ದಿಢೀರ್​ ಸ್ಥಗಿತಕೊಂಡ ರೈಲುಗಳ ಸಂಚಾರ.. ತುಮಕೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

By

Published : May 23, 2023, 3:48 PM IST

thumbnail

ತುಮಕೂರು: ಬೆಂಗಳೂರು - ತುಮಕೂರು ನಡುವಿನ ಮಾರ್ಗ ಮಧ್ಯೆ ರೈಲ್ವೆ ಮಾರ್ಗ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ಬಹುತೇಕ ಬೆಂಗಳೂರಿಗೆ ಹೊರಡುವ ರೈಲುಗಳು ದಿಢೀರನೆ, ತುಮಕೂರು ನಿಲ್ದಾಣದಲ್ಲಿಯೇ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಟಿಕೆಟ್ ಪಡೆದು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಶಾಕ್ ಕಾದಿತ್ತು. ನಡು ಮಾರ್ಗದಲ್ಲೇ ಸಾವಿರಾರು ಪ್ರಯಾಣಿಕರನ್ನ ಕೈಬಿಟ್ಟ ರೈಲ್ವೆ ಇಲಾಖೆಗೆ ಪ್ರಯಾಣಿಕರು ಹಿಡಿಶಾಪ ಹಾಕಿದರು.ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುತ್ತಿದ್ದ ಎಕ್ಸ್​ಪ್ರೆಸ್ ರೈಲು ಮುಂದಕ್ಕೆ ಪಯಣಿಸದೇ ತುಮಕೂರಿನಲ್ಲಿಯೇ ನಿಂತಿತು. ಗಂಟೆಗಟ್ಟಲೇ ಕಾದು ಕಾದು ಪ್ರಯಾಣಿಕರು ಹೈರಾಣಾಗಿದ್ದರು. ಅತ್ತ ಟಿಕೆಟ್ ಹಣವೂ ಇಲ್ಲದೇ, ಇತ್ತ ಬೆಂಗಳೂರಿಗೆ ಹೋಗಲೂ ಆಗದೇ ಪರದಾಡಿದರು.

ಪ್ರಯಾಣಿಕರ ಪ್ರಶ್ನೆಗೆ ಉತ್ತರ ನೀಡಲಾಗದೆ ಕೌಂಟರ್​​ನಿಂದಲೇ ಸಿಬ್ಬಂದಿ ಕಾಲ್ಕಿತ್ತರು. ತುಮಕೂರಿನ ಸಿದ್ದಗಂಗಾ ಮಠದ ಬಳಿ ರೈಲು ಹಳಿ ದುರಸ್ತಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು- ತುಮಕೂರು ನಡುವೆ ರೈಲು ಸಂಚಾರ ಸ್ಥಗಿತಗೊಂಡಿದೆ. ಮಂಗಳವಾರ ಬೆಳಗ್ಗೆಯಿಂದ 19 ರೈಲುಗಳ ಸಂಚಾರ ಸ್ಥಗಿತಗೊಂಡಿದ್ದು, ತುಮಕೂರು ರೈಲು ನಿಲ್ದಾಣದ ಬಳಿ ನಿಂತಿವೆ.

ಇದನ್ನೂ ಓದಿ: ರೈಲ್ವೆ ಅಂಡರ್​ ಪಾಸ್ ಬಳಿ ಹಳ್ಳಕ್ಕೆ ಬಿದ್ದು ವ್ಯಕ್ತಿ ಸಾವು

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.