ETV Bharat / entertainment

250 ಕೆಜಿ ತೂಕದ ಚಾಕೊಲೇಟ್​​ನಲ್ಲಿ ದರ್ಶನ್ ಪ್ರತಿಮೆ: ಫಿದಾ ಆದ ಚಾಲೆಂಜಿಂಗ್ ಸ್ಟಾರ್

author img

By ETV Bharat Karnataka Team

Published : Feb 23, 2024, 8:23 PM IST

Updated : Feb 24, 2024, 4:51 PM IST

250 ಕೆಜಿ ತೂಕದ ಪ್ರತ್ರಿಮೆಯ ಕೇಕ್ ನೋಡಿ ಫಿದಾ ಆದ ಚಾಲೆಂಜಿಂಗ್ ಸ್ಟಾರ್
250 ಕೆಜಿ ತೂಕದ ಪ್ರತ್ರಿಮೆಯ ಕೇಕ್ ನೋಡಿ ಫಿದಾ ಆದ ಚಾಲೆಂಜಿಂಗ್ ಸ್ಟಾರ್

ಚಾಲೆಂಜಿಂಗ್ ಸ್ಟಾರ್ ದರ್ಶನ್​ ಅವರ 250 ಕೆಜಿ ತೂಕದ ತಮ್ಮದೇ ಪ್ರತ್ರಿಮೆಯ ಕೇಕ್ ನೋಡಿ ಫಿದಾ ಆಗಿದ್ದಾರೆ. ಜಾಲತಾಣದಲ್ಲಿ ಪ್ರತಿಮೆಯ ಫೋಟೋ ಮತ್ತು ವಿಡಿಯೋ ವೈರಲ್​ ಆಗಿದ್ದು ನೆಟ್ಟಿಗರಿಂದಲೂ​ ಮೆಚ್ಚುಗೆ ವ್ಯಕ್ತವಾಗಿದೆ.

250 ಕೆಜಿ ತೂಕದ ಪ್ರತ್ರಿಮೆ

ಚಾಕೊಲೇಟ್​ನಿಂದಲೇ ಚಾಲೆಂಜಿಂಗ್​ ಸ್ಟಾರ್ ನಟ ದರ್ಶನ್ ಅವರ 6.2 ಅಡಿ ಎತ್ತರದ ಪ್ರತಿಮೆವೊಂದನ್ನು ನಿರ್ಮಿಸುವ ಮೂಲಕ ಅವರ ಆಪ್ತ ಸ್ನೇಹಿತ ವಿನಯ್ ಎಂಬುವರು ಗಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರತಿಮೆಯ ಫೋಟೋ ಮತ್ತು ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರಿಂದ​ ಮೆಚ್ಚುಗೆ ವ್ಯಕ್ತವಾಗಿದೆ.

ಹೌದು, ಇತ್ತೀಚೆಗಷ್ಟೇ ದರ್ಶನ್ ಕನ್ನಡ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಮತ್ತು ತಮ್ಮ ಹುಟ್ಟುಹಬ್ಬದ ಜೊತೆಗೆ 'ಕಾಟೇರ' ಚಿತ್ರ 50 ದಿನ ಯಶಸ್ವಿಗೊಳಿಸಿದ ಹಿನ್ನೆಲೆಯಲ್ಲಿ ರಾಮನಗರದ ರೆಸಾರ್ಟ್​​ವೊಂದರಲ್ಲಿ ಸಕ್ಸಸ್​ ಪಾರ್ಟಿ ಏರ್ಪಡಿಸಲಾಗಿತ್ತು. ಈ ವೇಳೆ ದರ್ಶನ್ ಅವರ ಗೆಳೆಯ ವಿನಯ್ ಚಾಕೊಲೇಟ್​ನಿಂದ ದರ್ಶನ್ ಅವರ ಪ್ರತಿಮೆಯನ್ನು ಸಿದ್ಧಪಡಿಸಿದ್ದರು. ಈ ಕಾರ್ಯಕ್ರಮದ ಸವಿ ನೆನಪಿಗಾಗಿ ಅದನ್ನು ಸ್ವತಃ ದರ್ಶನ್‌ ಅವರಿಗೆ ತೋರಿಸಿ ಸ್ಪೆಷಲ್ ಫೀಲ್ ಕೊಟ್ಟಿದ್ದರು. ಆ ವಿಡಿಯೋ ಮತ್ತು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ಈ ಪ್ರತಿಮೆ 6.2 ಅಡಿ ಎತ್ತರ ಇದ್ದು, ಬರೋಬ್ಬರಿ 250 ಕೆಜಿ ತೂಕದ ಕೇಕ್ ಇದಾಗಿದೆ. ಚಾಕೋಲೆಟ್‌ ಬಳಸಿಯೇ ಈ ಬೃಹತ್ ಪ್ರತಿಮೆಯನ್ನು ನಿರ್ಮಿಸಲಾಗಿದ್ದು, ಸ್ವತಃ ದಾಸ ದರ್ಶನ್ ಬೆರಗಾಗಿದ್ದಾರೆ. ತಮ್ಮ ಹೈಟ್ ಹಾಗೂ ಸ್ಟೈಲ್​ ತಕ್ಕಂತೆ ಇರುವ ಪ್ರತಿಮೆ ಕಂಡು ಅಚ್ಚರಿ ಕೂಡ ವ್ಯಕ್ತಪಡಿಸಿದ್ದಾರೆ. ದರ್ಶನ್ ಅವರ ಅಭಿಮಾನಿಗಳಿಂದಲೂ ಪ್ರತಿಮೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಸೋಷಿಯಲ್ ಮಿಡಿಯಾದಲ್ಲೂ ಈ ಫೋಟೋ ಮತ್ತು ವಿಡಿಯೋಗಳು ಹರಿದಾಡುತ್ತಿದ್ದು, ನೆಟ್ಟಿಗರು ಸಹ ಥ್ರಿಲ್ ಆಗಿದ್ದಾರೆ.

'ಕಾಟೇರ' ಬಾಕ್ಸ್ ಆಫೀಸ್​ನಲ್ಲಿ ಹೊಸ ದಾಖಲೆ ಬರೆದಿದ್ದು ದರ್ಶನ್​ 'ಬಾಕ್ಸ್ ಆಫೀಸ್ ಬಾಸ್' ಎಂಬ ಮಾತು ಮತ್ತೆ ರುಜುವಾತಾಗಿದೆ. 2023ರ ಡಿಸೆಂಬರ್‌ 29ರಂದು ಅದ್ಧೂರಿಯಾಗಿ ತೆರೆಕಂಡ ಈ ಚಿತ್ರ ಎಲ್ಲಾ ಚಿತ್ರಮಂದಿರಗಳಲ್ಲೂ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಮಾಸ್ ಎಂಟರ್​ಟೈನ್ಮೆಂಟ್ ಸಿನಿಮಾ ಇದಾಗಿದ್ದು, ನಾಲ್ಕೈದು ದಶಕಗಳ ಹಿಂದೆ ಜಾತಿವ್ಯವಸ್ಥೆ, ಅಸ್ಪೃಶ್ಯತೆ, ಮೇಲು-ಕೀಳೆನ್ನುವ ಬೇಧಭಾವ ಎಷ್ಟರ ಮಟ್ಟಿಗೆ ಇತ್ತು ಎಂಬುದನ್ನು ಸಹ ತೋರಿಸಿದೆ. ಇದರ ಜೊತೆಗೆ ಉಳುವವನೇ ಹೊಲದೊಡೆಯ ಕಾಯ್ದೆ ದೇಶದಲ್ಲಿ ಎಂಥ ಬದಲಾವಣೆ ತಂದಿತ್ತು ಎಂಬುದರ ಬಗ್ಗೆಯೂ ಸಿನಿಮಾ ಬೆಳಕು ಚೆಲ್ಲಿದೆ. ಸುಧಾಕರ್ ಛಾಯಾಗ್ರಹಣ, ಮಾಸ್ತಿ ಸಂಭಾಷಣೆ, ಜಡೇಶ್ ಕಥೆ ಬರೆದಿರುವ ಈ ಚಿತ್ರಕ್ಕೆ ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹಾಕಿದ್ದರು.

ಇದನ್ನೂ ಓದಿ: ₹200 ಕೋಟಿ ಕ್ಲಬ್‌ನತ್ತ 'ಕಾಟೇರ': ದಚ್ಚು 'ಬಾಕ್ಸ್ ಆಫೀಸ್ ಬಾಸ್‌' ಎಂದ ಫ್ಯಾನ್ಸ್

Last Updated :Feb 24, 2024, 4:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.