ETV Bharat / state

ಹೆಚ್​ಡಿಕೆಯನ್ನು ಪಕ್ಕಕ್ಕೆ ತಳ್ಳಿ, ರೇವಣ್ಣ ಸಿಎಂ ಆಗ್ಲಿ ಅಂತ ಬಯಸಲ್ಲ: ಭವಾನಿ ರೇವಣ್ಣ

author img

By

Published : May 19, 2019, 10:00 PM IST

ಭವಾನಿ ರೇವಣ್ಣ

ಸಚಿವ ರೇವಣ್ಣ ಅವರಿಗೂ ಸಿಎಂ ಆಗುವ ಅರ್ಹತೆ ಇದೆ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿಕೆಗೆ ರೇವಣ್ಣ ಪತ್ನಿ ಭವಾನಿ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಭಗವಂತನ ಇಚ್ಛೆಗೆ ತಾವು ಬದ್ಧ ಎಂದು ಹೇಳಿದ್ದಾರೆ.

ಹಾಸನ: ಸಚಿವ ರೇವಣ್ಣ ಅವರಿಗೂ ಸಿಎಂ ಆಗುವ ಅರ್ಹತೆ ಇದೆ ಎಂಬ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿಕೆಗೆ ರೇವಣ್ಣ ಪತ್ನಿ ಭವಾನಿ ಇಂದು ಪ್ರತಿಕ್ರಿಯಿಸಿದ್ದಾರೆ.

ನಗರದ ಚೈತನ್ಯ ವೃದ್ಧಾಶ್ರಮದಲ್ಲಿ ಮಾತನಾಡಿದ ಅವರು, ಮೇ 23ರ ಫಲಿತಾಂಶದ ಬಳಿಕ ಸಿದ್ದರಾಮಯ್ಯ ಅವರನ್ನು ಹಾಸನಕ್ಕೆ ಕರೆಸೋಣ. ಈ ಬಗ್ಗೆ ನಂತರ ಮಾತನಾಡೋಣ. ಆದ್ರೆ ನಮ್ಮ ಕುಟುಂಬದ ಸದಸ್ಯರಾದ ಕುಮಾರಸ್ವಾಮಿ ಸಿ.ಎಂ ಆಗಿದ್ದಾರೆ. ಅವರ ಬದಲಿಗೆ ರೇವಣ್ಣ ಸಿಎಂ ಆಗಬೇಕೆಂಬುದನ್ನು ಬಯಸುವುದಿಲ್ಲ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂಬುದು ತಮ್ಮ ಆಸೆ ಎಂದ್ರು.

ಸಿಎಂ ಆಗಿ ಕುಮಾರಸ್ವಾಮಿ ಅವರು ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಅವರನ್ನು ಪಕ್ಕಕ್ಕೆ ತಳ್ಳಿ ರೇವಣ್ಣ ಸಿಎಂ ಆಗಲಿ ಅಂತಾ ನಾವು ಬಯಸಲ್ಲ. ಹೆಚ್​ಡಿಕೆ ಅವರೇ ಸಿಎಂ ಆಗಿದ್ದರೇ ಒಳ್ಳೆಯದು ಎಂದು ಭವಾನಿ ರೇವಣ್ಣ ಹೇಳಿದ್ರು. ಅಲ್ಲದೆ ತಮ್ಮ ಮಗ ಮೂರು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ತಾನೆ ಅಂತ ಜನ ಮಾತಾಡುತ್ತಿದ್ದಾರೆ. ಆದ್ರೆ ಈ ಬಗ್ಗೆ ನಾನೇನೂ ಹೇಳಲಾರೆ. ಕೇವಲ ಇನ್ನು ಐದು ದಿನ ಬಾಕಿ ಇದೆ. ನೋಡೋಣ 23ಕ್ಕೆ ಏನಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಮಾಧ್ಯಮದವರಿಗೆ ಮನವಿ ಮಾಡಿದ ಭವಾನಿ ರೇವಣ್ಣ, ನಾನು‌ ಹೇಳಿದ್ದನ್ನ ಅರೆಬರೆ ತೋರಿಸಬೇಡಿ. ಪೂರ್ತಿ ಪ್ರಸಾರ ಮಾಡಿ ಎಂದು ನಗೆ ಬೀರಿದರು.

ಭವಾನಿ ರೇವಣ್ಣ, ಸಚಿವ ರೇವಣ್ಣ ಪತ್ನಿ
Intro:ರೇವಣ್ಣ ಅವರು ಸಿ.ಎಂ ಆಗ್ತಾರೋ, ಡಿಸಿಎಂ ಆಗ್ತಾರೋ ಅದು ಭಗವಂತನ ಇಚ್ಛೆ. ಆ ಸಮಯ ಬಂದಾಗ ಯಾರೂ ತಡೆಯಲು ಆಗುವುದಿಲ್ಲ ಎಂದು ಭವಾನಿ ಮಾರ್ಮಿಕವಾಗಿ ನುಡಿದ್ರು.

ಸಚಿವ ರೇವಣ್ಣ ಅವರಿಗೂ ಸಿ.ಎಂ ಆಗುವ ಅರ್ಹತೆ ಇದೆ’ ಎಂಬ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿಕೆಗೆ ರೇವಣ್ಣ ಪತ್ನಿ ಭವಾನಿ, ಭಗವಂತನ ಇಚ್ಛೆಗೆ ಬದ್ಧ ಎನ್ನುವ ಮೂಲಕ ಸಿದ್ದು ಹೇಳಿಕೆಗೆ ಧನಿಗೂಡಿಸಿದ್ದಾರೆ.

ನಗರದ ಚೈತನ್ಯ ವೃದ್ಧಾಶ್ರಮದಲ್ಲಿ ಮಾತನಾಡಿದ ಅವರು, ಮೇ 23ರ ಫಲಿತಾಂಶದ ಬಳಿಕ ಸಿದ್ದರಾಮಯ್ಯ ಅವರನ್ನು ಹಾಸನಕ್ಕೆ ಕರೆಸೋಣ. ಈ ಬಗ್ಗೆ ನಂತರ ಮಾತನಾಡೋಣ ಆದ್ರೆ ನಮ್ಮ ಕುಟುಂಬದ ಸದಸ್ಯರಾದ ಕುಮಾರಸ್ವಾಮಿ ಸಿ.ಎಂ ಆಗಿದ್ದಾರೆ. ಅವರ ಬದಲಿಗೆ ರೇವಣ್ಣ ಸಿ.ಎಂ ಆಗಬೇಕೆಂಬುದನ್ನು ಬಯಸುವುದಿಲ್ಲ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯ ಬೇಕೆಂಬುದು ನನ್ನ ಆಸೆ ಎಂದ್ರು.

ಸಿ.ಎಂ ಆಗಿ ಕುಮಾರಸ್ವಾಮಿ ಅವರು, ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಅವರಿದ್ದರೇ ಒಳ್ಳೆಯದು ಎಂದ ಭವಾನಿ, ನನ್ನ ಮಗ ಇನ್ನೂ ಮೂರು ಲಕ್ಷಕ್ಕೂ ಅಧಿಕ ಮತಗಳಿಂದ ಗೆಲ್ತಾರೆ ಅಂತ ಜನ ಮಾತಾಡುತ್ತಿದ್ದಾರೆ ಇದರ ಬಗ್ಗೆ ನಾನೇನೂ ಹೇಳಲಾರೆ ಕೇವಲ ಇನ್ನೂ ಐದು ದಿನ ಬಾಕಿ ಇದೆ ಇಷ್ಟು ದಿನ ಕಾಯ್ದಿದ್ದೇವೆ. ನೋಡೋಣ 23ಕ್ಕೆ ಎಂದು ನಾನು‌ ಹೇಳಿದ್ದನ್ನ ಅರೆಬರೆ ತೋರಿಸಬೇಡಿ. ಪೂರ್ಣ ಪ್ರಸಾರ ಮಾಡಿ ಎಂದು ನಗುತ್ತಲೇ ಮಾಧ್ಯಮಗಳಿಗೆ ಮನವಿ ಮಾಡಿದರು.


Body:0


Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.