ETV Bharat / bharat

ಸಂಸತ್​ ಭದ್ರತಾ ಲೋಪ ಪ್ರಕರಣ : ಮಾಸ್ಟರ್​ ಮೈಂಡ್​ ಲಲಿತ್​ ಝಾ ಮನೆಗೆ ತಲುಪಿದ ಎಟಿಎಸ್​​, ದೆಹಲಿ ಪೊಲೀಸರು

author img

By ETV Bharat Karnataka Team

Published : Dec 19, 2023, 10:55 PM IST

ಸಂಸತ್​ ಭದ್ರತಾ ಲೋಪ ಪ್ರಕರಣದ ಮಾಸ್ಟರ್​ ಮೈಂಡ್​ ಲಲಿತ್ ಝಾ ಮನೆಗೆ ಎಟಿಎಸ್​ ಮತ್ತು ದೆಹಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Etv ats-and-delhi-police-team-reached-house-of-parliament-infiltration-accused-lalit-jha-in-darbhanga
ಸಂಸತ್​ ಭದ್ರತಾ ಲೋಪ ಪ್ರಕರಣ : ಮಾಸ್ಟರ್​ ಮೈಂಡ್​ ಲಲಿತ್​ ಝಾ ಮನೆಗೆ ತಲುಪಿದ ಎಟಿಎಸ್​​, ದೆಹಲಿ ಪೊಲೀಸರು

ದರ್ಭಂಗಾ(ಬಿಹಾರ) : ದೇಶಾದ್ಯಂತ ಸುದ್ದಿಯಾಗಿರುವ ಸಂಸತ್ ಭದ್ರತಾ ಲೋಪ ಪ್ರಕರಣದ ತನಿಖೆ ತೀವ್ರಗೊಂಡಿದೆ. ಈ ಸಂಬಂಧ ಎಟಿಎಸ್​ ತಂಡ ಹಾಗೂ ದೆಹಲಿ ಪೊಲೀಸರು ಭದ್ರತಾ ಲೋಪ ಪ್ರಕರಣದ ಮಾಸ್ಟರ್​ ಮೈಂಡ್​ ಎಂದೇ ಕರೆಯಲಾದ ಲಲಿತ್ ಝಾ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ದರ್ಭಂಗಾದ ಬಹೇರಾ ಜಿಲ್ಲೆಯ ರಾಂಪುರ ಉದಯ ಗ್ರಾಮಕ್ಕೆ ಸೋಮವಾರ ಸಂಜೆ ಎಟಿಎಸ್​ ತಂಡ ಭೇಟಿ ಆಗಮಿಸಿ ಪರಿಶೀಲನೆ ನಡೆಸಿದೆ. ಜೊತೆಗೆ ಮಂಗಳವಾರ ದೆಹಲಿ ಪೊಲೀಸರು ಕೂಡ ಲಲಿತ್​ ಝಾ ಮನೆಗೆ ಆಗಮಿಸಿ ವಿಚಾರಣೆ ನಡೆಸಿದ್ದಾರೆ.

ಎಟಿಎಸ್​ ಮತ್ತು ದೆಹಲಿ ಪೊಲೀಸರಿಂದ ತನಿಖೆ : ಪ್ರಕರಣ ಪ್ರಮುಖ ಆರೋಪಿ ಲಲಿತ್​ ಝಾ ಅವರ ತಂದೆ ತಾಯಿಯನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಲಲಿತ್ ಝಾ ತಂದೆ ದೇವಾನಂದ್ ಝಾ, ತಾಯಿ ಮಂಜುಳಾ ಝಾ, ಸಹೋದರರಾದ ಹರಿದರ್ಶನ್​ ಝಾ ಮತ್ತು ಶಂಭು ಝಾ ಅವರನ್ನು ಅಧಿಕಾರಿಗಳು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಸೋಮವಾರ ಇಬ್ಬರು ಎಟಿಎಸ್​ ಅಧಿಕಾರಿಗಳು ಲಲಿತ್ ಝಾ ಮನೆಗೆ ಭೇಟಿ ನೀಡಿದ್ದರು ಎಂದು ಬಹೇರಾ ಪೊಲೀಸ್​ ಠಾಣೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ : ಇಬ್ಬರು ಎಟಿಎಸ್​ ಅಧಿಕಾರಿಗಳು ಝಾ ಕುಟುಂಬ ಸದಸ್ಯರನ್ನು ಸುಮಾರು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಲಲಿತ್​ ಝಾ ಕುರಿತ ಹಲವು ಮಾಹಿತಿಗಳನ್ನು ಕುಟುಂಬ ಸದಸ್ಯರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ಲಲಿತ್​ ಯಾವಾಗ ಊರಿಗೆ ಬಂದು ಹೋಗುತ್ತಿದ್ದರು , ಏನೆಲ್ಲ ಕೆಲಸ ಮಾಡುತ್ತಿದ್ದರು ಎಂದೆಲ್ಲ ಮಾಹಿತಿ ಕಲೆ ಹಾಕಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಲಲಿತ್​ ಝಾ ತಂದೆ ದೇವಾನಂದ್ ಝಾ, ಎಟಿಎಸ್​ ತಂಡ ನನ್ನ ಸ್ಥಿರಾಸ್ತಿ ಮತ್ತು ಚರಾಸ್ತಿಗಳ ಬಗ್ಗೆ ವಿಚಾರಣೆ ನಡೆಸಿದೆ. ಲಲಿತ್​ ಝಾ ಸಹೋದರರನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಲಲಿತ್​ ಝಾ ಯಾವಾಗ ಊರಿಗೆ ಬಂದು ಹೋಗುತ್ತಿದ್ದರು. ಲಲಿತ್​ ಝಾ ಕುರಿತ ಹಲವು ಮಾಹಿತಿಗಳನ್ನು ಪಡೆದಿದ್ದಾರೆ ಎಂದು ಹೇಳಿದರು.

ಲಲಿತ್ ಝಾ ಕೃತ್ಯದಿಂದಾಗಿ ಕುಟುಂಬದ ಸದಸ್ಯರಿಗೆ ಸಂಕಷ್ಟ ಎದುರಾಗಿದೆ. ಪ್ರಕರಣದಲ್ಲಿ ಲಲಿತ್​ ಹೆಸರು ಕೇಳಿ ಬಂದಾಗಿನಿಂದ ನಮಗೆ ಮನೆಯಿಂದ ಹೊರಗಡೆ ತೆರಳಲು ಸಾಧ್ಯವಾಗುತ್ತಿಲ್ಲ. ಹಲವರು ಆಗಾಗ್ಗೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಇದರಿಂದಾಗಿ ಕೋಲ್ಕತ್ತಾಗೆ ಕೆಲಸಕ್ಕೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ಲಲಿತ್​ ಝಾ ತಂದೆ ದೇವಾನಂದ್​ ಝಾ ಹೇಳಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಬಹೇರಾ ಪೊಲೀಸ್ ಠಾಣೆ ಅಧಿಕಾರಿ, ಎಟಿಎಸ್​ ತಂಡ ಲಲಿತ್​ ಝಾ ತಂದೆ ಅವರನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದೆ. ಇಂದು ದೆಹಲಿ ಪೊಲೀಸರು ರಾಂಪುರ್​ ಉದಯ್​ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಸಂಸತ್​ನಲ್ಲಿ ಭದ್ರತಾ ಲೋಪ ಪ್ರಕರಣ: ಘಟನೆ ಬಗ್ಗೆ ಪ್ರಧಾನಿ ಮೌನ ಮುರಿಯುವಂತೆ ಚೌಧರಿ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.