ಸುಲ್ತಾನಪುರ್(ಯುಪಿ):ದೇಶದಲ್ಲಿ ಲೋಕಸಭೆ ಕಾವು ರಂಗೇರಿದ್ದು, ಈಗಾಗಲೇ ಮೊದಲ ಹಂತದ ವೋಟಿಂಗ್ ಮುಕ್ತಾಯಗೊಂಡಿದೆ. ಇದರ ಮಧ್ಯೆ ಪ್ರಚಾರ ಸಭೆ ನಡೆಸುತ್ತಿದ್ದ ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಮೇನಕಾ ಗಾಂಧಿ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಉತ್ತರಪ್ರದೇಶದ ಸುಲ್ತಾನ್ಪುರ್ ಲೋಕಸಭಾ ಕ್ಷೇತ್ರದ ಹಳ್ಳಿ ತುರ್ಬಾ ಖಾನಿಯಲ್ಲಿ ಮೇನಕಾ ಗಾಂಧಿ ಚುನಾವಣಾ ರಾಲಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ನೀವು ನನಗೆ ವೋಟ್ ಹಾಕದಿದ್ದರೆ ನಿಮಗೆ ಕೆಲಸ ಕೊಡಿಸುವುದಿಲ್ಲ ಎಂದಿದ್ದಾರೆ.
ಈಗಾಗಲೇ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಆಗಿರುವ ಅವರು, ಚುನಾವಣೆಯಲ್ಲಿ ಮುಸ್ಲಿಂರ ಬೆಂಬಲವಿಲ್ಲದೇ ನನಗೆ ಗೆಲುವು ಕಷ್ಟ. ನೀವೂ ವೋಟ್ ಮಾಡದಿದ್ದರೆ ನನಗೆ ನೋವಾಗುವುದು. ಒಂದು ವೇಳೆ ನೀವು ನನಗೆ ವೋಟ್ ಹಾಕದಿದ್ದರೆ ಕೆಲಸ ಪಡೆದುಕೊಳ್ಳುವುದು ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದ ಪಿಲಿಬಿಟ್ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮೇನಕಾ ಈ ಸಲ ಆ ಕ್ಷೇತ್ರವನ್ನ ಮಗನಿಗೆ ಬಿಟ್ಟುಕೊಟ್ಟು ತಾವೂ ಸುಲ್ತಾನ್ಪುರ್ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.