ಕರ್ನಾಟಕ

karnataka

ಅಟ್ಟಾಡಿಸಿಕೊಂಡು ಬಂದ ನಾಯಿಗಳಿಂದ ಜಿಂಕೆಗಳನ್ನು ರಕ್ಷಿಸಿದ ಗ್ರಾಮಸ್ಥರು

By

Published : Apr 11, 2020, 6:26 PM IST

ಅಟ್ಟಿಸಿಕೊಂಡು ಬಂದ ನಾಯಿಗಳಿಂದ ಎರಡು ಜಿಂಕೆಗಳನ್ನು ರಕ್ಷಿಸಿದ ಗ್ರಾಮಸ್ಥರು, ಅರಣ್ಯ ಇಲಾಖೆ ಸುಪರ್ದಿಗೆ ನೀಡಿದರು.

protection-of-deer-from-dog-attacks
ಜಿಂಕೆಗಳನ್ನು ರಕ್ಷಿಸಿದ ಗ್ರಾಮಸ್ಥರು

ಮೈಸೂರು:ಕಾಡಿನಿಂದ ಆಹಾರ ಅರಸಿ ನಾಡಿಗೆ ಬಂದು ನಾಯಿಗಳ ದಾಳಿಗೆ ಸಿಲುಕಿದ್ದ ಎರಡು ಜಿಂಕೆಗಳನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ವೀರನಹೊಸಹಳ್ಳಿ ವ್ಯಾಪ್ತಿಗೆ ಎರಡು ಜಿಂಕೆಗಳು ಆಹಾರ ಅರಸಿಕೊಂಡು ಬಂದಿದ್ದವು. ಅಲ್ಲಿನ ಹೊಸೂರು ಗ್ರಾಮದ ಶಿವರಾಜು ಎಂಬುವರ ಜಮೀನಿಗೆ ಬಂದಿದ್ದವು.

ಜಿಂಕೆಗಳನ್ನು ರಕ್ಷಿಸಿದ ಗ್ರಾಮಸ್ಥರು

ಜಿಂಕೆಗಳ ಮೇಲೆ ದಾಳಿ ನಡೆಸಿದ ನಾಯಿಗಳು, ಅಟ್ಟಿಸಿಕೊಂಡು ಗ್ರಾಮದೊಳಗೆ ಬಂದಿವೆ. ಆಗ ಗ್ರಾಮಸ್ಥರು ಬೀದಿ ನಾಯಿಗಳನ್ನು ಓಡಿಸಿ ಜಿಂಕೆಗಳನ್ನು ರಕ್ಷಿಸಿದ್ದಾರೆ. ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಜಿಂಕೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳ ತಮ್ಮ ಸುಪರ್ದಿಗೆ ಪಡೆದಿದ್ದಾರೆ.

ABOUT THE AUTHOR

...view details