ಕರ್ನಾಟಕ

karnataka

ಮೋಹನ್ ಭಾಗವತ್ ರಾಷ್ಟ್ರಪಿತ ಎಂದಿದ್ದ ಇಲ್ಯಾಸಿ​: ಶಿರಚ್ಛೇದ ಮಾಡುವುದಾಗಿ ಬೆದರಿಕೆ ಕರೆ

By

Published : Sep 30, 2022, 1:23 PM IST

ಪೊಲೀಸ್ ಮೂಲಗಳ ಪ್ರಕಾರ, ಸೆಪ್ಟೆಂಬರ್ 23 ರಂದು ಇಲ್ಯಾಸಿಗೆ ಇಂಗ್ಲೆಂಡ್‌ನಿಂದ ಬಂದ ದೂರವಾಣಿ ಕರೆಯಿಂದ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.

All India Imam organization chief Dr Umer Ahmed Ilyasi
ಉಮರ್ ಅಹ್ಮದ್ ಇಲ್ಯಾಸಿ

ನವದೆಹಲಿ:ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ರಾಷ್ಟ್ರಪಿತ ಎಂದು ಕರೆದಿದ್ದಕ್ಕಾಗಿ ಆಲ್ ಇಂಡಿಯಾ ಇಮಾಮ್ ಆರ್ಗನೈಸೇಷನ್‌ನ ಮುಖ್ಯಸ್ಥ ಇಮಾಮ್ ಡಾ. ಉಮರ್ ಅಹ್ಮದ್ ಇಲ್ಯಾಸಿ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ.

ಸೆಪ್ಟೆಂಬರ್ 23 ರಂದು ಇಂಗ್ಲೆಂಡಿನಿಂದ ಫೋನ್ ಕರೆ ಬಂದಿದೆ. ಕರೆಯಲ್ಲಿ ತಲೆ ಕಡಿದು ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತಿಲಕ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

"ನಾನು ನನ್ನ ಮಾತನ್ನು ಹಿಂತೆಗೆದುಕೊಳ್ಳುವುದಿಲ್ಲ. ನಾನು ಮತಾಂಧರಿಗೆ ಹೆದರುವುದಿಲ್ಲ" ಎಂದು ಇಲ್ಯಾಸಿ ಇದೇ ವೇಳೆ ಹೇಳಿದ್ದಾರೆ.

ಇದನ್ನೂ ಓದಿ: ಮೋಹನ್​ ಭಾಗವತ್​ ರಾಷ್ಟ್ರಪಿತ, ರಾಷ್ಟ್ರ ಋಷಿ ಇದ್ಧಂತೆ: ಇಮಾಮ್​ಗಳ ಮುಖ್ಯಸ್ಥರ ಬಣ್ಣನೆ


ABOUT THE AUTHOR

...view details