ಶ್ರೀಗಳಿಗೆ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಸಂತಾಪ ಸೂಚಿಸಿದರು. ಸುಮಾರು ಐವತ್ತು ವರ್ಷದಿಂದ ಪೇಜಾವರ ಶ್ರೀಗಳಿಂದ ಜನಸೇವೆಯೊಂದಿಗೆ ರಾಷ್ಟ್ರಸೇವೆಯನ್ನು ಮಾಡಿದ್ದಾರೆ. ಲಿಂಗತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ ಉಮಾಭಾರತಿಗೆ ಧೀಕ್ಷೆ ನೀಡಿದ್ದ ಅವರು, ಹರಿಜನ ಕೇರಿಯಲ್ಲಿ ಪಾದಯಾತ್ರೆ ಮೂಲಕ ಪರಿವರ್ತನಾ ಜಾಥಾ ಕೂಡ ಹಮ್ಮಿಕೊಂಡಿದ್ದು, ಜಾತಿ, ಬೇಧವನ್ನು ನಿವಾರಿಸಲು ಮುಂದಾಗಿದ್ದರು ಎಂದರು.