ETV Bharat / state

ಸುಡು ಬಿಸಿಲಿಗೆ ಹೆಚ್ಚುತ್ತಿರುವ ಅಗ್ನಿ ಅವಘಡಗಳು: ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಬೆಂಗಳೂರು ವಿವಿ - BENGALURU UNIVERSITY

author img

By ETV Bharat Karnataka Team

Published : Apr 13, 2024, 6:18 PM IST

Bengaluru University
Bengaluru University

ಬೆಂಗಳೂರು ವಿವಿಯ ಆವರಣದಲ್ಲಿನ ಜೈವಿಕ ಉದ್ಯಾನವನ, ದಟ್ಟ ಅರಣ್ಯ ಪ್ರದೇಶದಲ್ಲಿ ಸಂಭವಿಸುತ್ತಿರುವ ಅಗ್ನಿ ಅವಘಡಗಳನ್ನು ತಡೆಗಟ್ಟಲು ವಿವಿ ಮುಂದಾಗಿದೆ.

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಕಳೆದ ಒಂದಿಷ್ಟು ದಿನಗಳಿಂದ ನಿರಂತರವಾಗಿ ಅಗ್ನಿ ಅವಘಡಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ವಿವಿ ಆಡಳಿತ ಮಂಡಳಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ‌.

ಜ್ಞಾನ ಭಾರತಿ ಆವರಣವು ಒಟ್ಟು 1112 ಎಕರೆ ಪ್ರದೇಶದಲ್ಲಿ ವಿಸ್ತಾರವಾಗಿದ್ದು, 300 ಎಕರೆಯಷ್ಟು ಜೈವಿಕ ಉದ್ಯಾನವನ, ದಟ್ಟ ಅರಣ್ಯ ಪ್ರದೇಶವನ್ನು ಹೊಂದಿದೆ. ಬೇಸಿಗೆಯ ತಾಪಮಾನ ಹೆಚ್ಚಾಗುತ್ತಿದ್ದಂತೆ ಆಕಸ್ಮಿಕ ಅಗ್ನಿ ಅವಘಡ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ವಿಶ್ವವಿದ್ಯಾಲಯ ಆಡಳಿತ ಮಂಡಳಿ, ಅಗ್ನಿಶಾಮಕ ದಳ, ಗೃಹ ರಕ್ಷಕ ದಳದ ಜೊತೆ ಸಮನ್ವಯ ಸಾಧಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಅಗ್ನಿಶಾಮಕ ದಳ ಮತ್ತು ಗೃಹ ರಕ್ಷಕ ದಳದಿಂದ ಗಸ್ತು ತಿರುಗುವುದು, ಆವರಣದಲ್ಲಿ ವಾಟರ್ ಪಾಯಿಂಟ್​ಗಳನ್ನು ಹೆಚ್ಚಿಸುವುದು, ನೀರಿನ ಹೊಂಡಗಳ ಸಮರ್ಪಕ ನಿರ್ವಹಣೆ ಮಾಡುವುದು, ಅಗ್ನಿ ಶಾಮಕದಳದ ಸ್ಥಳಕ್ಕೆ ತಲುಪುವಂತೆ ಫೈರ್ ಟ್ರಾಕ್, ಫೈರ್ ಲೈನ್ ನಿರ್ಮಾಣ ಮಾಡುವುದು, ಸಾರ್ವಜನಿಕರು, ವಿದ್ಯಾರ್ಥಿಗಳು ಸ್ವಯಂ ಭಾಗವಹಿಸುವಿಕೆಯನ್ನು ಹೆಚ್ಚಿಸುವುದು., ಕ್ಯಾಂಪಸ್‌ನಲ್ಲಿ ಸತತ ತಪಾಸಣೆ ನಡೆಸುವುದು ಮತ್ತು ಸಮರ್ಪಕ ನಿರ್ವಹಣೆ ಮಾಡಲು ವಿವಿ ಮುಂದಾಗಿದೆ.

ವಿಪರೀತ ಬಿಸಿಲು, ಬಿಸಿ ಗಾಳಿ ಹಿನ್ನೆಲೆ ಬೆಂಕಿ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ವಿವಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಯಾವುದೇ ಅಹಿತಕರ ಘಟನೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಕಿಡಿಗೇಡಿಗಳಿಂದ ಬೆಂಕಿ ಪ್ರಕರಣ ತಡೆಯಲು ಗಸ್ತು ಕಾರ್ಯ ಹೆಚ್ಚಿಸಲಾಗಿದೆ. ಎಲ್ಲಾ ರೀತಿಯಿಂದಲೂ ವಿವಿ ಸೂಕ್ತ ಕ್ರಮ ಕೈಗೊಂಡಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ.ಜಯಕರ ತಿಳಿಸಿದರು.

ಇದನ್ನೂ ಓದಿ: ವಿಜಯಪುರ: ಕಾರು - ಲಾರಿ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ನಾಲ್ವರ ದುರ್ಮರಣ - VIJAYAPURA ACCIDENT

ಅಗ್ನಿಶಾಮಕ ದಳ ಅಧಿಕಾರಿ ಟಿ ಆರ್ ನಂಜೇಗೌಡ ಈ ಬಗ್ಗೆ ಪ್ರತಿಕ್ರಿಯಿಸಿ, ಜ್ಞಾನ ಭಾರತಿ ಆವರಣದಲ್ಲೇ ಅಗ್ನಿಶಾಮಕ ದಳ ಇರುವುದರಿಂದ ತುರ್ತಾಗಿ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದೇವೆ‌. ಪ್ರಾಥಮಿಕ ಹಂತದಲ್ಲೆ ಬೆಂಕಿ ನಂದಿಸುವುದರಿಂದ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹರಡುವುದಿಲ್ಲ. ಬಿಸಿಲ ಬೇಗೆ ಕೂಡ ಹೆಚ್ಚಾಗಿರುವುದರಿಂದ ಪ್ರಕರಣಗಳು ಹೆಚ್ಚಾಗಿದೆ, ಸಣ್ಣ ಮಳೆಯಾದರೆ ಇದರ ಪ್ರಮಾಣ ಕಡಿಮೆಯಾಗಬಹುದು ಎಂದರು.

ಇದನ್ನೂ ಓದಿ: ಬೆಂಗಳೂರು: ಕಾರಿನಲ್ಲಿ‌ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ಹಣ ವಶಕ್ಕೆ - Money found in car

ETV Bharat Logo

Copyright © 2024 Ushodaya Enterprises Pvt. Ltd., All Rights Reserved.