ETV Bharat / state

ಲೆಕ್ಕ ಕೇಳಲು ಜನ ನಿಮಗೆ ಅಧಿಕಾರ ಕೊಟ್ಟಿಲ್ಲ: ಶಾಂತನಗೌಡಗೆ ರೇಣುಕಾಚಾರ್ಯ ತಿರುಗೇಟು

author img

By

Published : Apr 28, 2020, 5:20 PM IST

ಹೊನ್ನಾಳಿಯಲ್ಲಿ ಹಾಲಿ ಮತ್ತು ಮಾಜಿ ಶಾಸಕರ ನಡುವಿನ ವಾಕ್ಸಮರ ಮುಂದುವರೆದಿದ್ದು, ಈಗ ಮತ್ತೆ ಎಂ.ಪಿ.ರೇಣುಕಾಚಾರ್ಯ ಮಾಜಿ ಶಾಸಕ ಶಾಂತನಗೌಡರಿಗೆ ತಿರುಗೇಟು ನೀಡಿದ್ದಾರೆ.

dwedd
ಶಾಂತನಗೌಡಗೆ ರೇಣುಕಾಚಾರ್ಯ ಟಾಂಗ್​

ದಾವಣಗೆರೆ: ಲೆಕ್ಕ ಕೇಳಲು ಜನ ನಿಮಗೆ ಅಧಿಕಾರ ಕೊಟ್ಟಿಲ್ಲ.‌ ಹೊನ್ನಾಳಿ ಹಾಗೂ ನ್ಯಾಮತಿಯ ಜನರು ಕೇಳಲಿ.‌ ಆಗ ಲೆಕ್ಕ ಕೊಡುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮಾಜಿ ಶಾಸಕ ಶಾಂತನಗೌಡಗೆ ತಿರುಗೇಟು ನೀಡಿದ್ದಾರೆ.

ಶಾಂತನಗೌಡಗೆ ರೇಣುಕಾಚಾರ್ಯ ತಿರುಗೇಟು​

ಈ ಸಂಬಂಧ ವಿಡಿಯೋ ಬಿಡುಗಡೆ ಮಾಡಿರುವ ರೇಣುಕಾಚಾರ್ಯ, ನಿಮ್ಮಿಂದ ನಾನು ಪಾಠ ಕಲಿಯುವ ಅವಶ್ಯಕತೆ ಇಲ್ಲ. ನನ್ನ ಬಗ್ಗೆ ಏಕವಚನದಲ್ಲಿ‌ ಮಾತನಾಡಿದ್ದೀರಾ. ನಿಮ್ಮ ನಡವಳಿಕೆ ಹಾಗೂ ಹೇಗೆ ಮಾತನಾಡುತ್ತೀರೋ ಹಾಗೆ ನಾನೂ ಪ್ರತಿಕ್ರಿಯೆ ನೀಡುತ್ತೇನೆ ಎಂದಿದ್ದಾರೆ.

ಲಾಕ್​ಡೌನ್ ಹಿನ್ನೆಲೆ ಸಂಘ ಸಂಸ್ಥೆಗಳು, ದಾನಿಗಳು ಕೊಟ್ಟಿರುವ ಆಹಾರ ಧಾನ್ಯಗಳ ಕಿಟ್​ ಮೇಲೆ ನನ್ನ ಹೆಸರು ಹಾಕಿಲ್ಲ. ಇಂತಹ ಕೀಳು ಪ್ರಚಾರ ಪಡೆಯುವ ಅವಶ್ಯಕತೆ ಇಲ್ಲ. ಹೊನ್ನಾಳಿ ಜನರಿಗೆ ನೀವು ಏನು ಮಾಡಿದ್ದೀರಾ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ. ನಾನು ಶಾಸಕನಲ್ಲ, ಜನರ ಸೇವಕ ಎಂದು ರೇಣುಕಾಚಾರ್ಯ ಹೇಳಿದ್ದಾರೆ.‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.