ಚಾಮರಾಜನಗರ: ಇಂದು ಸುರಿದ ಮಳೆಗೆ ಮನೆಯ ಗೋಡೆಯ ಕುಸಿದು ಬಿದ್ದಿದ್ದು, ಸ್ವಲ್ಪದರಲ್ಲಿಯೇ ವೃದ್ಧೆಯೊಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಲೂಕಿನ ಬಂಡಿಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮದ ಮಹಾದೇವಮ್ಮ ಎಂಬ ಮುದುಕಿ ಅಪಾಯದಿಂದ ಪಾರಾಗಿದ್ದಾರೆ.
ಮನೆಯಲ್ಲಿ ನೀರಿಲ್ಲದಿದ್ದರಿಂದ ಬಾಯಾರಿಕೆಯೆಂದು ಮಳೆಯಲ್ಲೇ ನೀರು ತರಲು ಹೋದ ವೇಳೆ, ಪಕ್ಕದ ಮನೆಯ ಗೋಡೆ ಕುಸಿದು ಬಿದ್ದಿದ್ದರಿಂದ ಇವರ ಮನೆಯ ಗೋಡೆಯೂ ಬಿದ್ದಿದೆ ಎಂದು ತಿಳಿದು ಬಂದಿದೆ.