ETV Bharat / state

ಸಿದ್ದರಾಮಯ್ಯ ಹೇಳಿಕೆಯಿಂದ ನೋವಾಗಿದೆ : ಶಾಸಕ ಅರವಿಂದ ಬೆಲ್ಲದ

author img

By

Published : Apr 23, 2023, 7:10 PM IST

ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ಅರವಿಂದ ಬೆಲ್ಲದ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕ ಅರವಿಂದ ಬೆಲ್ಲದ
ಶಾಸಕ ಅರವಿಂದ ಬೆಲ್ಲದ

ಶಾಸಕ ಅರವಿಂದ ಬೆಲ್ಲದ

ಧಾರವಾಡ: ಲಿಂಗಾಯತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭ್ರಷ್ಟರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ. ಈ ವಿಚಾರ ನಮಗೆ ತುಂಬಾನೇ ಆಘಾತವಾಗಿದೆ ಎಂದು ಶಾಸಕ ಅರವಿಂದ ಬೆಲ್ಲದ ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಮಾತ್ರ ಹೀಗೆ ಏನೇನೋ ಮಾತಾಡ್ತಾರೆ ಅಂದುಕೊಂಡಿದ್ದೆವು. ಅವರೊಂದಿಗೆ ಹೆಚ್ಚು ಓಡಾಡಿದವರು ಸಿದ್ದರಾಮಯ್ಯ. ಅವರಿಗೂ ಕೂಡ ಈ ಚಾಳಿ ಬಂದಿದೆ. ಬಹುಶಃ ರಾಹುಲ್ ಗಾಂಧಿ ಅವರ ಜೊತೆ ಸಿದ್ಧರಾಮಯ್ಯ ಅವರೂ ಪ್ರವಾಸ ಮಾಡಿದ್ದರಿಂದ ಅವರ ಐಕ್ಯೂ ಇವರಿಗೂ ಬಂದಿದೆ ಎನ್ನಿಸುತ್ತಿದೆ. ಏಕೆಂದರೆ ಈ ರೀತಿಯ ಹೇಳಿಕೆಯನ್ನು ಸಿದ್ದರಾಮಯ್ಯ ಅವರಿಂದ ನಾವು ನಿರೀಕ್ಷೆ ಮಾಡಿರಲಿಲ್ಲ ಎಂದರು.

ಲಿಂಗಾಯತರ ಮನಸ್ಸಿಗೆ ನೋವಾಗುವಂತೆ ಮಾತನಾಡಿದ್ದು ತಪ್ಪು: ಸಿದ್ದರಾಮಯ್ಯ ಅವರು ಒಬ್ಬ ಪ್ರಬುದ್ಧ ರಾಜಕಾರಣಿ. ಅವರು ಏನೇ ಹೇಳಿಕೆ ಕೊಡಬೇಕಿದ್ದರೂ ಬಹಳ ವಿಚಾರ ಮಾಡಿ ಕೊಡಬೇಕಿತ್ತು. ಈ ರೀತಿ ಮಾತನಾಡಿದ್ದು ತಪ್ಪು. ಈ ದೇಶದಲ್ಲಿ ಭ್ರಷ್ಟಾಚಾರಿಗಳು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. 2ಜಿ ಹಗರಣ, ಬೋಫೋರ್ಸ್​ ಹಗರಣ, ಕೋಲ್ ಹಗರಣ ಕಾಂಗ್ರೆಸ್​ ಅವಧಿಯಲ್ಲಿ ಆಗಿರುವಂತಹದ್ದು, ಅರ್ಕಾವತಿ ಹಗರಣ ಆಗಿರುವುದು ಸಿದ್ದರಾಮಯ್ಯ ಮುಖ್ಯಮಂತ್ರಿಗಳು ಆಗಿದ್ದಾಗ. ಈ ರೀತಿಯ ಭ್ರಷ್ಟಾಚಾರದ ಪರಂಪರೆಯನ್ನು ನಾವು ಕಾಂಗ್ರೆಸ್​ ಪಕ್ಷದಲ್ಲಿ ನೋಡಿದ್ದೇವೆ ಎಂದು ತಿಳಿಸಿದರು.

ಶಾಸಕ ಅರವಿಂದ ಬೆಲ್ಲದ

ರಾಹುಲ್ ಗಾಂಧಿ ಮಾರ್ಗದಲ್ಲಿಯೇ ಸಿದ್ದರಾಮಯ್ಯ ಹೋಗುತ್ತಿದ್ದಾರೆ: ಎಲ್ಲ ಹಗರಣಗಳು ನಡೆದಿದ್ದು ಕಾಂಗ್ರೆಸ್ ಅವಧಿಯಲ್ಲಿಯೇ. ಭ್ರಷ್ಟಾಚಾರದ ಪರಂಪರೆ ಕಾಂಗ್ರೆಸ್‌ಗೆ ಇದೆ. ಇಂಥ ಇತಿಹಾಸ ಹೊಂದಿದ ಪಕ್ಷ ಇದು. ಹೀಗಾಗಿ ಈ ರೀತಿ ಸಿದ್ದರಾಮಯ್ಯ ಅವರು ಮಾತನಾಡಬಾರದಿತ್ತು. ಈ ರೀತಿಯೇ ಮಾತಾಡಿಯೇ ರಾಹುಲ್ ಗಾಂಧಿ ಅವರು ತಮ್ಮ ಸಂಸದ ಸ್ಥಾನ ಕಳೆದುಕೊಂಡಿದ್ದಾರೆ. ಅವರ ಮಾರ್ಗದಲ್ಲಿಯೇ ಸಿದ್ದರಾಮಯ್ಯ ಹೋಗುತ್ತಿದ್ದಾರೆ ಎಂದು ಬೆಲ್ಲದ್​ ಹೇಳಿದರು.

ಸಿದ್ದರಾಮಯ್ಯ ಹೇಳಿಕೆಯನ್ನು ಕಾಂಗ್ರೆಸ್​ನ ಲಿಂಗಾಯತ ನಾಯಕರು ಖಂಡಿಸಬೇಕು: ಎಲ್ಲ ಸಮಾಜದಲ್ಲಿ ಎಲ್ಲ ಥರದ ಜನ ಇರ್ತಾರೆ ಭ್ರಷ್ಟರದ್ದೇ ಒಂದು ಜಾತಿ ಇದೆ. ಅವರ ಬಗ್ಗೆ ಮಾತನಾಡಬೇಕಿತ್ತು. ಅದು ಬಿಟ್ಟು ಲಿಂಗಾಯತ ಸಿಎಂ ಬಗ್ಗೆ ಮಾತನಾಡಿ ಸಮಾಜದ ಮನಸ್ಸು ನೋಯಿಸಿದ್ದಾರೆ. ಈ ಹೇಳಿಕೆಯಿಂದ ಮುಂದೆ ಅವರು ಕಾಂಗ್ರೆಸ್​ನಲ್ಲಿ ಲಿಂಗಾಯತರನ್ನು ಯಾವ ರೀತಿ ನಡೆಸಿಕೊಳ್ಳುತ್ತಾರೆ ಎಂಬುದು ತಿಳಿದುಬಂದಿದೆ. ಹೀಗಾಗಿ ಕಾಂಗ್ರೆಸ್​ ಪಕ್ಷದಲ್ಲಿರುವ ಲಿಂಗಾಯತ ನಾಯಕ ಜಗದೀಶ್ ಶೆಟ್ಟರ್, ಎಂ ಬಿ ಪಾಟೀಲ್ ಅವರು ಈ ಲಿಂಗಾಯತ ಅಸ್ಮಿತೆಯನ್ನು ಖಂಡಿಸಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯನ್ನು ಖಂಡಿಸಬೇಕು ಎಂದು ಶಾಸಕ ಅರವಿಂದ ಬೆಲ್ಲದ​ ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಸ್ಪಷ್ಟನೆ.. ತಾನು ಲಿಂಗಾಯತ ಮುಖ್ಯಮಂತ್ರಿಗಳೆಲ್ಲರೂ ಭ್ರಷ್ಟರು ಅಂತಾ ಹೇಳಿಲ್ಲ. ಈಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭ್ರಷ್ಟರು ಅಂತಾ ಹೇಳಿಕೆ ನೀಡಿದ್ದೆ. ಆದ್ರೆ ನನ್ನ ಹೇಳಿಕೆಯನ್ನು ಬಿಜೆಪಿಯವರು ಬೇರೆ ರೀತಿ ತಿರುಚಿದ್ದಾರೆ ಎಂದು ವರುಣಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.

ಇನ್ನೂ ಓದಿ : ಬಸವಣ್ಣನವರ ಲೋಕತಂತ್ರ ವಿಶ್ವಕ್ಕೆ ಮಾದರಿ.. ರಾಹುಲ್​ ಗಾಂಧಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.