ದಿಢೀರ್ ದೆಹಲಿಗೆ ಹಾರಿದ ಬಿಎಸ್​ವೈ.. ಕೇಂದ್ರದಿಂದ ಉತ್ತಮ ಬಜೆಟ್ ಎಂದ ಮಾಜಿ ಸಿಎಂ

By

Published : Feb 1, 2023, 12:37 PM IST

Updated : Feb 3, 2023, 8:39 PM IST

thumbnail

ದೇವನಹಳ್ಳಿ(ಬೆಂಗಳೂರು): ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿದರು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 11.45ರ ವಿಮಾನದಲ್ಲಿ ಬಿಎಸ್​ವೈ ದೆಹಲಿಗೆ ಹೊರಟರು. ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಎಲ್ಲರ ನಿರೀಕ್ಷೆಯಿರುವುದು ಕೇಂದ್ರದಿಂದ ಬಜೆಟ್​ ಮೇಲೆ. ಈ ಬಾರಿ ಉತ್ತಮ ಬಜೆಟ್ ಮಂಡನೆಯಾಗುತ್ತದೆ. ನೂರಕ್ಕೆ ನೂರರಷ್ಟು ಸಾಮಾನ್ಯ ಜನರಿಗೆ ಅನುಕೂಲವಾಗುವ ಬಜೆಟ್ ಅನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿದ್ದಾರೆ. ಈ ಬಜೆಟ್ ಎಲ್ಲರಿಗೂ ಅನುಕೂಲವಾಗುತ್ತದೆ ಎಂಬ ನಿರೀಕ್ಷೆ ನನಗೂ ಇದೆ" ಎಂದು ಯಡಿಯೂರಪ್ಪ ತಿಳಿಸಿದರು. 

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.