ಕರ್ನಾಟಕ

karnataka

ಬಾಗಲಕೋಟೆಯಲ್ಲಿ ಭಾರೀ ಮಳೆ: ಕೋಳಿ ಫಾರ್ಮ್​ಗೆ ನುಗ್ಗಿದ ನೀರು

By

Published : Oct 21, 2019, 7:41 PM IST

ಬಾಗಲಕೋಟೆ: ಜಿಲ್ಲೆಯಲ್ಲಿ ಕಳೆದ ಹಲವು ದಿನದಿಂದ ಮಳೆಯಾಗುತ್ತಿರುವ ಕಾರಣ, ಮುಧೋಳ ಹಾಗೂ ಜಮಖಂಡಿ ತಾಲೂಕಿನಲ್ಲಿ ಸಾಕಷ್ಟು ಹಾನಿ ಉಂಟಾಗಿದೆ. ಮುಧೋಳ ಪಟ್ಟಣದ ಹೊರ ವಲಯದಲ್ಲಿದ್ದ ಕೋಳಿ ಫಾರ್ಮ್​ಗೆ ನೀರು ನುಗ್ಗಿ ಸಾವಿರಾರು ಸಂಖ್ಯೆ ಕೋಳಿಗಳು ಜಲಾವೃತಗೊಂಡು ಮೃತ ಪಟ್ಟಿವೆ. ಇದರಿಂದ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿ ಪರದಾಡುವಂತಾಗಿದೆ. ಬಾಲಚಂದ್ರ ಹೀರೆಗೋಳಬಾಳ ಎಂಬ ರೈತ ತಮ್ಮ ಜಮೀನಿನಲ್ಲಿ ಸುಮಾರು ಐದು ಸಾವಿರದಷ್ಟು ಕೋಳಿ ಸಾಕಣೆ ಮಾಡಿದ್ದರು. ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಶೆಡ್​ಗೆ ನೀರು‌ ನುಗ್ಗಿ ಅನಾಹುತ ಸಂಭವಿಸಿದೆ.

ABOUT THE AUTHOR

...view details