ಕರ್ನಾಟಕ

karnataka

ರಾತ್ರೋರಾತ್ರಿ ಈ ವ್ಯಕ್ತಿಯನ್ನ ಕಾರಿನಲ್ಲಿ ಹಾಕ್ಕೊಂಡ್ಹೋದರು.. ಇದು ಕಿಡ್ನ್ಯಾಪ್ ಅಂತೂ ಅಲ್ಲವೇ ಅಲ್ಲ.. ಅದೇನ್ ನೋಡಿ..

By

Published : Dec 26, 2021, 3:06 PM IST

ಸದ್ಯದ ಘಟನೆ ಬಗ್ಗೆ ವಿಚಾರಿಸಿದಾಗ, 35 ವರ್ಷದ ವ್ಯಕ್ತಿ ಕುಡಿತದ ಚಟಕ್ಕೆ ಬಿದ್ದಿದ್ದ. ಕೆಲವೊಮ್ಮೆ ಮನೆಗೂ ಬರುತ್ತಿರಲಿಲ್ಲ. ಇದರಿಂದ ಕಂಗಾಲಾಗಿದ್ದ ಕುಟುಂಬಸ್ಥರು ಕುಡಿತದ ಚಟ ಬಿಡಿಸುವ ಪುನರ್ವಸತಿ ಕೇಂದ್ರಕ್ಕೆ ಕಳಿಸುವ ನಿರ್ಧಾರ ಮಾಡಿದ್ರು. ಹಲವು ಬಾರಿ ಪ್ರಯತ್ನಿಸಿದರೂ ವ್ಯಕ್ತಿ ತಪ್ಪಿಸಿಕೊಂಡು ಹೋಗುತ್ತಿದ್ದ..

person was taken in to a rehabilitation center as like kidnap type
ಕುಡಿತದ ಚಟ ಬಿಡಿಸುವ ಪುನರ್ವಸತಿ ಕೇಂದ್ರಕ್ಕೆ ವ್ಯಕ್ತಿಯನ್ನು ಕರೆದೊಯ್ದಿದ್ದು ಹೀಗೆ

ಕೆ.ಆರ್.ಪುರ(ಬೆಂಗಳೂರು): ವ್ಯಕ್ತಿಯ ಕುಡಿತದ ಚಟ ಬಿಡಿಸಲು ಕುಟುಂಬಸ್ಥರು ಕುಡಿತದ ಚಟ ಬಿಡಿಸುವ ಪುನರ್ವಸತಿ ಕೇಂದ್ರಕ್ಕೆ ಬಲವಂತವಾಗಿ ಕಾರಿನಲ್ಲಿ ಕೂರಿಸಿ ಕರೆದೊಯ್ದಿದ್ದಾರೆ. ಇದನ್ನು ಕಂಡ ಸ್ಥಳೀಯರು 112ಕ್ಕೆ ಕರೆ ಮಾಡಿ ಹೇಳಿದ್ದೇನು, ಮುಂದಾಗಿದ್ದೇನು? ಎಂಬುದನ್ನು ಕೇಳಿದ್ರೆ ಆಶ್ಚರ್ಯಪಡುತ್ತೀರಿ.

ಡಿ. 19ರ ಮಧ್ಯರಾತ್ರಿ 11:50ರ ಸುಮಾರಿಗೆ ಕೆಆರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ವಿನಾಯಕ ಲೇಔಟ್​​ ಬಳಿಯ ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿಯನ್ನು ಓಮ್ನಿ ಕಾರಿನಲ್ಲಿ ಬಂದ ಗುಂಪೊಂದು ಬಲವಂತವಾಗಿ ಕರೆದೊಯ್ಯುತ್ತಾರೆ.

ಇದನ್ನು ಕಂಡ ಸ್ಥಳೀಯರು 112ಕ್ಕೆ ಕರೆ ಮಾಡಿ ವ್ಯಕ್ತಿಯೊಬ್ಬರನ್ನು ಕಿಡ್ನ್ಯಾಪ್​​ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ. ತಕ್ಷಣ ಘಟನಾ ಸ್ಥಳಕ್ಕೆ ಬಂದ ಕೆಆರ್‌​ಪುರ ಪೊಲೀಸರು ತಮ್ಮ ಕಾರ್ಯ ಚುರುಕುಗೊಳಿಸಿದ್ದಾರೆ.

ಕುಡಿತದ ಚಟ ಬಿಡಿಸುವ ಪುನರ್ವಸತಿ ಕೇಂದ್ರಕ್ಕೆ ವ್ಯಕ್ತಿಯನ್ನು ಕರೆದೊಯ್ದಿದ್ದು ಹೀಗೆ..

ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ವ್ಯಕ್ತಿಯನ್ನು ಬಲವಂತವಾಗಿ ಯುವಕರ ಗುಂಪೊಂದು ಕಾರಿನಲ್ಲಿ ಕರೆದೊಯ್ಯುತ್ತಿರುವ ದೃಶ್ಯ ಕಂಡಿದೆ. ತಕ್ಷಣವೇ ಆ್ಯಕ್ಟೀವ್​ ಆದ ಪೊಲೀಸರು ಕಾರಿನ ನಂಬರ್ ಟ್ರೇಸ್ ಮಾಡಿದ್ದಾರೆ. ಆಗ ಇದು ಕುಡಿತದ ಚಟ ಬಿಡಿಸುವ ಪುನರ್ವಸತಿ ಕೇಂದ್ರದ ವಾಹನ ಎಂದು ಗೊತ್ತಾಗಿದೆ.

ಇದೇ ರೀತಿ ಎರಡು ತಿಂಗಳ ಹಿಂದೆ ಕಾರ್​ನಲ್ಲಿ ಓರ್ವ ಯುವಕನನ್ನು ಬಲವಂತವಾಗಿ ಕರೆದೊಯ್ದಿದ್ದರು. ಕಿಡ್ನ್ಯಾಪ್ ಆಗಿದೇ ಎಂದೇ ತಲೆ ಕೆಡಿಸಿಕೊಂಡು ಹುಡುಕಾಡಿದ್ದ ಪೊಲೀಸರಿಗೆ, ಇದು ಹೊಸಕೋಟೆ ಬಳಿಯ ಪುನರ್ವಸತಿ ಕೇಂದ್ರವೊಂದರ ಕಾರು ಅನ್ನೋದು ಗೊತ್ತಾಗಿತ್ತು.

ಇದನ್ನೂ ಓದಿ:ಕೊಪ್ಪಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಫೋಟೋ ಇಟ್ಟು ವಾಮಾಚಾರ

ಸದ್ಯದ ಘಟನೆ ಬಗ್ಗೆ ವಿಚಾರಿಸಿದಾಗ, 35 ವರ್ಷದ ವ್ಯಕ್ತಿ ಕುಡಿತದ ಚಟಕ್ಕೆ ಬಿದ್ದಿದ್ದ. ಕೆಲವೊಮ್ಮೆ ಮನೆಗೂ ಬರುತ್ತಿರಲಿಲ್ಲ. ಇದರಿಂದ ಕಂಗಾಲಾಗಿದ್ದ ಕುಟುಂಬಸ್ಥರು ಕುಡಿತದ ಚಟ ಬಿಡಿಸುವ ಪುನರ್ವಸತಿ ಕೇಂದ್ರಕ್ಕೆ ಕಳಿಸುವ ನಿರ್ಧಾರ ಮಾಡಿದ್ರು. ಹಲವು ಬಾರಿ ಪ್ರಯತ್ನಿಸಿದರೂ ವ್ಯಕ್ತಿ ತಪ್ಪಿಸಿಕೊಂಡು ಹೋಗುತ್ತಿದ್ದ.

ಈ ಬಾರಿ ಹಾಗಾಗದಂತೆ ಯುವಕನನ್ನು ಕುಟುಂಬಸ್ಥರೇ ಸೇರಿ ಕಳಿಸುವ ಪ್ಲ್ಯಾನ್​ ಮಾಡಿದ್ದಾರೆ. ಆತನನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿ ಕರೆ ತರಲಾಯಿತು ಎಂದು ಹೊಸಕೋಟೆ ಬಳಿಯ ಪುನರ್ವಸತಿ ಕೇಂದ್ರ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details