ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಂಜಮಾಮ್-ಉಲ್-ಹಕ್‌ಗೆ ಅದ್ಧೂರಿ ಸ್ವಾಗತ; ಹೇಳಿದ್ದೇನು ಗೊತ್ತೇ?

By ETV Bharat Karnataka Team

Published : Oct 11, 2023, 4:23 PM IST

thumbnail

ಅಮೃತಸರ (ಪಂಜಾಬ್​): ಏಕದಿನ ವಿಶ್ವಕಪ್ ಕ್ರಿಕೆಟ್​ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್​ ತಂಡದ ಮುಖ್ಯ ಆಯ್ಕೆಗಾರ ಇಂಜಮಾಮ್-ಉಲ್-ಹಕ್ ಇಂದು ಭಾರತಕ್ಕೆ ಆಗಮಿಸಿದ್ದಾರೆ. ಪಂಜಾಬ್​ನ ಅಮೃತಸರ ಗುರು ರಾಮದಾಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು. ''ಭಾರತ ಹಾಗೂ ಪಾಕಿಸ್ತಾನ ವಿಶ್ವಕಪ್​ ಫೈನಲ್​ ಪಂದ್ಯ ಆಡಬೇಕು" ಎಂದು ಪಾಕ್ ಕ್ರಿಕೆಟ್‌ ತಂಡ​ ಮಾಜಿ ನಾಯಕರೂ ಆದ ಇಂಜಮಾಮ್ ಇದೇ ಸಂದರ್ಭದಲ್ಲಿ ಹೇಳಿದರು.

''ಪಾಕಿಸ್ತಾನ ಹಾಗೂ ಭಾರತ ತಂಡಗಳ ನಡುವಿನ ಯಾವುದೇ ಪಂದ್ಯವು ವಿಶ್ವಕಪ್​ ಫೈನಲ್​ಗಿಂತ ಮುಂಚಿನ ಫೈನಲ್​ ಆಗಿರುತ್ತದೆ. ವಿಶ್ವಕಪ್‌ನಲ್ಲಿ ಭಾರತ- ಪಾಕಿಸ್ತಾನ ನಡುವೆ ಫೈನಲ್​ ಪಂದ್ಯ ನಡೆಯಬೇಕೆಂದು ಜನ ಬಯಸುತ್ತಾರೆ'' ಎಂದು ತಿಳಿಸಿದರು.

ಪ್ರಸ್ತುತ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿದ ಇಂಜಮಾಮ್​, ''ತಂಡ ಉತ್ತಮವಾಗಿ ಆಡುತ್ತಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅಬ್ದುಲ್ಲಾ ಶಫೀಕ್ ಹಾಗೂ ಮೊಹಮ್ಮದ್ ರಿಜ್ವಾನ್​ ಅದ್ಭುತ ಪ್ರದರ್ಶನ ನೀಡಿದರು. ಬ್ಯಾಟಿಂಗ್​, ಬೌಲಿಂಗ್​ ಹಾಗೂ ಫೀಲ್ಡಿಂಗ್ ಉತ್ತಮವಾಗಿದೆ. ಪಿಚ್​ಗಳು ಕೂಡ ಉತ್ತಮವಾಗಿದ್ದು, ಹೆಚ್ಚಿನ ರನ್​ ಕಲೆ ಹಾಕಲು ಸಾಧ್ಯವಾಗುತ್ತಿದೆ. ಹೆಚ್ಚು ಸ್ಕೋರ್​ ಗಳಿಸಿದಷ್ಟು ತಂಡಕ್ಕೆ ನೆರವಾಗಲಿದೆ. ಪಾಕಿಸ್ತಾನ ಹೀಗೆಯೇ ತನ್ನ ಪ್ರರ್ದಶನ ಮುಂದುವರೆಸಿದರೆ ಕಪ್​ ಗೆಲ್ಲಲಿದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಅಕ್ಟೋಬರ್​ 14ರಂದು ಭಾರತ, ಪಾಕಿಸ್ತಾನ ತಂಡಗಳು ಸೆಣಸಾಟ ನಡೆಸಲಿವೆ.

ಇದನ್ನೂ ಓದಿ: ಅಬ್ದುಲ್ಲಾ ಶಫೀಕ್- ರಿಜ್ವಾನ್‌ ಭರ್ಜರಿ ಜೊತೆಯಾಟ; ಶ್ರೀಲಂಕಾ ವಿರುದ್ಧ ಪಾಕಿಸ್ತಾನಕ್ಕೆ ದಾಖಲೆಯ ಗೆಲುವು

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.