ETV Bharat / entertainment

Yash: 'ರಾವಣ'ನ ಆಫರ್​ ತಿರಸ್ಕರಿಸಿದ ರಾಕಿಂಗ್​ ಸ್ಟಾರ್​ ಯಶ್​.. ಕಾರಣ ಏನ್​ ಗೊತ್ತಾ?

author img

By

Published : Jun 12, 2023, 7:32 PM IST

ನಿರ್ದೇಶಕ ನಿತೇಶ್​ ತಿವಾರಿ ತಮ್ಮ ಮುಂದಿನ ರಾಮಾಯಣ ಆಧಾರಿತ ಚಿತ್ರದಲ್ಲಿ ರಾವಣನ ಪಾತ್ರಕ್ಕೆ ಯಶ್​ಗೆ ಆಫರ್​ ನೀಡಿದ್ದರು. ಆದರೆ ಇದೀಗ ರಾಕಿಂಗ್​ ಸ್ಟಾರ್​ ಈ ಪ್ರಾಜೆಕ್ಟ್​ನಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

yash
ಯಶ್​

ಬಾಲಿವುಡ್​ ಖ್ಯಾತ ನಿರ್ದೇಶಕ ನಿತೇಶ್​ ತಿವಾರಿ ಅವರ ಮುಂದಿನ ರಾಮಾಯಣ ಆಧಾರಿತ ಚಿತ್ರದಲ್ಲಿ ನಟ ರಣ್​​ಬೀರ್ ಕಪೂರ್​ ಮತ್ತು ಅವರ ಪತ್ನಿ, ನಟಿ ಆಲಿಯಾ ಭಟ್ ರಾಮ-ಸೀತೆ ಪಾತ್ರದಲ್ಲಿ ಹಾಗೂ ರಾವಣನ ಪಾತ್ರದಲ್ಲಿ ರಾಕಿಂಗ್​ ಸ್ಟಾರ್ ಯಶ್​​ ನಟಿಸಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ ಈ ಆಫರ್ ಅನ್ನು ಯಶ್​ ನಯವಾಗಿಯೇ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ನಟ ಈ ಯೋಜನೆಯಿಂದ ಹಿಂದೆ ಸರಿದಿರುವುದಾಗಿ ವರದಿಯಾಗಿದೆ.

ನಿತೇಶ್​ ತಿವಾರಿವರು ಇತ್ತೀಚೆಗೆ ಬವಾಲ್​ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ಸದ್ಯ ಅವರು ರಾಮಾಯಣ ಆಧಾರಿತ ಸಿನಿಮಾ ಮಾಡುತ್ತಿರುವ ಮಾಹಿತಿ ಇದೆ. ಈ ವರ್ಷದ ದೀಪಾವಳಿಯ ಸಂದರ್ಭದಲ್ಲಿ ಈ ಸಿನಿಮಾವನ್ನು ಘೋಷಿಸಬಹುದು. ಚಿತ್ರದ ಅಧಿಕೃತ ಘೋಷಣೆಗೂ ಮುನ್ನವೇ ಅವರು ಯಶ್​ಗೆ ರಾವಣನ ಪಾತ್ರಕ್ಕೆ ಆಫರ್​ ನೀಡಿದ್ದಾರೆ. ಆದರೆ ಇದನ್ನು ಅಷ್ಟೇ ಸಲೀಸಾಗಿ ಕೆಜಿಎಫ್​ ಸ್ಟಾರ್​ ನಿರಾಕರಿಸಿದ್ದಾರೆ.

ಆದರೆ ಯಶ್​ ಅವರು ರಾವಣನ ಪಾತ್ರವನ್ನು ಮಾಡಲು ನಿಜಕ್ಕೂ ಉತ್ಸುಕರಾಗಿದ್ದರು. ರಾಮನ ಪಾತ್ರ ಮಾಡುವುದಕ್ಕಿಂತ ರಾವಣನ ಪಾತ್ರ ನಿಜಕ್ಕೂ ಸವಾಲಿನ ಕೆಲಸ. ರಾಮನ ಪಾತ್ರವನ್ನು ರಣಬೀರ್​ ಮಾಡುವುದರಿಂದ ರಾವಣನ ಪಾತ್ರವನ್ನು ಸ್ವೀಕರಿಸಲು ಯಶ್​ ಒಮ್ಮೆ ಯೋಚಿಸಿದ್ದರು. ಆದರೆ ಅವರ ಆಪ್ತರು ಈ ಪಾತ್ರವನ್ನು ಒಪ್ಪಿಕೊಳ್ಳದಂತೆ ಯಶ್​ಗೆ ಸಲಹೆ ನೀಡಿದ್ದಾರೆ.

ರಾವಣನ ಪಾತ್ರವು ಪ್ರಬಲವಾಗಿದ್ದರೂ ಅವರ ಅಭಿಮಾನಿಗಳು ಯಶ್ ಅವರನ್ನು ನಕಾರಾತ್ಮಕ ಪಾತ್ರದಲ್ಲಿ ನೋಡಲು ಇಷ್ಟಪಡುವುದಿಲ್ಲ. ಈ ಹಿಂದೆ ಸಂದರ್ಶನವೊಂದರಲ್ಲಿ ಯಶ್​ ಈ ಮಾತನ್ನು ಉಚ್ಚರಿಸಿದ್ದರು. "ನನ್ನ ಅಭಿಮಾನಿಗಳ ಭಾವನೆಗಳ ಬಗ್ಗೆ ನಾನು ಜಾಗರೂಕನಾಗಿರಬೇಕು. ಅವರ ಇಚ್ಛೆಯ ವಿರುದ್ಧವಾಗಿ ನಾನು ನಡೆದುಕೊಳ್ಳುವುದಿಲ್ಲ" ಎಂದು ಹೇಳಿದ್ದರು. ಹೀಗಾಗಿ ಯಶ್​ ರಾವಣನ ಪಾತ್ರವನ್ನು ಅಭಿಮಾನಿಗಳಿಗಾಗಿಯೇ ಬಿಟ್ಟುಕೊಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇದು ಫ್ಯಾನ್ಸ್​ಗೆ ನಟನ ಮೇಲಿದ್ದ ಪ್ರೀತಿ, ಅಭಿಮಾನವನ್ನು ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: Weekend with Ramesh: ಡಿಕೆಶಿ ಬದುಕಿನ ಅನಾವರಣದೊಂದಿಗೆ ಮುಕ್ತಾಯಗೊಂಡ ಸಾಧಕರ ಶೋ 'ವೀಕೆಂಡ್​ ವಿತ್​ ರಮೇಶ್​'

ಭಗವನಂತನಂತೆ ಕಾಣ್ತಾರೆ ಯಶ್: ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಕಂಗನಾ ರಣಾವತ್​ ಯಶ್​ ಅವರನ್ನು ಭಗವನಂತನಿಗೆ ಹೋಲಿಸಿ ಮಾತನಾಡಿದ್ರು. ರಾವಣನ ಪಾತ್ರಕ್ಕಿಂತ ಅವರಿಗೆ ರಾವಣನ ಪಾತ್ರವೇ ಸೂಕ್ತ ಎಂದು ಹೇಳಿದ್ರು. ಜೊತೆಗೆ ನಿತೇಶ್​ ತಿವಾರಿ ತಮ್ಮ ಹೊಸ ರಾಮಾಯಣ ಆಧಾರಿತ ಸಿನಿಮಾಗೆ ರಣಬೀರ್​ ಅವರನ್ನು ರಾಮನ ಪಾತ್ರಕ್ಕೆ ಆಯ್ಕೆ ಮಾಡಿದ್ದು ಸರಿಯಲ್ಲ ಎಂದು ಹೇಳಿದ್ದರು.

"ಬಾಲಿವುಡ್​ನಲ್ಲಿ ರಾಮಾಯಣವನ್ನು ಕಥಾವಸ್ತುವನ್ನಾಗಿರಿಸಿ ಮತ್ತೊಂದು ಸಿನಿಮಾದ ಬಗ್ಗೆ ಕೇಳುತ್ತಿದ್ದೇನೆ. ಆತ್ಮಸಾಕ್ಷಿಯ ಅಗತ್ಯವಿರುವ ತೆಳ್ಳಗಿನ ಬಿಳಿ ಇಲಿ ಈ ಚಿತ್ರದಲ್ಲಿ ನಟಿಸಲಿದ್ದಾರೆಂದು ಹೇಳಲಾಗುತ್ತಿದೆ. ಸ್ತ್ರೀವಿಷಯ ಮತ್ತು ಮಾದಕ ವ್ಯಸನಕ್ಕೆ (ಡ್ರಗ್ಸ್​) ಹೆಸರುವಾಸಿಯಾದ ಅವರು ಸಿನಿಮಾವೊಂದರಲ್ಲಿ ತನ್ನನ್ನು ತಾನು ಭಗವಾನ್ ಶಿವ ಎಂದು ಸಾಬೀತುಪಡಿಸಲು ತೀವ್ರವಾಗಿ ಪ್ರಯತ್ನಿಸಿದ ನಂತರ ಈಗ ಭಗವಾನ್ ರಾಮನಾಗಲು ಹೊರಟಿದ್ದಾರೆ."

"ಆದರೆ ಸ್ವಯಂ ನಿರ್ಮಿತ ಪ್ರತಿಭಾವಂತ ನಟ ಎಂದು ಕರೆಯಲ್ಪಡುವ ಒಬ್ಬ ದಕ್ಷಿಣದ ಸೂಪರ್​ ಸ್ಟಾರ್​, ಒಬ್ಬ ನಿಷ್ಠಾವಂತ ಕುಟುಂಬದ ವ್ಯಕ್ತಿ, ಸಂಪ್ರದಾಯವಾದಿ, ವಾಲ್ಮೀಕಿ ಜಿ ವಿವರಣೆಯ ಪ್ರಕಾರ, ಮೈಬಣ್ಣ, ನಡವಳಿಕೆ ಮತ್ತು ಮುಖದ ವೈಶಿಷ್ಟ್ಯಗಳಲ್ಲಿ ಶ್ರೀರಾಮನಂತೆ ಕಾಣುವ ಆ ನಟನಿಗೆ ರಾವಣನ ಪಾತ್ರವನ್ನು ನೀಡಲು ಮುಂದಾಗುತ್ತಿದ್ದಾರೆ. ಇದು ಯಾವ ರೀತಿಯ ಕಲಿಯುಗ? ಯಾವುದೇ ಕಾರಣಕ್ಕೂ ಡ್ರಗ್ಗಿ ಹುಡುಗನು ರಾಮನ ಪಾತ್ರವನ್ನು ಮಾಡಬಾರದು" ಎಂದು ತಮ್ಮ ಇನ್​ಸ್ಟಾದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದರು.

ಇದನ್ನೂ ಓದಿ: Bhimaa movie: ಟಾಲಿವುಡ್​ ನಿರ್ದೇಶಕನಾಗಿ 'ಭಜರಂಗಿ' ಹರ್ಷ ಎಂಟ್ರಿ.. 'ಭೀಮ'ನಾಗಿ ಗೋಪಿಚಂದ್ ಫಿಕ್ಸ್​!​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.