ETV Bharat / bharat

500 ರೂ.ಗಾಗಿ ವ್ಯಕ್ತಿಯ ಕತ್ತು ಸೀಳಿ ಕೊಲೆ: ರೌಡಿಶೀಟರ್​ ಸೇರಿ ಇಬ್ಬರಿಂದ ಕೃತ್ಯ

author img

By

Published : Jul 23, 2022, 6:33 PM IST

man-stabbed-to-death-over-rs-dot-500-in-vishakapatnam-district-of-ap
500 ರೂ. ಹಣಕ್ಕಾಗಿ ವ್ಯಕ್ತಿಯ ಕತ್ತು ಸೀಳಿ ಕೊಲೆ: ರೌಡಿಶೀಟರ್​ ಸೇರಿ ಇಬ್ಬರಿಂದ ಕೃತ್ಯ

500 ರೂ. ಹಣ ಮರಳಿ ಕೊಡುವಂತೆ ಕೇಳಿದ್ದ ಒಂದೇ ಕಾರಣಕ್ಕೆ ವ್ಯಕ್ತಿಯನ್ನು ರೌಡಿಶೀಟರ್​ ಸೇರಿ ಇಬ್ಬರು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಜರುಗಿದೆ.

ವಿಶಾಖಪಟ್ಟಣಂ (ಆಂಧ್ರಪ್ರದೇಶ): ನೀಡಿದ್ದ ಹಣ ವಾಪಸ್​ ನೀಡುವಂತೆ ಕೇಳಿ ವ್ಯಕ್ತಿಯೊಬ್ಬರನ್ನು ರೌಡಿಶೀಟರ್​ ಹಾಗೂ ಮತ್ತೊಬ್ಬ ಸೇರಿಕೊಂಡು ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ನಡೆದಿದೆ.

ಅಪ್ಪಲಾ ರೆಡ್ಡಿ ಅಲಿಯಾಸ್ ಅಪ್ಪಣ್ಣ ರೆಡ್ಡಿ ಎಂಬುವವರೇ ಕೊಲೆಯಾದ ವ್ಯಕ್ತಿ. ಅಪ್ಪಾಲಾ ರೆಡ್ಡಿ ರೌಡಿ ಶೀಟರ್ ಶಂಕರ್ ಎಂಬಾತನಿಗೆ 500 ರೂ. ನೀಡಿದ್ದ. ಈ ಹಣ ವಾಪಸ್ ಕೊಡುವಂತೆ ರೌಡಿ ಶೀಟರ್‌ಗೆ ರೆಡ್ಡಿ ಕೇಳಿದ್ದ. ಆದರೆ, ಹಣ ಹಿಂದಿರುಗಿಸಿರಲಿಲ್ಲ ಎನ್ನಲಾಗಿದೆ.

500 ರೂ. ಹಣಕ್ಕಾಗಿ ವ್ಯಕ್ತಿಯ ಕತ್ತು ಸೀಳಿ ಕೊಲೆ: ರೌಡಿಶೀಟರ್​ ಸೇರಿ ಇಬ್ಬರಿಂದ ಕೃತ್ಯ

ಗುರುವಾರ ರಾತ್ರಿ ಅಪ್ಪಾಲಾ ರೆಡ್ಡಿ ಹಾಗೂ ರೌಡಿ ಶೀಟರ್ ಶಂಕರ್ ಮುಖಾಮುಖಿಯಾಗಿದ್ದರು. ಈ ವೇಳೆ, ಮತ್ತೆ ಹಣ ಕೊಡುವಂತೆ ರೆಡ್ಡಿ ಕೇಳಿದಾಗ ಗಲಾಟೆ ಶುರುವಾಗಿದೆ. ಅಂತೆಯೇ, ಶಂಕರ್​ ಮತ್ತು ಆತನೊಂದಿಗಿದ್ದ ಮತ್ತೊಬ್ಬ ವ್ಯಕ್ತಿ ಸೇರಿ ಅಪ್ಪಾಲ ರೆಡ್ಡಿ ಮೇಲೆ ಚಾಕುವಿನಿಂದ ದಾಳಿ, ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಸವಾರ ಸಮೇತ ದ್ವಿಚಕ್ರ ವಾಹನ ಕ್ರೇನ್​​​ನಲ್ಲಿ ಎತ್ತಿಕೊಂಡು ಹೋದ ಟ್ರಾಫಿಕ್​ ಪೊಲೀಸ್​​.. ವಿಡಿಯೋ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.