ಕರ್ನಾಟಕ

karnataka

ಬಹುಮಹಡಿ ಕಟ್ಟಡದ ಅಗ್ನಿ ಅವಘಡ ನಿಯಂತ್ರಣಕ್ಕೆ ಬಂತು ಏರಿಯಲ್ ಲ್ಯಾಡರ್ ವೆಹಿಕಲ್

By

Published : Oct 19, 2022, 5:04 PM IST

ಸುಮಾರು 25 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಗೃಹ ಇಲಾಖೆ ಏರಿಯಲ್ ಲ್ಯಾಡರ್ ವಾಹನ ಖರೀದಿಸಿದ್ದು, ಮುಂಬೈ ಮೂಲಕ ಬೆಂಗಳೂರು ತಲುಪಿದೆ. ದೇಶದಲ್ಲೇ ಮುಂಬೈ ಬಳಿಕ ಏರಿಯಲ್ ಲ್ಯಾಡರ್ ಸೌಲಭ್ಯ ಪಡೆದ ಎರಡನೇ ನಗರ ಎಂಬ ಖ್ಯಾತಿಗೆ ಬೆಂಗಳೂರು ಪಾತ್ರವಾಗಿದೆ.

ಬಹುಮಹಡಿ ಕಟ್ಟಡದ ಅಗ್ನಿ ಅವಘಡ ನಿಯಂತ್ರಣಕ್ಕೆ ಬಂತು ಏರಿಯಲ್ ಲ್ಯಾಡರ್ ವೆಹಿಕಲ್
An aerial ladder vehicle reached the city to control the fire incident in the multi storied building

ಬೆಂಗಳೂರು : ಬಹುಮಹಡಿ ಕಟ್ಟಡಗಳಲ್ಲಿ‌ ಸಂಭವಿಸುವ ಅಗ್ನಿ ಅವಘಡಗಳನ್ನ ಸಮರ್ಥವಾಗಿ ನಿಭಾಯಿಸಲು ಅಗತ್ಯ ಇರುವ ಏರಿಯಲ್ ಲ್ಯಾಡರ್ ವಾಹನ ಕೊನೆಗೂ ನಗರದ ಅಗ್ನಿಶಾಮಕ ದಳದ ಕೈಸೇರಿದೆ.

ಏರಿಯಲ್ ಲ್ಯಾಡರ್ ವೆಹಿಕಲ್

90 ಮೀಟರ್‌ಗಳಷ್ಟು ಎತ್ತರದ ಕಟ್ಟಡಗಳಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಅದನ್ನು ಎದುರಿಸಲು ಸಹಾಯಕಾರಿಯಾಗಬಲ್ಲ ಲ್ಯಾಡರ್ ವಾಹನವನ್ನು ಫಿನ್ಲೆಂಡ್‌ನಿಂದ ಆಮದು ಮಾಡಿಕೊಳ್ಳಲಾಗಿದೆ. ಇತ್ತೀಚೆಗೆ ಬೇಗೂರಿನ ಬಳಿ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಸೂಕ್ತ ಸಮಯಕ್ಕೆ ಅಗ್ನಿಶಾಮಕ ದಳ ತಲುಪುವ ವ್ಯವಸ್ಥೆ ಇರದ ಮಹಿಳೆಯೊಬ್ಬರು ಸಜೀವ ದಹನವಾಗಿದ್ದರು. ಇಂಥ ಘಟನೆಗಳಿಂದ ಎಚ್ಚೆತ್ತ ರಾಜ್ಯ ಅಗ್ನಿಶಾಮಕ ಇಲಾಖೆ ಏರಿಯಲ್ ಲ್ಯಾಡರ್ ವಾಹನ ಖರೀದಿಗೆ ಪ್ರಸ್ತಾವನೆ ಇಟ್ಟಿತ್ತು.

ಏರಿಯಲ್ ಲ್ಯಾಡರ್ ವೆಹಿಕಲ್

ಸುಮಾರು 25 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಗೃಹ ಇಲಾಖೆ ಏರಿಯಲ್ ಲ್ಯಾಡರ್ ವಾಹನ ಖರೀದಿಸಿದ್ದು, ಮುಂಬೈ ಮೂಲಕ ಬೆಂಗಳೂರು ತಲುಪಿದೆ. ದೇಶದಲ್ಲೇ ಮುಂಬೈ ಬಳಿಕ ಏರಿಯಲ್ ಲ್ಯಾಡರ್ ಸೌಲಭ್ಯ ಪಡೆದ ಎರಡನೇ ನಗರ ಎಂಬ ಖ್ಯಾತಿಗೆ ಬೆಂಗಳೂರು ಪಾತ್ರವಾಗಿದೆ.

ಏರಿಯಲ್ ಲ್ಯಾಡರ್ ವೆಹಿಕಲ್
ಏರಿಯಲ್ ಲ್ಯಾಡರ್ ವೆಹಿಕಲ್
ಏರಿಯಲ್ ಲ್ಯಾಡರ್ ವೆಹಿಕಲ್

ಇದನ್ನೂ ಓದಿ: ಬಿಎಚ್‌ಇಎಲ್‌ನಲ್ಲಿ ಅಗ್ನಿ ಅವಘಡ: 18 ವಿದ್ಯತ್​ ಫಲಕಗಳು ಬೆಂಕಿಗಾಹುತಿ

ABOUT THE AUTHOR

...view details