ETV Bharat / state

2,000 ಸಾವಿರ ವರ್ಷದಷ್ಟು ಹಳೆಯ ದೊಡ್ಡ ಹುಣಸೆ ಮರಕ್ಕೆ ಮತ್ತೆ ಬಂತು ಜೀವಕಳೆ!

author img

By ETV Bharat Karnataka Team

Published : Nov 28, 2023, 10:02 AM IST

Updated : Nov 28, 2023, 12:43 PM IST

Revival of two thousand year old tree: ಅಂದಾಜು ಎರಡು ಸಾವಿರ ವರ್ಷಗಳಷ್ಟು ಹಿಂದೆ ನೆಡಲಾಗಿದ್ದ ಮರಗಳ ಪೈಕಿ ಒಂದು ಮರ ಇತ್ತೀಚೆಗೆ ಧರೆಗುರುಳಿತ್ತು. ಆ ಮರವನ್ನು ತಜ್ಞರ ಸಲಹೆಯಂತೆ ಮರುನೆಡಲಾಗಿತ್ತು. ಇದೀಗ ಮರದ ಕೊಂಬೆಗಳಲ್ಲಿ ಹೊಸ ಚಿಗುರು ಮೂಡಿದೆ.

Life came back again  2 thousand year old tree  tree that had fallen recent  2 ಸಾವಿರ ವರ್ಷದ ಮರ  ಮರಕ್ಕೆ ಮತ್ತೆ ಬಂದ ಜೀವ  ಎರಡು ಸಾವಿರ ವರ್ಷ  ತಜ್ಞರ ಮಾಹಿತಿಯಂತೆ ಮರು ನೆಡಲಾಗಿ  ಮರ ಮತ್ತೆ ಚಿಗುರೊಡೆ  ದೊಡ್ಡ ಹುಣಸೆ ಮರ  ವಿಶ್ವಪ್ರಸಿದ್ದಿ ಪಡೆದ ಮರ
ಧರೆಗುರುಳಿದ್ದ 2 ಸಾವಿರ ವರ್ಷದ ಮರಕ್ಕೆ ಮತ್ತೆ ಬಂದ ಜೀವಕಳೆ

2 ಸಾವಿರ ವರ್ಷದ ಹುಣಸೆ ಮರಕ್ಕೆ ಜೀವಕಳೆ

ಹಾವೇರಿ: ಜಿಲ್ಲೆಯ ಸವಣೂರು ಪಟ್ಟಣದಲ್ಲಿರುವ ದೊಡ್ಡ ಹುಣಸೆ ಮರಗಳು ವಿಶ್ವಪ್ರಸಿದ್ದಿ ಪಡೆದಿವೆ. ಇಲ್ಲಿನ ಕಲ್ಮಠದ ಆವರದಲ್ಲಿರುವ ಮರಗಳನ್ನು ಸುಮಾರು 2,000 ವರ್ಷಗಳಷ್ಟು ಹಿಂದೆ ನೆಡಲಾಗಿತ್ತು ಎಂದು ಹೇಳಲಾಗುತ್ತಿದೆ. 'ಆಧುನಿಕ ಕಲ್ಪವೃಕ್ಷಗಳು' ಎಂದು ಕರೆಯುವ ಇಲ್ಲಿರುವ ಮೂರು ಮರಗಳಲ್ಲಿ ಒಂದು ಗೆದ್ದಲು ಹಿಡಿದು ಮತ್ತು ಭಾರಿ ಮಳೆಯ ಕಾರಣಗಳಿಂದ ಧರಾಶಾಹಿಯಾಗಿತ್ತು. ಆ ಬಳಿಕ ತಜ್ಞರ ಸಲಹೆಯಂತೆ ಅದನ್ನು ಮತ್ತೆ ನೆಡಲಾಗಿತ್ತು. ಇದೀಗ ಮರದ ಕೊಂಬೆಗಳಲ್ಲಿ ಹೊಸ ಚಿಗುರು ಮೂಡಿದ್ದು, ಮರುಜೀವ ಪಡೆದುಕೊಂಡಿದೆ.

ಈ ಮರ ಕಳೆದ ಜುಲೈನಲ್ಲಿ ಭಾರಿ ಮಳೆ, ಗಾಳಿ ಮತ್ತು ಫಂಗಸ್‌ನಿಂದಾಗಿ ಉರುಳಿ ಬಿದ್ದಿತ್ತು. ಕಲ್ಮಠದ ಸ್ವಾಮೀಜಿ ಸೇರಿದಂತೆ ದೊಡ್ಡ ಹುಣಸೆ ಮರದ ಪ್ರಾಮುಖ್ಯತೆ ತಿಳಿದಿದ್ದ ಸವಣೂರು ಜನರು ಹಾಗು ಪರಿಸರಪ್ರೇಮಿಗಳು ಈ ಕುರಿತು ಆತಂಕ ವ್ಯಕ್ತಪಡಿಸಿದ್ದರು. ಪುರಾತನ ಮರದ ರಕ್ಷಣೆಗೆ ರಾಜ್ಯದ ವಿವಿಧೆಡೆಯಿಂದ ಪರಿಸರಪ್ರೇಮಿಗಳು, ಕೃಷಿ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮುಂದಾಗಿದ್ದರು.

ಕಲ್ಮಠದ ಚೆನ್ನಬಸವ ಶ್ರೀಗಳ ಮುಂದಾಳತ್ವದಲ್ಲಿ ಮರವನ್ನು ಮರುನೆಡಲು ಯೋಜನೆ ರೂಪಿಸಲಾಯಿತು. ಅದರಂತೆ ಪರಿಣಿತರ ಸಲಹೆ ಪಡೆದು ಮರ ನೆಡಲು ಕಾರ್ಯಾಚರಣೆ ನಡೆಯಿತು. ಧಾರವಾಡ ಕೃಷಿ ವಿವಿಧ ವಿಜ್ಞಾನಿಗಳ ಸಮ್ಮುಖದಲ್ಲಿ ಬೆಂಗಳೂರಿನಿಂದ ಸುಮಾರು 450 ಟನ್ ತೂಕ ಸಾಮರ್ಥ್ಯದ ಕ್ರೇನ್ ತರಿಸಿ ಮರು ನೆಡುವ ಕಾರ್ಯಾಚರಣೆಯೂ ನೆರವೇರಿತ್ತು.

ಮರದ ಬುಡದ ಫಂಗಸ್ ತೆಗೆದು ವಿವಿಧ ಕೊಂಬೆಗಳನ್ನು ತುಂಡರಿಸಿ ವಿವಿಧ ಔಷಧ ಲೇಪಿಸಿ ಜುಲೈ 13ರಂದು ಮರು ನೆಡಲಾಗಿತ್ತು. ಈ ರೀತಿ ನೆಟ್ಟ ಮರದ ಬುಡಕ್ಕೆ ಕಾಂಪೋಸ್ಟ್ ಗೊಬ್ಬರವನ್ನೂ ಉಣಿಸಲಾಗಿತ್ತು. ಮರ ಮರುಜೀವ ಪಡೆಯಲೆಂದು ಜನರು ಪ್ರಾರ್ಥನೆ ಸಲ್ಲಿಸಿದ್ದರು. ವಿಜ್ಞಾನಿಗಳ ಶ್ರಮ, ಶ್ರೀಗಳ ಆಶೀರ್ವಾದ ಹಾಗು ಭಕ್ತರ ಹಾರೈಕೆಯಿಂದಾಗಿ ಇದೀಗ ಮರ ಚಿಗುರಲಾರಂಭಿಸಿದೆ. ಸುಮಾರು 3 ತಿಂಗಳು ಕಾಲ ವಿಜ್ಞಾನಿಗಳು ಹೇಳಿದಂತೆ ಮರಕ್ಕೆ ಔಷಧೋಪಚಾರ ನಡೆದಿತ್ತು.

ಮರ ಮರುನೆಡಲು ಶ್ರಮಿಸಿದ ಶ್ರಮಜೀವಿಗಳಿಗಳಿಗೆ ಶ್ರೀಗಳು ಅಭಿನಂದನೆ ಸಲ್ಲಿಸಿದ್ದಾರೆ. ಮರ ಚಿಗುರುಲಾರಂಭಿಸಿರುವ ವಿಚಾರ ತಿಳಿದು ಶಾಲಾ ಮಕ್ಕಳು, ಉಪನ್ಯಾಸಕರು, ಶಿಕ್ಷಕರು ಮಠಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡುತ್ತಿದ್ದಾರೆ.

ಸಂತಸ: "ಸಾಕಷ್ಟು ಪ್ರಾಚೀನತೆ ಹೊಂದಿರುವ ಮರ ಧರೆಗುರುಳಿದಾಗ ದಿಕ್ಕು ತೋಚದಂತಾಗಿತ್ತು. ನಂತರ ಪರಿಸರ ಪ್ರೇಮಿಗಳು ವಿಜ್ಞಾನಿಗಳ ಸಮ್ಮುಖದಲ್ಲಿ ಮರ ಮರುನೆಡಲಾಗಿತ್ತು. ಈ ರೀತಿ ನೆಟ್ಟು ಮೂರು ತಿಂಗಳು ಕಾಲ ಆರೈಕೆ ಮಾಡಿದ್ದರ ಪರಿಣಾಮ ಈಗ ಮರ ಚಿಗುರಲಾರಂಭಿಸಿದೆ. ಇದು ಮನಸ್ಸಿಗೆ ಸಾಕಷ್ಟು ಸಂತಸ ತಂದಿದೆ. ನಾವು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ" ಎಂದು ಸ್ವಾಮೀಜಿ ಅಭಿಪ್ರಾಯಪಟ್ಟರು.

ಸ್ಥಳೀಯ ಕಾಲೇಜಿನ ಪ್ರಾಚಾರ್ಯರು ಪ್ರತಿಕ್ರಿಯಿಸಿ, "ಶ್ರೀಕೃಷ್ಣ ಪರಮಾತ್ಮ ವಿರಾಟನಗರಕ್ಕೆ ಹೋಗುವ ಮುನ್ನ ಈ ಗಿಡ ನೆಟ್ಟಿದ್ದರು. ಈ ಮರಗಳ ಮೂಲ ದಕ್ಷಿಣ ಆಫ್ರಿಕಾ. ಸುಮಾರು ಎರಡು ಸಾವಿರ ವರ್ಷ ಪುರಾತನವಾಗಿವೆ. ಬಾಂಬುಕೇಶಿಯಾ ಎನ್ನುವ ಕುಟುಂಬಕ್ಕೆ ಸೇರಿದ ಮರಗಳು ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿವೆ. ಭಕ್ತರ ಇಷ್ಟಾರ್ಥಗಳನ್ನೂ ಈ ಮರಗಳು ಈಡೇರಿಸುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ" ಎಂದರು.

ಇದನ್ನೂ ಓದಿ: ಡಿಸೆಂಬರ್‌ 1ರಿಂದ ಶಬರಿಮಲೆಗೆ KSRTC ವೋಲ್ವೊ ಬಸ್‌ ಸೇವೆ ಆರಂಭ

Last Updated :Nov 28, 2023, 12:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.