ಕರ್ನಾಟಕ

karnataka

ನಗರಸಭೆಯಲ್ಲಿ ಫಾರಂ -3 ವಿತರಣೆಗೆ ಪ್ರತ್ಯೇಕ ಕೌಂಟರ್: ಪೌರಾಯುಕ್ತ ಮನ್ಸೂರ್ ಅಲಿ

By

Published : Feb 19, 2021, 12:50 PM IST

ನಗರಸಭೆಯಲ್ಲಿ ಆಸ್ತಿ ಫಾರಂ-3 ವಿತರಣೆಯಲ್ಲಿ ಜನರಲ್ಲಿ ಗೊಂದಲವಿತ್ತು. ಅಲ್ಲದೇ, ನೀಡುವುದರಲ್ಲಿ ವಿಳಂಬವಾಗುತ್ತಿತ್ತು.‌ ಇದನ್ನು ತಪ್ಪಿಸಲು ಪ್ರತ್ಯೇಕ ಮೂರು ಕೌಂಟರ್ ಗಳನ್ನು ತೆರೆಯಲಾಗಿದೆ ಎಂದು ನಗರಸಭೆಯ ಪೌರಾಯುಕ್ತ ಮನ್ಸೂರ್ ಅಲಿ ತಿಳಿಸಿದ್ದಾರೆ.

Hosapete municipality
ಹೊಸಪೇಟೆ ನಗರಸಭೆ

ಹೊಸಪೇಟೆ:ಈ‌ ಹಿಂದೆ ಫಾರಂ- 3 ವಿತರಣೆಯಲ್ಲಿ ಸಮಸ್ಯೆಯಾಗಿತ್ತು. ಅದನ್ನು ಹೋಗಲಾಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ನಗರಸಭೆಯ ಪೌರಾಯುಕ್ತ ಮನ್ಸೂರ್ ಅಲಿ ಹೇಳಿದರು.

ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ

ನಗರದಲ್ಲಿ ಸುದ್ದಿಗಾರೊಂದಿಗೆ ಅವರು ಮಾತನಾಡಿ, ನಗರಸಭೆಯಲ್ಲಿ ಆಸ್ತಿ ಫಾರಂ-3 ವಿತರಣೆಯಲ್ಲಿ ಜನರಲ್ಲಿ ಗೊಂದಲವಿತ್ತು. ಅಲ್ಲದೇ, ನೀಡುವುದಲ್ಲಿ ವಿಳಂಬವಾಗುತ್ತಿತ್ತು.‌ ಇದನ್ನು ತಪ್ಪಿಸಲು ಪ್ರತ್ಯೇಕ ಮೂರು ಕೌಂಟರ್​​ಗಳನ್ನು ತೆರೆಯಲಾಗಿದೆ ಎಂದರು.

ರಿನಿವಲ್, ಹೊಸ ಅರ್ಜಿಗೆ ಹಾಗೂ ಮುಟೇಶನ್ ಗೆ ಪ್ರತ್ಯೇಕ ಕೌಂಟರ್ ಗಳನ್ನು ಸ್ಥಾಪಿಸಲಾಗಿದೆ.‌ ಸ್ವಲ್ಪ ಮಟ್ಟಿಗೆ ಸಮಸ್ಯೆ ತಗ್ಗಿದ್ದಂತಿದೆ.‌ ಹಾಗಾಗಿ ಜನರು ಆತಂಕ ಪಡುವ ಅವಶ್ಯಕತೆ ಇಲ್ಲ. ಸಾರ್ವಜನಿಕರು ನೇರವಾಗಿ ಸಂಪರ್ಕಿಸಬಹುದು ಎಂದು ಹೇಳಿದರು.

ABOUT THE AUTHOR

...view details