ಕರ್ನಾಟಕ

karnataka

ತುಮಕೂರು ರಾಷ್ಟ್ರೀಯ ಹೆದ್ದಾರಿ​ ಬಳಿ ಲಾರಿ ಚಾಲಕ ನೇಣಿಗೆ ಶರಣು

By

Published : May 22, 2020, 11:08 AM IST

ಲಾರಿ ಚಾಲಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ರಾಷ್ಟ್ರೀಯ ಹೆದ್ದಾರಿಯ ಅಂಡರ್​ ಪಾಸ್​ ಬಳಿ ನಡೆದಿದೆ.

sdd
ತುಮಕೂರು ರಾಷ್ಟ್ರೀಯ ಹೆದ್ದಾರಿ​ ಬಳಿ ಲಾರಿ ಚಾಲಕ ನೇಣಿಗೆ ಶರಣು..!

ತುಮಕೂರು:ವೈಯಕ್ತಿಕ ಸಮಸ್ಯೆಯಿಂದ ಮನನೊಂದಿದ್ದ ಲಾರಿ ಚಾಲಕನೊಬ್ಬನ ಶವ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48ರ ಅಂಡರ್ ಪಾಸ್ ಸಮೀಪ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ತುಮಕೂರು ರಾಷ್ಟ್ರೀಯ ಹೆದ್ದಾರಿ​ ಬಳಿ ಲಾರಿ ಚಾಲಕ ನೇಣಿಗೆ ಶರಣು

ಮಧುಸೂದನ್ (30) ಮೃತ ಲಾರಿ ಚಾಲಕ. ಈತ ಕನಕಪುರ ತಾಲೂಕಿನ ಹಾರೋಹಳ್ಳಿ ಗ್ರಾಮದವನೆಂದು ಮಾಹಿತಿ ಲಭ್ಯವಾಗಿದೆ. ನಿನ್ನೆ ರಾತ್ರಿ ಶಿರಾಗೆ ತೆರಳಿದ್ದ ಮಧುಸೂದನ್​, ನಗರದಲ್ಲಿ ತಮ್ಮ ಸಂಬಂಧಿಕರ ಮನೆಗೆ ಹೋಗಬೇಕೆಂದು ಮತ್ತೊಬ್ಬ ಲಾರಿ ಚಾಲಕನಿಗೆ ಲಾರಿ ಕೊಟ್ಟು ಕಳುಹಿಸಿದ್ದನಂತೆ.

ನಡುರಾತ್ರಿ ಹೆದ್ದಾರಿಯ ಅಂಡರ್ ಪಾಸ್ ಬಳಿ ಕಬ್ಬಿಣದ ಪೈಪ್​ಗೆ ನೇಣು ಬಿಗಿದಕೊಂಡಿದ್ದಾನೆ. ಈ ಸಂಬಂಧ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details