ETV Bharat / state

ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ವಾಟಾಳ್ ನಾಗರಾಜ್ ಹೇಳಿದ್ದೇನು: ವಿಡಿಯೋ - Southern Teachers Constituency

author img

By ETV Bharat Karnataka Team

Published : May 16, 2024, 9:54 PM IST

Updated : May 16, 2024, 10:07 PM IST

ಶಿಕ್ಷಕರನ್ನು ಸರ್ಕಾರ ತುಂಬಾ ಹೀನಾಯವಾಗಿ ನಡೆಸಿಕೊಳ್ಳುತ್ತಿದೆ. ಹೆಜ್ಜೆ ಹೆಜ್ಜೆಗೂ ಶಿಕ್ಷಕರು ಅನುಭವಿಸುತ್ತಿರುವಂತಹ ನೋವುಗಳು ಬಹಳ. ಶಿಕ್ಷಕರ ಬಗ್ಗೆ ಹೋರಾಟ ಮಾಡಬೇಕು ಎನ್ನುವುದು ನನ್ನ ಚಿಂತನೆ ಎಂದು ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

Vatal Nagaraj spoke to ETV Bharat
ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಈಟಿವಿ ಭಾರತದೊಂದಿಗೆ ಮಾತನಾಡಿದರು. (Etv Bharat)

ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಈಟಿವಿ ಭಾರತದೊಂದಿಗೆ ಮಾತನಾಡಿದರು. (ETV Bharat)

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ನಾಮಪತ್ರ ಸಲ್ಲಿಸಿದರು. ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ನಾನು ಅಭ್ಯರ್ಥಿಯಾಗಿದ್ದೇನೆ. ಈಗ ತಾನೇ ನಾಮಪತ್ರ ಸಲ್ಲಿಸಿದ್ದೇನೆ. ಶಿಕ್ಷಕರ ಸಮಸ್ಯೆಗಳು ಬಹಳ ಅಗಾಧವಾಗಿವೆ. ಈ ವರೆಗೂ ಅವರ ಸಮಸ್ಯೆ ಪರಿಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಆಗಿಲ್ಲ. ನಾನು ಶಿಕ್ಷಕರ ಬಗ್ಗೆ ಬಹಳ ತೀವ್ರವಾಗಿ, ಅವರ ಸಮಸ್ಯೆ ಬಗ್ಗೆ ಇಡೀ ಕರ್ನಾಟಕ ರಾಜ್ಯದ ಉದ್ದಕ್ಕೂ ಹೋರಾಟ ಮಾಡಬೇಕು ಎನ್ನುವುದು ನನ್ನ ಚಿಂತನೆ ಇದೆ ಎಂದು ತಿಳಿಸಿದರು.

ಶಿಕ್ಷಕರನ್ನು ಸರ್ಕಾರ ತುಂಬಾ ಹೀನಾಯವಾಗಿ ನಡೆಸುತ್ತಾ ಇರುವುದು ಕಾಣುತ್ತಾ ಇದೆ. ಹೆಜ್ಜೆ ಹೆಜ್ಜೆಗೂ ಶಿಕ್ಷಕರು ಅನುಭವಿಸುತ್ತಿರುವಂತಹ ನೋವುಗಳು ಬಹಳ. ಇವತ್ತು ಅವರ ಬಗ್ಗೆ ಪರಿಣಾಮಕಾರಿ ಹೋರಾಟ ಮಾಡಬೇಕು. ಅಂದರೆ ಅದು ವಾಟಾಳ್ ನಾಗರಾಜ್ ಅವರಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.

ನನಗೆ ಮೊದಲ ಪ್ರಾಶಸ್ತ್ಯ ಮತ ನೀಡಿ: ವಿಧಾನ ಪರಿಷತ್​​ನಲ್ಲಿ ಶಿಕ್ಷಕರು ಕಂಡಯರಿದಂತ ಹೋರಾಟವನ್ನು ನೋಡಬಹುದು. ಶಿಕ್ಷಕರ ಪರವಾಗಿ ಇಡೀ ರಾಜ್ಯ ಅದ್ಬುತವಾದ ಹೋರಾಟ ಮಾಡಬೇಕು ಎನ್ನುವುದು ನನ್ನ ಚಿಂತನೆ. ವಿಧಾನ ಪರಿಷತ್ ಮೇಲ್ಮನೆ ಅದರ ಹೆಸರೇ ಮೇಲ್ಮನೆ. ಮೇಲ್ಮನೆಗೆ ಎಷ್ಟೇ ಎತ್ತರಾದವರೂ ಹೋಗಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಿಕ್ಷಕರ ಮಾತುಗಳು ಬಹಳ ಪವಿತ್ರ. ಅವರು ಯಾವುದೇ ಕಾರಣಕ್ಕೂ ತಮ್ಮ ಪಾವಿತ್ರ್ಯತೆಯನ್ನು ಬಿಡಬಾರದು, ಅತ್ಯಂತ ಪ್ರಾಮಾಣಿಕವಾಗಿ, ನಮಗೆ ಅವರ ಮೊದಲ ಪ್ರಾಶಸ್ತ್ಯ ಮತವನ್ನು ಕೊಡಬೇಕು. ಅವರು ಕೊಡುವುದರಿಂದ ರಾಜ್ಯಕ್ಕೆ ಅನುಕೂಲವಾಗುತ್ತೆ, ಶಿಕ್ಷಕರಿಗೆ ಅನುಕೂಲವಾಗುತ್ತೆ. ಶಿಕ್ಷಕರು ಹಿಂದೆ ಎಂದು ಕಂಡರಿಯರಿದ ಹೋರಾಟ ವಿಧಾನ ಪರಿಷತ್​​ನಲ್ಲಿ ತಾವುಗಳು ಕಾಣುತ್ತೀರಿ. ನಾನು ಅತ್ಯಂತ ಗೌರವವಾಗಿ ಪ್ರೀತಿ, ಅಭಿಮಾನದಿಂದ, ಶಿಕ್ಷಕರಲ್ಲಿ ಮನವಿ ಮಾಡುತ್ತೇನೆ. ನಿಮ್ಮ ಮೊದಲ ಪ್ರಾಶಸ್ತ್ಯ ಮತವನ್ನು ವಾಟಾಳ್ ನಾಗರಾಜ್ ಅಂದರೆ ನನಗೆ ಕೊಡಬೇಕು ಎಂದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದರು.

ಪೆನ್ ಡ್ರೈವ್ ಪ್ರಕರಣ ಗೊತ್ತಿಲ್ಲ: ಯಾರು ಅವರು ಆ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ, ಇಲ್ಲಿ ಯಾವ ಡ್ರೈವ್ ಬಗ್ಗೆ ಕೂಡ ಮಾತನಾಡುವ ಆಗಿಲ್ಲ ಎಂದು ತಿಳಿಸಿದರು.

ಇದನ್ನೂಓದಿ:ಎಸ್ಎಸ್ಎಲ್​ಸಿ ಪರೀಕ್ಷೆ-2ಗೆ ನೋಂದಣಿ ದಿನಾಂಕ ಮೇ 19ರ ವರೆಗೆ ವಿಸ್ತರಣೆ - Karnataka School Examination board

Last Updated :May 16, 2024, 10:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.