ETV Bharat / state

ಕರಗದ ವೇಳೆ ಮೈ ತಾಕಿದ್ದಕ್ಕೆ ಬಾಲಕನ ಹತ್ಯೆ ಆರೋಪ: ನಾಲ್ವರು ಅಪ್ರಾಪ್ತರು‌ ವಶಕ್ಕೆ - Boy Murder

author img

By ETV Bharat Karnataka Team

Published : Apr 25, 2024, 6:47 PM IST

Updated : Apr 25, 2024, 9:12 PM IST

four-minors-detained-for-killing-a-boy-in-bengaluru
ಕರಗದ ವೇಳೆ ಮೈ ತಾಕಿದಕ್ಕೆ ಬಾಲಕನ ಹತ್ಯೆ ಆರೋಪ: ನಾಲ್ವರು ಅಪ್ರಾಪ್ತರು‌ ವಶಕ್ಕೆ

ಬೆಂಗಳೂರು ಕರಗ ಮಹೋತ್ಸವದ ವೇಳೆ ಗಲಾಟೆ ನಡೆದು ಬಾಲಕನ ಕೊಲೆ ಮಾಡಿದ್ದ ಪ್ರಕರಣ ಸಂಬಂಧ ನಾಲ್ವರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕರಗದ ವೇಳೆ ಮೈ ತಾಕಿದ್ದಕ್ಕೆ ಬಾಲಕನ ಹತ್ಯೆ ಆರೋಪ

ಬೆಂಗಳೂರು: ಬೆಂಗಳೂರು ಕರಗ ಮಹೋತ್ಸವದ ವೇಳೆ ನೃತ್ಯ ಮಾಡುವಾಗ ಅಚಾನಕ್ಕಾಗಿ ಮೈ ತಾಕಿದ್ದಕ್ಕೆ ಆಕ್ರೋಶಗೊಂಡು ಬ್ಲೇಡ್​​ನಿಂದ ಬಾಲಕನನ್ನು ಹತ್ಯೆ ಮಾಡಿದ ಆರೋಪದ ಮೇಲೆ ನಾಲ್ವರು ಅಪ್ರಾಪ್ತರನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಸಾರಧಿ ಸಾವನ್ನಪ್ಪಿದ ಬಾಲಕ‌.‌ ಶೇಷಾದ್ರಿಪುರದ ಜೆಸಿಡಬ್ಲ್ಯೂ ಕಾಲೊನಿಯಲ್ಲಿ ವಾಸವಾಗಿದ್ದ ಈತ ಟೈಲ್ಸ್ ಕೆಲಸ‌ ಮಾಡಿಕೊಂಡಿದ್ದ. ಐತಿಹಾಸಿಕ ಬೆಂಗಳೂರು ಕರಗ ಹಿನ್ನೆಲೆಯಲ್ಲಿ ಅಣ್ಣಮ್ಮ ದೇವಸ್ಥಾನದ ಬಳಿ ಬಂದಿದ್ದ. ಬುಧವಾರ ಮುಂಜಾನೆ ಸುಮಾರು 3.30 ರ ವೇಳೆ ನೃತ್ಯ ಮಾಡುತ್ತಿದ್ದ ವೇಳೆ ಸಾರಧಿಯ ಮೈ ಅಲ್ಲೇ‌ ಡ್ಯಾನ್ಸ್ ಮಾಡುತ್ತಿದ್ದ ಅಪ್ರಾಪ್ತರಿಗೆ ತಾಕಿದೆ. ಇಷ್ಟಕ್ಕೆ ಆಕ್ರೋಶಗೊಂಡ ಅಪ್ರಾಪ್ತರು ವಾಗ್ವಾದಕ್ಕೆ ಇಳಿದಿದ್ದಾರೆ. ನೋಡ ನೋಡುತ್ತಿದ್ದಂತೆ ಗಲಾಟೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ವೇಳೆ ಅಪ್ರಾಪ್ತರು ಹೂ ಮಾಲೆ ಕತ್ತರಿಸುವ ಬ್ಲೇಡ್​​ನಿಂದ ಸಾರಧಿ ಎದೆಗೆ ಚುಚ್ಚಿ ಪರಾರಿಯಾಗಿದ್ದರು. ತೀವ್ರ ಗಾಯಗೊಂಡ ಬಾಲಕ ಮನೆಗೆ ತೆರಳಿದ್ದ. ಬಳಿಕ ವಿಪರೀತ ವಾಂತಿ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಹೋಗುವಷ್ಟರಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ‌‌.

ಗಲಾಟೆ ವೇಳೆ ಎದೆಗೆ ಚುಚ್ಚಿದ ಬ್ಲೇಡ್​ನಿಂದ ಹೃದಯಕ್ಕೆ ಗಾಯವಾಗಿ ಬಾಲಕ ಸಾವನ್ನಪ್ಪಿದ್ದಾನೆ‌. ಹತ್ಯೆ ಪ್ರಕರಣ ದಾಖಲಿಸಿಕೊಂಡು ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಲಪುರ ಕೊಳಚೆ ಪ್ರದೇಶದಲ್ಲಿ ವಾಸವಾಗಿದ್ದ ನಾಲ್ವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆ ಹತ್ಯೆ ಕೇಸ್: ಓರ್ವ ಆರೋಪಿ ಪೊಲೀಸ್​ ಬಲೆಗೆ - Woman Murder Case

Last Updated :Apr 25, 2024, 9:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.