನಲ್ಲಿ ಮತ್ತೆ ಗುಂಡಿನ ಸದ್ದು: ಹೆಂಡತಿ, ಸಂಬಂಧಿಗೆ ಗುಂಡಿಕ್ಕಿ‌ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಆರೋಪಿ

ಘಟನೆ ಬಳಿಕ ಆರೋಪಿ ಸಾಗರ್ ತನ್ನ ಮನೆ ಪಕ್ಕದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದುರ್ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಡಗಿನಲ್ಲಿ ಮತ್ತೆ ಗುಂಡಿನ ಸದ್ದು: ಹೆಂಡತಿ, ಸಂಬಂಧಿಗೆ ಗುಂಡಿಕ್ಕಿ‌ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಏನಿದು ಪ್ರಕರಣ?

ಗುಂಡು ಹೊಡೆಸಿಕೊಂಡು ಮೃತರಾಗಿರುವ ಮಧು ತನ್ನ ಜಾಗದಲ್ಲಿ ಅಡಕೆ ಕೊಯ್ಯುತ್ತಿದ್ದನು. ಈ ವೇಳೆ ಸ್ಥಳಕ್ಕೆ ಬಂದ ಮಧುವಿನ ದಾಯಾದಿ ಸಾಗರ್, ನನ್ನ ಮರದಿಂದ ಅಡಕೆ‌ ಕುಯ್ದಿದ್ಯಾ ಎಂದು ತಗಾದೆ ತೆಗೆದು ಗಲಾಟೆ ಆರಂಭಿಸಿದ್ದನು.

ಈ ವೇಳೆ ಮಧು ಹಾಗೂ ಸಾಗರ್​ ನಡುವೆ ಮಾತಿಗೆ ಮಾತು ಬೆಳೆದು ಸಾಗರ್‌ ತನ್ನ ಕೈಯಲ್ಲಿದ್ದ ಕೋವಿಯಿಂದ ಮಧುವಿನ ಮೇಲೆ ಗಂಡು ಹಾರಿಸಲು ಮುಂದಾಗಿದ್ದಾನೆ. ಇದನ್ನು ಗಮನಿಸಿದ ಸಾಗರ್ ಹೆಂಡತಿ ಯಶೋಧಾ, ಇದನ್ನು ತಡೆಯಲು ಮುಂದಾಗಿದ್ದಾರೆ. ಈ ವೇಳೆ ಯಶೋಧಾಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ನಂತರ ಇವರನ್ನು ಚಿಕಿತ್ಸೆಗೆ ಮೈಸೂರಿಗೆ ಕೊಂಡೊಯ್ಯುವ ವೇಳೆ ದಾರಿಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.

ಇತ್ತ ಹೆಂಡತಿಗೆ ಗುಂಡು ತಗುಲಿದ ಮರುಕ್ಷಣ ಸಾಗರ್, ಮಧುವಿನ ಮೇಲೆ ಫೈರಿಂಗ್​ ಮಾಡಿದ್ದಾನೆ, ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಿಂದ ಗಾಬರಿಗೊಂಡ ಸಾಗರ್​, ಮನೆ ಪಕ್ಕದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಮೂಲಕ ಕೇವಲ ಒಂದು ಕ್ವಿಂಟಾಲ್ ಅಡಕೆಗೆ ಮೂರು ಪ್ರಾಣಗಳು ಬಲಿಯಾಗಿವೆ.

ಆತ್ಮಹತ್ಯೆ ಮಾಡಿಕೊಂಡ ಸಾಗರ್​ ಹಾಗೂ ಮೃತ ಯಶೋಧಾ ದಂಪತಿಗೆ ಓರ್ವ ಮಗಳಿದ್ದು, ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಇದೀಗ ತಂದೆ-ತಾಯಿಯನ್ನು ಕಳೆದುಕೊಂಡು ಈಕೆ ಅನಾಥವಾಗಿದ್ದಾಳೆ. ಇತ್ತ ಮಧುಗೆ ಹೆಂಡತಿ ಹಾಗೂ ಐದು ವರ್ಷದ ಮಗುವಿದೆ.

Last Updated :Oct 15, 2021, 10:52 PM IST

ABOUT THE AUTHOR

...view details