ಸಾಲ ಕೊಟ್ಟವನಿಂದ ಕಿರುಕುಳ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

By

Published : Mar 3, 2021, 3:23 PM IST

thumbnail

ಕೊಯಮತ್ತೂರು (ತಮಿಳುನಾಡು): ಸಾಲ ನೀಡಿದ್ದ ವ್ಯಕ್ತಿ ನೀಡಿರುವ ಕಿರುಕುಳ ತಾಳಲಾರದೇ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದ್ದು, ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿಜಯ್​ಕುಮಾರ್​ ಎಂಬ ವ್ಯಕ್ತಿ ಜಯಪ್ರಕಾಶ್​​ ಅವರಿಂದ 20 ಸಾವಿರ ರೂ. ಸಾಲ ಪಡೆದುಕೊಂಡಿದ್ದರು. ಮೂರು ತಿಂಗಳ ನಂತರ 11 ಸಾವಿರ ರೂ ಹಿಂದುರುಗಿಸಿದ್ದಾನೆ. ಉಳಿದ ಹಣ ಪಾವತಿ ಮಾಡುವಂತೆ ಮೇಲಿಂದ ಮೇಲೆ ಬೆದರಿಕೆ ಹಾಗೂ ಕಿರುಕುಳ ನೀಡಿದ್ದರಿಂದ ವಿಜಯ್​ ಪ್ರಕಾಶ್​ ಬೆಂಕಿ ಹಚ್ಚಿಕೊಂಡು ಜೀವಂತ ಆತ್ಮಹತ್ಯೆ ಮಾಡಿಕೊಳ್ಳುವ ಯತ್ನ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ವ್ಯಕ್ತಿಗೆ ಇದೀಗ ಕೊಯಮತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.