ETV Bharat / bharat

ಆಂಧ್ರದಲ್ಲಿ ಪಿಂಚಣಿ ವಿತರಣೆ ಸಮಸ್ಯೆ; ರಾಜ್ಯ ಮುಖ್ಯ ಚುನಾವಣಾಧಿಕಾರಿ ಮೀನಾ ನಡೆಗೆ ವಿಪಕ್ಷಗಳ ಅತೃಪ್ತಿ - ALLEGATIONS ON CEO MUKESH

author img

By ETV Bharat Karnataka Team

Published : May 4, 2024, 11:02 PM IST

ಚುನಾವಣಾ ಪ್ರಕ್ರಿಯೆಯಲ್ಲಿ ನ್ಯಾಯಯುತ ಮತ್ತು ನಿಷ್ಪಕ್ಷಪಾತವಾಗಿರಬೇಕಾದ ಆಂಧ್ರ ಪ್ರದೇಶದ ರಾಜ್ಯ ಚುನಾವಣಾ ಆಯೋಗ ತನ್ನ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲವಾಗಿದೆ ಎಂದು ವಿಪಕ್ಷಗಳು ಆರೋಪಗಳು ಮಾಡುತ್ತಿದೆ.

ANDHRA PRADESH CEO MUKESH KUMAR MEENA
ಆಂಧ್ರ ಪ್ರದೇಶ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮುಖೇಶ್ ಕುಮಾರ್ ಮೀನಾ (Etv Bharat)

ಅಮರಾವತಿ (ಆಂಧ್ರ ಪ್ರದೇಶ): ಆಂಧ್ರಪ್ರದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆಗಳು ನಡೆಯುತ್ತಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿಯಾದ ಮುಖೇಶ್ ಕುಮಾರ್ ಮೀನಾ ಅವರ ನಡವಳಿಕೆಯಿಂದಾಗಿ ಆಡಳಿತಾರೂಢ ವೈಎಸ್​ಆರ್​ಸಿಪಿಗೆ ಲಾಭವಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಚುನಾವಣಾ ಪ್ರಕ್ರಿಯೆಗಳನ್ನು ತಟಸ್ಥ ಮತ್ತು ನಿಷ್ಪಕ್ಷಪಾತವಾಗಿ ನಡೆಸುವುದು ಚುನಾವಣಾ ಆಯೋಗದ ಕರ್ತವ್ಯ. ಮುಖ್ಯ ಕಾರ್ಯದರ್ಶಿ ಕೆ. ಎಸ್. ಜವಾಹರ್ ರೆಡ್ಡಿ ಮತ್ತು ಡಿಜಿಪಿ ರಾಜೇಂದ್ರನಾಥ ರೆಡ್ಡಿ ಅವರಿಗೆ ಉಸ್ತುವಾರಿ ವಹಿಸಿದರೆ, ಚುನಾವಣೆಗಳು ನ್ಯಾಯಸಮ್ಮತ ಮತ್ತು ಪಾರದರ್ಶಕ ಆಗಿರುವುದಿಲ್ಲ ಹಾಗೂ ಅವರನ್ನು ತಕ್ಷಣವೇ ವರ್ಗಾಯಿಸಬೇಕು ಎಂದು ಎಲ್ಲ ವಿಪಕ್ಷಗಳು ಪದೇ ಪದೇ ಒತ್ತಾಯಿಸುತ್ತಿವೆ.

ಕೇಂದ್ರ ಚುನಾವಣಾ ಆಯೋಗಕ್ಕೆ ವಾಸ್ತವಾಂಶದ ವರದಿಯನ್ನು ಕಳುಹಿಸಿ ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳಬೇಕಾದ ಸಿಇಒ ಮೀನಾ ಅವರು ಆ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದೂ ವಿರೋಧ ಪಕ್ಷಗಳು ಟೀಕಿಸುತ್ತಿವೆ. ಮುಖ್ಯಮಂತ್ರಿ ಜಗನ್ ಅವರು ಪಿಂಚಣಿದಾರರ ಮನೆಗಳಿಗೆ ಪಿಂಚಣಿ ವಿತರಣೆಯನ್ನು ಕೈಗೆತ್ತಿಕೊಳ್ಳದೆ ಮತ್ತು ಪಿಂಚಣಿದಾರರ ತೀವ್ರ ತೊಂದರೆಗೆ ಸಿಲುಕಿಸಿ, ಇದಕ್ಕೆ ಪ್ರತಿಪಕ್ಷಗಳನ್ನು ದೂಷಿಸಲು ಸಿಎಸ್ ಮೂಲಕ ಸಂಚು ರೂಪಿಸುತ್ತಿದ್ದಾರೆ. ಪಿಂಚಣಿ ಸಮಸ್ಯೆ ನಿಲ್ಲದೆ ಇದ್ದರೆ, ಇದನ್ನು ಪರಿಹರಿಸಲಾಗಿದೆ ಎಂದು ಸಿಇಒ ಮೀನಾ ಹೇಳಿದ್ದು ಹೇಗೆ ಎಂದು ವಿರೋಧ ಪಕ್ಷಗಳು ಪ್ರಶ್ನಿಸುತ್ತಿವೆ.

ಅಲ್ಲದೇ, ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕರ ಮೇಲೆ ವೈಎಸ್‌ಆರ್‌ಸಿಪಿ ನಾಯಕರು ದೊಡ್ಡ ಮಟ್ಟದಲ್ಲಿ ಹಲ್ಲೆ ನಡೆಸುತ್ತಿದ್ದರೂ ಸಂಬಂಧಪಟ್ಟ ಡಿಎಸ್‌ಪಿ, ಇನ್ಸ್‌ಪೆಕ್ಟರ್‌, ಎಸ್‌ಎಸ್‌ಐಗಳ ವಿರುದ್ಧ ಕ್ರಮ ಕೈಗೊಳ್ಳದಿರುವ ಬಗ್ಗೆ ಟೀಕೆಗಳು ಕೇಳಿಬರುತ್ತಿವೆ. ಸಿಇಒ ಈ ರೀತಿ ಯಾವುದಕ್ಕೂ ಸ್ಪಂದಿಸದಿರುವುದು ಚುನಾವಣಾ ಆಯೋಗದ ನಿಷ್ಪಕ್ಷಪಾತ ಮತ್ತು ತಟಸ್ಥತೆಯ ಬಗ್ಗೆ ವಿರೋಧ ಪಕ್ಷಗಳು ಮತ್ತು ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮನೆಯಲ್ಲಿಯೇ ಪಿಂಚಣಿ ವಿತರಿಸಲು ಎಲ್ಲ ಅವಕಾಶವಿದ್ದರೂ ಅಧಿಕಾರಿಗಳು 2 ತಿಂಗಳಾದರೂ ಮಾಡಿಲ್ಲ. ಏಪ್ರಿಲ್‌ನಲ್ಲಿ ವೃದ್ಧರು, ಅಂಗವಿಕಲರು ಮತ್ತು ವಿಧವೆಯರನ್ನು ಸೆಕ್ರೆಟರಿಯೇಟ್‌ಗಳಿಗೆ ಕರೆತರಲಾಗಿದೆ. ಪ್ರತಿಪಕ್ಷಗಳೇ ಇದಕ್ಕೆ ಕಾರಣ ಎಂಬ ಭಾವನೆಯನ್ನು ಜನರಲ್ಲಿ ಮೂಡಿಸುವ ಮತ್ತು ಆ ಮೂಲಕ ವೈಎಸ್‌ಆರ್‌ಸಿಪಿಗೆ ರಾಜಕೀಯ ಲಾಭವನ್ನು ನೀಡುವ ಷಡ್ಯಂತ್ರದೊಂದಿಗೆ ಇದನ್ನು ಮಾಡಲಾಗಿದೆ. ಇದರಿಂದಾಗಿ ಏಪ್ರಿಲ್​ನಲ್ಲಿ ಪಿಂಚಣಿ ವಿತರಣೆ ವಿಚಾರ ತೀವ್ರ ಗೊಂದಲಕ್ಕೆ ಕಾರಣವಾಗಿ 32 ವೃದ್ಧರು ಮೃತಪಟ್ಟಿದ್ದಾರೆ. ಈ ಎಲ್ಲದರ ವಿರುದ್ಧ ಪ್ರತಿಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿವೆ.

ಆಂಧ್ರದಲ್ಲಿ ಪಿಂಚಣಿದಾರರ ಸಮಸ್ಯೆ: ಮೇ ತಿಂಗಳೊಳಗೆ ಸರ್ಕಾರಿ ನೌಕರರು ಮತ್ತು ಫಲಾನುಭವಿಗಳ ಮನೆಗಳಲ್ಲಿ ಪಿಂಚಣಿ ವಿತರಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ. ಆದಾಗ್ಯೂ, ಪಿಂಚಣಿಯನ್ನು ಮನೆಯಲ್ಲಿಯೇ ವಿತರಿಸುವಂತೆ ಚುನಾವಣಾ ಆಯೋಗವು ಸಿಎಸ್‌ಗೆ ನಿರ್ದೇಶನ ನೀಡಿಲ್ಲ. ಮೇ ತಿಂಗಳ ಪಿಂಚಣಿಯನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ.

ಇದರಿಂದಾಗಿ ಲಕ್ಷಾಂತರ ವೃದ್ಧರು, ವಿಧವೆಯರು, ವಿಶೇಷಚೇತನರು ಮತ್ತು ನತದೃಷ್ಟರು ಬ್ಯಾಂಕ್‌ಗಳ ಸುತ್ತಲೂ ಗಂಟೆಗಟ್ಟಲೆ ಕಾಯಲು ಸಾಧ್ಯವಾಗದೆ ಸಾಕಷ್ಟು ತೊಂದರೆ ಅನುಭವಿಸಿದರು. ಪಿಂಚಣಿಗಾಗಿ ಹೋದ ಎರಡೇ ದಿನಗಳಲ್ಲಿ ಅನೇಕ ವೃದ್ಧರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂದರ್ಭಗಳನ್ನು ಇಸಿಐ ಗಮನಕ್ಕೆ ತೆಗೆದುಕೊಂಡು ಮನೆಗೆ ಪಿಂಚಣಿ ವಿತರಿಸಲು ಸಿಇಒ ಏಕೆ ಮುಂದಾಗುತ್ತಿಲ್ಲ ಎಂಬ ಟೀಕೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಚುನಾವಣಾ ಪ್ರಚಾರಕ್ಕೆ ಹಣಕಾಸಿನ ಕೊರತೆ: ಟಿಕೆಟ್​ ವಾಪಸ್​ ನೀಡಿದ ಕಾಂಗ್ರೆಸ್ ಅಭ್ಯರ್ಥಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.