ಬೆಳ್ತಂಗಡಿ: ಭಾರಿ ಅಗ್ನಿ ಅನಾಹುತ, ಎರಡು ಅಂಗಡಿಗಳು ಸುಟ್ಟು ಭಸ್ಮ
ಬೆಳ್ತಂಗಡಿ (ದಕ್ಷಿಣ ಕನ್ನಡ): ತಾಲೂಕಿನ ಉಜಿರೆ ಸಮೀಪ ಇಂದು ಮಧ್ಯಾಹ್ನ ಭಾರಿ ಅಗ್ನಿ ಅನಾಹುತ ಸಂಭವಿಸಿದೆ. ಚಾರ್ಮಾಡಿ ರಸ್ತೆಯ ಅನುಗ್ರಹ ಶಾಲೆಯ ಬಳಿ ಟಯರ್ ಅಂಗಡಿಯಲ್ಲಿ ಅಗ್ನಿ ಅವಘಡ ನಡೆದಿದ್ದು ಹತ್ತಿರದ ಹಾರ್ಡ್ವೇರ್ ಅಂಗಡಿಗೂ ಆವರಿಸಿತ್ತು. ಇದರಿಂದ ಎರಡು ಅಂಗಡಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಕಾಂಪ್ಲೆಕ್ಸ್ನ ಉಳಿದ ಅಂಗಡಿ, ಹೋಟೆಲ್ಗಳಿಗೂ ಹಾನಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದರು.