ಕರ್ನಾಟಕ

karnataka

ಹಾಸನ: ರಂಗೋಲಿ ಬಿಡಿಸುತ್ತಿದ್ದ ಮಹಿಳೆಯ ಸರ ಕಸಿದು ಪರಾರಿಯಾದ ಖತರ್ನಾಕ್ ಖದೀಮ

By

Published : Aug 7, 2022, 6:41 PM IST

chain snatching in Hassan
ಹಾಸನದಲ್ಲಿ ಸರ ಗಳ್ಳತನ

ಹೊಳೆನರಸೀಪುರ ಪಟ್ಟಣದಲ್ಲಿ ಮಹಿಳೆಯ ಸರ ಕಸಿದು ಖದೀಮ ಪರಾರಿಯಾಗಿದ್ದಾನೆ. 2 ವಿಶೇಷ ತಂಡ ರಚನೆ ಮಾಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹಾಸನ: ಮಹಿಳೆಯೊಬ್ಬರು ರಂಗೋಲಿ ಹಾಕುವ ವೇಳೆ ಕಳ್ಳನೋರ್ವ ಮಹಿಳೆಯ ಸರ ಕಸಿದುಕೊಂಡು ಹೋದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಅಕ್ಕಿ ಕುರುಬರ ಬೀದಿಯಲ್ಲಿ ಸರಸ್ವತಿ ಎನ್ನುವವರು ರಂಗೋಲಿ ಹಾಕುತ್ತಿದ್ದರು. ಆ ವೇಳೆ ಖತರ್ನಾಕ್ ಕಳ್ಳನೋರ್ವ ಎರಡು ಮೂರು ಬಾರಿ ಅತ್ತ ಇತ್ತ ಓಡಾಡಿ ನಂತರ ಏಕಾಏಕಿ ಮಹಿಳೆಯ ಕುತ್ತಿಗೆಗೆ ಕೈಹಾಕಿ ಸರ ಕಿತ್ತುಕೊಳ್ಳಲು ಪ್ರಯತ್ನ ಮಾಡಿದ್ದಾನೆ. ಮಹಿಳೆ ಕಿರುಚಲು ಪ್ರಾರಂಭಿಸಿದಾಗ ಕತ್ತಿಗೆ ಕೈಹಾಕಿ, ಬಿಗಿಯಾಗಿ ಬಾಯಿ ಮುಚ್ಚಿಸಿ ಬಳಿಕ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಹಾಸನದಲ್ಲಿ ಸರ ಗಳ್ಳತನ

ಇದನ್ನೂ ಓದಿ:ಬೆಳಗಾವಿಯಲ್ಲಿ ಕೆಎಸ್​ಆರ್​ಟಿಸಿ ಬಸ್ ಪಲ್ಟಿ: ಐವರು ಪ್ರಯಾಣಿಕರಿಗೆ ಗಾಯ

ಈ ಚಾಲಾಕಿ ಕಳ್ಳ ತನ್ನ ಗುರುತು ಸಿಗದಿರಲಿ ಎಂದು ಹೆಲ್ಮೆಟ್ ಹಾಕಿಕೊಂಡು ಬಂದಿದ್ದನಂತೆ. ಕಳ್ಳನನನ್ನು ಪತ್ತೆ ಹಚ್ಚಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹೊಳೆನರಸೀಪುರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಪತ್ತೆ ಹಚ್ಚಲು 2 ವಿಶೇಷ ತಂಡ ರಚನೆ ಮಾಡಿದ್ದಾರೆ.

ABOUT THE AUTHOR

...view details