ETV Bharat / state

ರಾಜ್ಯದಲ್ಲಿ ಹೆಚ್ಚಾಗ್ತಿರುವ ಒಮಿಕ್ರಾನ್​​ ಕೇಸ್​.. ನಾಳೆಯಿಂದ ಮನೆ ಮನೆಗೆ ತೆರಳಿ ಆರೋಗ್ಯ ಸರ್ವೇಗೆ ಆದೇಶ

author img

By

Published : Dec 28, 2021, 9:34 PM IST

omicron
ಒಮಿಕ್ರಾನ್​​ ಪ್ರಕರಣ

Omicron cases in Karnataka: ಸಿಎಂ ಬಸವರಾಜ ಬೊಮ್ಮಾಯಿ ಅವರ ಸೂಚನೆಯಂತೆ ನಾಳೆಯಿಂದ ರಾಜ್ಯವ್ಯಾಪಿ ILI/SARI ಕೇಸ್​ಗಳ ಸಮೀಕ್ಷೆ ನಡೆಯಲಿದೆ.

ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್​​ ಪ್ರಕರಣ ಹೆಚ್ಚಾಗುತ್ತಿದ್ದು, ರಾಜ್ಯವ್ಯಾಪಿ ಆರೋಗ್ಯ ಸಮೀಕ್ಷೆಗೆ ಸರ್ಕಾರ ಆದೇಶ ಹೊರಡಿಸಿದೆ‌. ಸಿಎಂ ಬಸವರಾಜ ಬೊಮ್ಮಾಯಿ ಅವರ ಸೂಚನೆಯಂತೆ ಬುಧವಾರದಿಂದ ರಾಜ್ಯವ್ಯಾಪಿ ILI/SARI ಕೇಸ್​ಗಳ ಸಮೀಕ್ಷೆ ನಡೆಯಲಿದೆ.

ಮನೆ ಮನೆಗೆ ತೆರಳಿ ಆರೋಗ್ಯ ಸರ್ವೇ ಕುರಿತು ಸುತ್ತೋಲೆ ಹೊರಡಿಸಿದ ಸರ್ಕಾರ, ILI/SARI ( influenza-like illness)/ Severe acute respiratory infections) ILI ಹಾಗು SARI ಕೇಸ್​ಗಳ ಸಮೀಕ್ಷೆ ನಡೆಸುವಂತೆ ತಿಳಿಸಿದೆ.

ಡಿಸೆಂಬರ್​​ 29 ರಿಂದ ಜನವರಿ 15, 2022ರವರೆಗೆ 18 ದಿನಗಳು ಸಮೀಕ್ಷೆ ನಡೆಯಲಿದ್ದು, ಪ್ರತಿಯೊಂದು ಜಿಲ್ಲೆಗಳಲ್ಲಿ ಮನೆಮನೆಗೆ ತೆರಳಿ ಸಮೀಕ್ಷೆ ನಡೆಸಬೇಕು. ಸಮೀಕ್ಷೆ ನಡೆಸಿದ ಬಳಿಕ ವರದಿಯನ್ನ IHLP (Integrated Health Information Platform) ಪೋರ್ಟಲ್​​​ನಲ್ಲಿ ನಮೂದಿಸಲು ಸೂಚನೆ ನೀಡಲಾಗಿದೆ.

ಓದಿ: 2022ರಲ್ಲಿ ವಿಶ್ವಕ್ಕೆ ಕಾದಿದೆ ಮತ್ತೊಂದು ಸಾಂಕ್ರಾಮಿಕ ರೋಗ : ದಿವ್ಯಾಂಗ ಚೇತನ ಬಾಬಾ ವಂಗಾ ಭವಿಷ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.