ETV Bharat / state

ಹೊನ್ನಾವರ: ಸಾವಲ್ಲೂ ಒಂದಾದ ಸತಿ-ಪತಿ!

author img

By

Published : Nov 25, 2019, 5:38 PM IST

ಕಾರವಾರದಲ್ಲಿ ಪತಿ ಸಾವನ್ನಪ್ಪಿರುವ ವಿಷಯ ತಿಳಿಯುತ್ತಿದ್ದಂತೆ ತೀವ್ರ ಆಘಾತಕ್ಕೊಳಗಾದ ಪತ್ನಿ ಗಂಟೆಯಲ್ಲೇ ಪ್ರಾಣ ಬಿಟ್ಟ ಘಟನೆ ನಡೆದಿದೆ.

ಸಾವಿನಲ್ಲೂ ಒಂದಾದ ದಂಪತಿ

ಕಾರವಾರ: ಪತಿಯ ಸಾವಿನ ಸುದ್ದಿ ತಿಳಿದು ಆಘಾತಕ್ಕೊಳಗಾದ ಪತ್ನಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಹೊನ್ನಾವರ ತಾಲೂಕಿನ ಹಳದಿಪುರದಲ್ಲಿ ನಡೆದಿದೆ.

ಹಳದಿಪುರದ ವೆಂಕಟೇಶ ಕೊಡಿಯಾ‌ (57) ಹಾಗೂ ಮಾದೇವಿ ಕೊಡಿಯಾ (46) ಒಂದೇ ದಿನ ಇಹಲೋಕ ತ್ಯಜಿಸಿದ ದಂಪತಿ. ಇಂದು ಬೆಳಿಗ್ಗೆ ವೆಂಕಟೇಶ ಅವರಿಗೆ ಎದೆನೋವು ಕಾಣಿಸಿಕೊಂಡ ಕಾರಣ ತಕ್ಷಣ ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿದ್ದ ವೇಳೆ ಅವರು ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ.

ಪತ್ನಿ ಮಾದೇವಿ ಶಿವಮೊಗ್ಗ ಜಿಲ್ಲೆಯ ಸಾಗರದ ತಮ್ಮ ಮಗಳ ಮನೆಯಲ್ಲಿದ್ದರು. ಪತಿ ಮೃತಪಟ್ಟಿರುವ ವಿಷಯವನ್ನು ಆಕೆಗೆ ತಿಳಿಸಿದ ಕೂಡಲೇ ತೀವ್ರ ಆಘಾತಕ್ಕೆ ಒಳಗಾಗಿ ಎದೆನೋವು ಕಾಣಿಸಿಕೊಂಡಿದೆ. ವಿಷಯ ತಿಳಿಸಿದ ಒಂದು ಗಂಟೆಯೊಳೆಗೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಮೂಲಕ ಗಂಡ-ಹೆಂಡತಿ ಸಾವಿನಲ್ಲೂ ಒಂದಾಗಿದ್ದಾರೆ.

Intro:Body:ಗಂಡ ಸಾವನ್ನಪ್ಪಿದ ೧ ಗಂಟೆಯಲ್ಲಿ ಪತ್ನಿಯೂ ಸಾವು.... ಸಾವಿನಲ್ಲೂ ಒಂದಾದ ದಂಪತಿ

ಕಾರವಾರ: ಪತಿಯ ಸಾವಿನ ಸುದ್ದಿ ತಿಳಿದು ಆಘಾತಕ್ಕೊಳಗಾದ ಪತ್ನಿಯೂ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಹೊನ್ನಾವರ ತಾಲ್ಲೂಕಿನ ಹಳದಿಪುರದಲ್ಲಿ ಇಂದು ನಡೆದಿದೆ.
ಹಳದಿಪುರದ ವೆಂಕಟೇಶ ಕೊಡಿಯಾ‌ (೫೭) ಹಾಗೂ ಮಾದೇವಿ ಕೊಡಿಯಾ (೪೬) ಒಂದೇ ದಿನ ಇಹಲೋಕ ತ್ಯಜಿಸಿದ ದಂಪತಿ. ಇಂದು ಬೆಳಿಗ್ಗೆ ವೆಂಕಟೇಶ ಅವರಿಗೆ ಎದೆನೋವು ಕಾಣಿಸಿಕೊಂಡ ಕಾರಣ ತಕ್ಷಣ ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಸಾಗಿಸುತ್ತಿದ್ದರು. ಆದರೆ ಮಾರ್ಗ ಮಧ್ಯದಲ್ಲಿಯೇ ವೆಂಕಟೇಶ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.
ಬಳಿಕ ಈ ವಿಷಯವನ್ನು ಶಿವಮೊಗ್ಗ ಜಿಲ್ಲೆಯ ಸಾಗರದ ಮಗಳ ಮನೆಯಲ್ಲಿದ್ದ ಪತ್ನಿ ಮಾದೇವಿ ಅವರಿಗೆ ತಿಳಿಸಲಾಗಿತ್ತು. ಆದರೆ ಗಂಡನ ಸಾವಿನಿಂದ ತೀವ್ರ ಆಘಾತಕ್ಕೊಳಗಾಗಿದ್ದ ಮಾದೇವಿ ಅವರಿಗೂ ಕೂಡ ಎದೆನೋವು ಕಾಣಿಸಿಕೊಂಡು ಒಂದು ಗಂಟೆಯಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಮೂಲಕ ಗಂಡ ಹೆಂಡತಿ ಇಹಲೋಕ ತ್ಯಜಿಸಿ ಸಾವಿನ್ನಲ್ಲೂ ಒಂದಾದ ಮನಮಿಡಿಯುವ ಘಟನೆ ನಡೆದಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.