ETV Bharat / state

ರಸ್ತೆ ಅಪಘಾತದಲ್ಲಿ ಇಬ್ಬರು ಸವಾರರು ಸಾವು: ಕೆಲಸಕ್ಕೆ ತೆರಳಿದವರು ಮರಳಿ​ ಬರಲೇ ಇಲ್ಲ!

author img

By

Published : Jan 16, 2020, 5:49 PM IST

Collision between two bikes, Collision between two bikes in vijayapura, two riders died, two riders died in Vijayapura road accident, Vijayapura road accident news, ಎರಡು ಬೈಕ್​ಗಳ ಮಧ್ಯೆ ಡಿಕ್ಕಿ, ವಿಜಯಪುರದಲ್ಲಿ ಎರಡು ಬೈಕ್​ಗಳ ಮಧ್ಯೆ ಡಿಕ್ಕಿ, ಇಬ್ಬರು ಸವಾರರು ಸಾವು, ವಿಜಯಪುರ ರಸ್ತೆ ಅಪಘಾತದಲ್ಲಿ ಇಬ್ಬರು ಸವಾರರು ಸಾವು, ವಿಜಯಪುರ ರಸ್ತೆ ಅಪಘಾತ ಸುದ್ದಿ,
ವಿಜಯಪುರ ರಸ್ತೆ ಅಪಘಾತದಲ್ಲಿ ಇಬ್ಬರು ಸವಾರರು ಸಾವು

ಬೈಕ್​ಗಳ ಮಧ್ಯೆ ಡಿಕ್ಕಿ ಸಂಭವಿಸಿ ಇಬ್ಬರು ಸವಾರರು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ವಿಜಯಪುರ: ಎರಡು ಬೈಕ್‌​ಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತಾಳಿಕೋಟೆ ಪಟ್ಟಣದ ಬೊಮ್ಮನಹಳ್ಳಿ ರಸ್ತೆಯಲ್ಲಿರುವ ಪುರಸಭೆ ಕಸ ವಿಲೇವಾರಿ ಘಟಕದ ಬಳಿ ನಡೆದಿದೆ.

ಘಟನೆಯಲ್ಲಿ ಇನ್ನೊಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೊಮ್ಮನಹಳ್ಳಿ ಗ್ರಾಮದ ಮುದಕಪ್ಪ ಬಸವರಾಜ ವಿಠ್ಠಲ ಸಿಂಗ್ರಿ, ಮುದ್ದೇಬಿಹಾಳ ವಿದ್ಯಾನಗರ ನಿವಾಸಿ ಸಂತೋಷ ಈರಯ್ಯ ಹಿರೇಮಠ ಘಟನೆಯಲ್ಲಿ ಮೃತಪಟ್ಟವರಾಗಿದ್ದಾರೆ. ಕಲಕೇರಿ ಕೆಇಬಿ ಕಚೇರಿಯಲ್ಲಿ ಲೈನ್‌ಮನ್ ಆಗಿ ಕಾರ್ಯನಿರ್ವಹಿಸುತ್ತಿರುವ ರಾಜು ಮಡಿವಾಳಪ್ಪ ಹಿಪ್ಪರಗಿ ಗಂಭೀರವಾಗಿ ಗಾಯಗೊಂಡಿದ್ದು, ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂಡಸ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ ಸಿಂಗ್ರಿ ಏರ್‌ಟೇಲ್ ಕಂಪನಿಯ ಕಾರ್ಯನಿಮಿತ್ತ ತಾಳಿಕೋಟೆ ಬಸ್ ನಿಲ್ದಾಣದಿಂದ ಮುರ್ಡೇಶ್ವರಕ್ಕೆ ಹೋಗುತ್ತಿದ್ದರು. ಸಂತೋಷ ಹಿರೇಮಠ ಮತ್ತು ರಾಜು ಹಿಪ್ಪರಗಿ ಇಬ್ಬರೂ ಕಲಕೇರಿಗೆ ಹೋಗುವಾಗ ಬೈಕುಗಳ ನಡುವೆ ಡಿಕ್ಕಿ ನಡೆದು ಅಪಘಾತ ಸಂಭವಿಸಿದೆ.

ಸ್ಥಳಕ್ಕೆ ಸಿಪಿಐ ಆನಂದ ವಾಘಮೋಡೆ ಭೇಟಿ ನೀಡಿ ತನಿಖೆ ಕೈಕೊಂಡಿದ್ದಾರೆ. ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ವಿಜಯಪುರ Body:ವಿಜಯಪುರ: ಎರಡು ಬೈಕ್ ಗಳ ಮಧ್ಯೆ ಮುಖಾಮುಖಿಯಾಗಿ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತಾಳಿಕೋಟೆ
ಪಟ್ಟಣದ ಬೊಮ್ಮನಹಳ್ಳಿ ರಸ್ತೆಯಲ್ಲಿರುವ ಪುರಸಭೆ ಕಸ ವಿಲೇವಾರಿ ಘಟಕದ ಬಳಿ ನಡೆದಿದೆ. ಘಟನೆಯಲ್ಲಿ ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೊಮ್ಮನಹಳ್ಳಿ ಗ್ರಾಮದ ಮುದಕಪ್ಪ ಉರ್ಫ ಬಸವರಾಜ ವಿಠ್ಠಲ ಸಿಂಗ್ರಿ, ಮುದ್ದೇಬಿಹಳ ವಿದ್ಯಾನಗರ ನಿವಾಸಿ, ಕಲಕೇರಿ ಕೆಇಬಿಯಲ್ಲಿ ಲೈನಮನ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಂತೋಷ ಈರಯ್ಯ ಹಿರೇಮಠ ಮೃತ ಪಟ್ಟವರಾಗಿದ್ದಾರೆ. ಕೆಇಬಿಯ ಲೈನಮನ್ ರಾಜು ಮಡಿವಾಳಪ್ಪ ಹಿಪ್ಪರಗಿ ಗಂಭೀರವಾಗಿ ಗಾಯಗೊಂಡಿದ್ದು ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಂಡಸ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ ಸಿಂಗ್ರಿ ಏರಟೇಲ್ ಕಂಪನಿಯ ಕಾರ್ಯನಿಮಿತ್ತ ತಾಳಿಕೋಟೆ ಬಸ್ ನಿಲ್ದಾಣದಿಂದ ಮುರ್ಡೇಶ್ವರಕ್ಕೆ ಹೋಗುತ್ತಿದ್ದ. ಸಂತೋಷ ಹಿರೇಮಠ ಮತ್ತು ರಾಜು ಹಿಪ್ಪರಗಿ ಕೂಡಿ ಕಲಕೇರಿಗೆ ಹೋಗುವಾಗ ಮುಖಾ ಮುಖಿ ಡಿಕ್ಕಿಯಾಗಿದೆ. ಸ್ಥಳಕ್ಕೆ ಸಿಪಿಆಯ್ ಆನಂದ ವಾಘಮೋಡೆ ಭೇಟಿ ನೀಡಿ ತನಿಖೆ ಕೈಕೊಂಡಿದ್ದು, ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.