ಕರ್ನಾಟಕ

karnataka

ಚಿಕ್ಕಮಗಳೂರಲ್ಲಿ ಅಚ್ಚರಿ.. ನೇಣು ಹಾಕಿಕೊಂಡ ವರ್ಷದ ಬಳಿಕ ವ್ಯಕ್ತಿ ಮೃತದೇಹ ಪತ್ತೆ!

By

Published : Jan 16, 2022, 8:41 PM IST

Updated : Jan 16, 2022, 9:05 PM IST

chikkamagaluru
ಚಿಕ್ಕಮಗಳೂರು

ನೇಣಿಗೆ ಶರಣಾಗಿದ್ದ ವ್ಯಕ್ತಿಯ ಮೃತದೇಹ ವರ್ಷದ ಬಳಿಕ ಪತ್ತೆಯಾಗಿರುವ ವಿಚಿತ್ರ ಘಟನೆ ಕಾಫಿನಾಡಿನಲ್ಲಿ ಬೆಳಕಿಗೆ ಬಂದಿದೆ. ಜಯಲಕ್ಷ್ಮಿ ಹಾಲ್​ನ ಮಾಲೀಕರಾದ ಚಂದ್ರ ಮೋಹನ್ ಅವರ ಹಳೆಯ ಮನೆಯಲ್ಲಿ ಈ ಘಟನೆ ನಡೆದಿದೆ.

ಚಿಕ್ಕಮಗಳೂರು:ಜಿಲ್ಲೆಯ ಕೊಪ್ಪ ಪಟ್ಟಣದ ಟಿ.ಎಂ ರಸ್ತೆಯಲ್ಲಿರುವ ಹಾಳು ಬಿದ್ದ ಮನೆಯೊಂದರಲ್ಲಿ ವ್ಯಕ್ತಿಯೊಬ್ಬ ಒಂದು ವರ್ಷದ ಹಿಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಎನ್ನಲಾಗಿದ್ದು, ಮನೆಯ ಮಾಲೀಕ ಮನೆಯ ದುರಸ್ತಿ ಸಲುವಾಗಿ ಮನೆ ನೋಡಲು ತೆರಳಿದಾಗ ಮೃತದೇಹ ಪತ್ತೆಯಾಗಿದೆ.

ಚಿಕ್ಕಮಗಳೂರಿನಲ್ಲಿ ಮೃತದೇಹ ಪತ್ತೆ

ಜಯಲಕ್ಷ್ಮಿ ಹಾಲ್​ನ ಮಾಲೀಕರಾದ ಚಂದ್ರ ಮೋಹನ್ ಅವರ ಹಳೆಯ ಮನೆಯಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿಯ ಗುರುತು ಈವರೆಗೂ ಪತ್ತೆಯಾಗಿಲ್ಲ.

ಒಂದು ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಬಳಿಕ ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಓದಿ:ರಾಜ್ಯದಲ್ಲಿಂದು 34,047 ಮಂದಿಗೆ ಕೊರೊನಾ, ಸೋಂಕಿನಿಂದ 13 ಸಾವು: ಪಾಸಿಟಿವಿಟಿ ರೇಟ್​ ಶೇ.19..!

Last Updated :Jan 16, 2022, 9:05 PM IST

ABOUT THE AUTHOR

...view details