ಕರ್ನಾಟಕ

karnataka

ಫ್ಲೈಓವರ್ ನಿರ್ಮಾಣಕ್ಕೆ ಅಪಸ್ವರ, ಶಾಸಕ ಬೆಲ್ಲದ್ ಹಾಗೂ ತಜ್ಞರ ನೇತೃತ್ವದಲ್ಲಿ ಸಮಿತಿ ರಚನೆ - ಪ್ರಲ್ಹಾದ್ ಜೋಶಿ

By

Published : Sep 25, 2021, 6:43 PM IST

Pralhad joshi
ಪ್ರಹ್ಲಾದ್ ಜೋಶಿ

ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್​ಗೆ ಜೋಶಿ ಕಿಡಿಕಾರಿದರು. ಅನೇಕ ಬಾರಿ ಬಂದ್​ ನಡೆಸಿದ್ದಾರೆ. ಕೃಷಿ ಕಾಯ್ದೆಗಳು ರೈತರ ವಿರೋಧಿಯಲ್ಲ. ಪಂಜಾಬ್ ಹೊರತುಪಡಿಸಿ ಎಲ್ಲಿಯೂ ವಿರೋಧ ಮಾಡುತ್ತಿಲ್ಲ. ಬಂದ್​ಗೆ ಕರೆ ನೀಡಿದವರಿಗೆ ದೇವರು ಒಳ್ಳೆ ಬುದ್ಧಿ ನೀಡಲಿ..

ಹುಬ್ಬಳ್ಳಿ :ಫ್ಲೈ ಓವರ್​​​ ನಿರ್ಮಾಣದ ಕುರಿತು ಇಂದು ಸ್ಥಳೀಯರ ಹಾಗೂ ತಜ್ಞರ ಸಲಹೆ, ಸೂಚನೆಗಳನ್ನು ಪಡೆದಿದ್ದೇವೆ. ಶಾಸಕ ಅರವಿಂದ ಬೆಲ್ಲದ್ ಹಾಗೂ ತಜ್ಞರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗುವುದು ಎಂದು ಕೇಂದ್ರ ಗಣಿ-ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಫ್ಲೈ ಓವರ್‌ ಕುರಿತಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯೆ ನೀಡಿರುವುದು..

ನಗರದಲ್ಲಿ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಚೆನ್ನಮ್ಮ ವೃತ್ತದಲ್ಲಿ ಫ್ಲೈಓವರ್ ನಿರ್ಮಾಣದ ಬಗ್ಗೆ ಸ್ಥಳೀಯರ ಸಲಹೆ, ದೂರುಗಳಿದ್ದರೆ ಅವುಗಳನ್ನು ಪರಿಗಣಿಸಲಾಗುವುದು. ನಿರ್ಮಾಣ ಕುರಿತಂತೆ ಜನವರಿಯಿಂದ ಅನೇಕ ಸಲಹೆಗಳು ಬಂದಿವೆ. ಅವುಗಳನ್ನೆಲ್ಲ ಪರಿಗಣಿಸಲಾಗುವುದು ಎಂದರು.

ಭಾರತ್​​ ಬಂದ್​ಗೆ ಆಕ್ರೋಶ :ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್​ಗೆ ಜೋಶಿ ಕಿಡಿಕಾರಿದರು. ಅನೇಕ ಬಾರಿ ಬಂದ್​ ನಡೆಸಿದ್ದಾರೆ. ಕೃಷಿ ಕಾಯ್ದೆಗಳು ರೈತರ ವಿರೋಧಿಯಲ್ಲ. ಪಂಜಾಬ್ ಹೊರತುಪಡಿಸಿ ಎಲ್ಲಿಯೂ ವಿರೋಧ ಮಾಡುತ್ತಿಲ್ಲ. ಬಂದ್​ಗೆ ಕರೆ ನೀಡಿದವರಿಗೆ ದೇವರು ಒಳ್ಳೆ ಬುದ್ಧಿ ನೀಡಲಿ. ಕಾಯ್ದೆ ವಿಚಾರದಲ್ಲಿ ಸ್ವಾಮಿನಾಥನ್ ​ಅವರು ವರದಿ ನೀಡಿದ್ದಾರೆ. ಬಂದ್ ಕರೆಯಲ್ಲಿ ರೈತ ಮುಖಂಡರು ಇಲ್ಲ ಎಂದರು.

ನಮ್ಮ ಸರ್ಕಾರದಲ್ಲಿ ಬೆಲೆ ಏರಿಕೆ ಆಗಿಲ್ಲ :ಬೆಲೆ ಏರಿಕೆ ವಿಚಾರದ ಬಗ್ಗೆ ಮೊನ್ನೆ ನೋಟಿಸ್ ನೀಡಿ‌ ಚರ್ಚೆ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ಸರ್ಕಾರ ಇದ್ದಾಗ ಪ್ರತಿವರ್ಷ ಏರಿಕೆ ಆಗಿದೆ. ಮೋದಿ‌ ಸರ್ಕಾರದಲ್ಲಿ ಕಳೆದ 7 ವರ್ಷದಲ್ಲಿ ಬೆಲೆ ಏರಿಕೆ ಆಗಿಲ್ಲ. ಈಗ ಹಲವು ವಿಚಾರದಲ್ಲಿ ಬೆಲೆ ಇಳಿಕೆ ಆಗುತ್ತಿದೆ. ಕೋವಿಡ್ ಹಿನ್ನೆಲೆ ಕೆಲವು ಬೆಲೆ ಏರಿಕೆ ಆಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ‌ ಸಹ ಕಡಿಮೆ ಆಗುತ್ತದೆ. ಆ ನಂಬಿಕೆ ಇಟ್ಟುಕೊಂಡು ನಾವೂ ಕೆಲಸ ಮಾಡುತ್ತಿದ್ದೇವೆ ಎಂದರು.

ಇದನ್ನೂ ಓದಿ: ಸತತ 13 ಗಂಟೆಗಳ ಯಶಸ್ವಿ ಶಸ್ತ್ರಚಿಕಿತ್ಸೆ.. 2.5 ಕೆಜಿ ತೂಕದ ಕ್ಯಾನ್ಸರ್​ ಗಡ್ಡೆ ಹೊರ ತೆಗೆದ ಮಂಗಳೂರು ವೈದ್ಯರು..

ABOUT THE AUTHOR

...view details