ETV Bharat / state

ಸೌದೆ ತರಲು ಹೋದವ ಕಾಡಾನೆ ದಾಳಿಗೆ ಬಲಿ

author img

By

Published : Nov 18, 2019, 10:13 AM IST

ಸೌದೆ ಕಡಿಯಲು ಹೋದವನು ಕಾಡಾನೆಗೆ ಬಲಿ

ಸೌದೆ ಕಡಿಯಲು ಹೋದ ವ್ಯಕ್ತಿಯೊಬ್ಬ ಕಾಡಾನೆಗೆ ಬಲಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕಾಡಂಚಿನ ಗ್ರಾಮ ಕಣಿಯನಪುರ ಸಮೀಪ ನಡೆದಿದೆ.

ಚಾಮರಾಜನಗರ: ಸೌದೆ ಕಡಿಯಲು ಹೋದ ವ್ಯಕ್ತಿಯೊಬ್ಬ ಕಾಡಾನೆಗೆ ಬಲಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕಾಡಂಚಿನ ಗ್ರಾಮ ಕಣಿಯನಪುರ ಸಮೀಪ ನಡೆದಿದೆ.

ಗ್ರಾಮದ ರಂಗರಾಜು(65) ಮೃತಪಟ್ಟ ದುರ್ದೈವಿ. ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸೌದೆ ತರಲು ಹೋಗಿ ಬರುತ್ತೇನೆಂದು ಹೋದವರು ಸಂಜೆಯಾದರು ಬಂದಿರಲಿಲ್ಲ. ಗ್ರಾಮಸ್ಥರು, ಅರಣ್ಯ ಇಲಾಖೆಯ ಸಿಬ್ಬಂದಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.

ಪ್ರತಿನಿತ್ಯ ಗ್ರಾಮದ ಬಳಿ ಕಾಡಾನೆಗಳು ಬರುತ್ತದೆ. ಆದರೆ ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಆನೆಗಳು ಗೀಳಿಡುತ್ತಿದ್ದವು, ಇಷ್ಟು ದಿನ ಆನೆಗಳು ಬಂದರೂ ಈ ರೀತಿಯಲ್ಲಿ ಶಬ್ಧ ಮಾಡುತ್ತಿರಲಿಲ್ಲ. ಈ ಹಿನ್ನೆಲೆ ಬೆಳಗ್ಗೆ ಸ್ಥಳ ಪರಿಶೀಲಿಸಿದಾಗ ರಂಗರಾಜು ಮೃತಪಟ್ಟಿರುವುದು ತಿಳಿದು ಬಂದಿದೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗುಂಡ್ಲುಪೇಟೆ ಆಸ್ಪತ್ರೆಗೆ ರವಾನಿಸಲಾಗಿದೆ.

Intro:ಸೌದೆ ಕಡಿಯಲು ಹೋದವ ಕಾಡಾನೆಗೆ ಬಲಿ

ಚಾಮರಾಜನಗರ: ಸೌದೆ ಕಡಿಯಲು ಹೋದ ವ್ಯಕ್ತಿವೋರ್ವ ಕಾಡಾನೆಗೆ ಬಲಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕಾಡಂಚಿನ ಗ್ರಾಮ ಕಣಿಯನಪುರ ಸಮೀಪ ನಡೆದಿದೆ.

Body:ಗ್ರಾಮದ ರಂಗರಾಜು(65) ಮೃತಪಟ್ಟ ದುರ್ದೈವಿ. ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಸೌದೆಗೆ ಹೋಗಿ ಬರುತ್ತೇನೆಂದು ಹೊದವರು ಸಂಜೆಯಾದರು ಬಂದಿರಲಿಲ್ಲ‌
ಗ್ರಾಮಸ್ಥರು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಹುಡುಕಾಡಿದರೂ ಪತ್ತೆಯಾಗಿರಲಿಲ್ಲ‌.

ಪ್ರತಿನಿತ್ಯ ಗ್ರಾಮದ ಬಳಿ ಕಾಡಾನೆಗಳು ಬರುತ್ತದೆ. ಆದರೆ ಭಾನುವಾರ ಸಂಜೆ 7 ರ ಸಮಯದಲ್ಲಿ ಆನೆಗಳು ಗೀಳಿಡುತ್ತಿದ್ದವು, ಇಷ್ಟು ದಿನ ಆನೆಗಳು ಬಂದರೂ ಈ ರೀತಿಯಲ್ಲಿ ಶಬ್ದ ಮಾಡುತ್ತಿರಲಿಲ್ಲ. ಆನೆಗಳು ಘೀಳಿಡುತ್ತಿದ್ದವು. ಬೆಳಗ್ಗೆ ಸ್ಥಳ ಪರಿಶೀಲಿಸಿದಾಗ ರಂಗರಾಜು ಮೃತಪಟ್ಟಿರುವುದು ತಿಳಿದುಬಂದಿದೆ.

Conclusion:ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗುಂಡ್ಲುಪೇಟೆ ಆಸ್ಪತ್ರೆಗೆ ರವಾನಿಸಲಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.