Agnipath Protest: ಶಾಸಕಿ ನಿಂಬಾಳ್ಕರ್ ಎದುರೇ ಡಿಪ್ಸ್ ಹೊಡೆದು ಯುವಕರ ವಿಭಿನ್ನ ಪ್ರತಿಭಟನೆ

By

Published : Jun 18, 2022, 3:54 PM IST

thumbnail

ಬೆಳಗಾವಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆ ವಿರೋಧಿಸಿ ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಕೆಲ ಸೇನಾ ಆಕಾಂಕ್ಷಿ ಯುವಕರು ಡಿಪ್ಸ್ ಹೊಡೆದು ವಿಭಿನ್ನವಾಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ನಗರದ ಮಲಪ್ರಭಾ ಕ್ರೀಡಾ ಮೈದಾನದಿಂದ‌ ತಹಶೀಲ್ದಾರ್ ಕಚೇರಿವರೆಗೆ ರ್‍ಯಾಲಿ ನಡೆಸಲಾಯಿತು. ಈ ವೇಳೆ ಕೆಲ ಯುವಕರು ಡಿಪ್ಸ್ ಹೊಡೆಯುವ ಮೂಲಕ ವಿಭಿನ್ನವಾಗಿ ಪ್ರತಿಭಟಿಸಿದರು.‌ ಖಾನಾಪೂರ ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.