ಕರ್ನಾಟಕ

karnataka

ಮಾಜಿ ಡಿಸಿಎಂ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಪೈಪೋಟಿ.. ಕೈ ಕಾರ್ಯಕರ್ತೆಯರ ನಡುವೆ ಕಿತ್ತಾಟ

By

Published : Jun 8, 2022, 4:40 PM IST

ಮಾಜಿ ಡಿಸಿಎಂ ಪರಮೇಶ್ವರ್​ರೊಂದಿಗೆ ಫೋಟೋ ತೆಗೆಸಿಕೊಳ್ಳುವ ವಿಚಾರವಾಗಿ ಇಬ್ಬರು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕಿತ್ತಾಟ ನಡೆದಿದೆ.

clash between lady congress activists in tumkur
ಕಾಂಗ್ರೆಸ್ ಕಾರ್ಯಕರ್ತೆಯರ ನಡುವೆ ಕಿತ್ತಾಟ

ತುಮಕೂರು: ತುಮಕೂರು ಜಿಲ್ಲಾ ಕಾರಾಗೃಹದಲ್ಲಿ ಬಂಧಿತರಾಗಿರುವ ಎನ್ಎಸ್​ಯುಐ ಕಾರ್ಯಕರ್ತರನ್ನು ಭೇಟಿ ಮಾಡಲು ಇಂದು ಮಾಜಿ ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಬಂದಿದ್ದರು. ಅವರೊಂದಿಗೆ ಜೈಲಿನ ಹೊರಗಡೆ ಫೋಟೋ ತೆಗೆಸಿಕೊಳ್ಳುವ ವಿಚಾರವಾಗಿ ಇಬ್ಬರು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಕಿತ್ತಾಡಿಕೊಂಡಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತೆಯರ ನಡುವೆ ಕಿತ್ತಾಟ!

ಮಹಿಳಾ ಕಾಂಗ್ರೆಸ್ ಕಾರ್ಯಕರ್ತರಾದ ಗೀತಾ ಮತ್ತು ಸಹೇರ ಎಂಬುವವರ ಮಧ್ಯೆ ಜಗಳವಾಗಿದೆ. ಇಬ್ಬರ ನಡುವೆ ನೂಕಾಟ ತಳ್ಳಾಟ ಸಹ ನಡೆದಿದೆ. ಮಾಜಿ ಡಿಸಿಎಂ ಪರಮೇಶ್ವರ್ ಜೈಲು ಆವರಣದಿಂದ ಹೊರಟ ಬಳಿಕ ಜಗಳಕ್ಕೆ ಇಳಿದಿದ್ದಾರೆ. ಮಾಧ್ಯಮಗಳ ಕ್ಯಾಮರಾ ಕಂಡು ಪಕ್ಷದ ಮುಖಂಡರು ಎಚ್ಚೆತ್ತುಕೊಂಡು ಇವರಿಬ್ಬರ ಜಗಳ ಬಿಡಿಸಿದ್ದಾರೆ.

ಇದನ್ನೂ ಓದಿ:ಮೊದಲು ಚಡ್ಡಿ ಸರಿಯಾಗಿ ಇಟ್ಕೊಳೋಕೆ ಹೇಳಿ; ಮಾಜಿ ಶಾಸಕನಿಗೆ ನಾಗರಾಜ್ ಯಾದವ್ ತಿರುಗೇಟು

ABOUT THE AUTHOR

...view details