ಕೊರಗಜ್ಜನ ಆದಿಸ್ಥಳ ಕುತ್ತಾರಿಗೆ ಶಿವಣ್ಣ ಭೇಟಿ.. ಪಣಂಬೂರು ಕಡಲ ಕಿನಾರೆಯಲ್ಲಿಂದು 'ವೇದ' ಪ್ರಮೋಶನ್

By

Published : Dec 10, 2022, 2:57 PM IST

Updated : Feb 3, 2023, 8:35 PM IST

thumbnail

ಕುತ್ತಾರು (ದಕ್ಷಿಣ ಕನ್ನಡ): ಕೊರಗಜ್ಜನ ಆದಿಸ್ಥಳ ಕುತ್ತಾರು ಕ್ಷೇತ್ರಕ್ಕೆ ಇಂದು ನಟ ಶಿವ ರಾಜ್​ಕುಮಾರ್ ಕುಟುಂಬ ಸಮೇತರಾಗಿ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ವೇದ ಚಿತ್ರದ ಪ್ರಮೋಷನ್​ ಸಲುವಾಗಿ ಶಿವ ರಾಜ್​​ಕುಮಾರ್ ಹಾಗು ಚಿತ್ರತಂಡ ಮಂಗಳೂರಿಗೆ ಆಗಮಿಸಿದೆ. ಸಂಜೆ ಪಣಂಬೂರು ಕಡಲಕಿನಾರೆಯಲ್ಲಿ ವೇದ ಚಿತ್ರದ ಪ್ರಮೋಶನ್ ನಡೆಯಲಿದೆ. ಈ ಹಿನ್ನೆಲೆ ಶಿವ ರಾಜ್​​ಕುಮಾರ್ ಜೊತೆ ಚಿತ್ರತಂಡ ಕೂಡ ಕುತ್ತಾರಿಗೆ ಭೇಟಿ ನೀಡಿತ್ತು. ಇದಕ್ಕೂ ಮುನ್ನ ಶಿವರಾಜ್​ಕುಮಾರ್ ದಂಪತಿ ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯ ಕ್ಷೇತ್ರಗಳಿಗೂ ಭೇಟಿ ನೀಡಿದ್ದರು.

Last Updated : Feb 3, 2023, 8:35 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.