ತುಮಕೂರಿನಲ್ಲಿ ಮಾನಸಿಕ ಅಸ್ವಸ್ಥನಿಂದ ಹಲ್ಲೆ; ವ್ಯಕ್ತಿ ಸಾವು

By ETV Bharat Karnataka Team

Published : Oct 17, 2023, 7:07 PM IST

thumbnail

ತುಮಕೂರು: ಮಾನಸಿಕ‌ ಅಸ್ವಸ್ಥನಿಂದ ಹಲ್ಲೆಗೊಳಗಾದ ವ್ಯಕ್ತಿ ಮೃತಪಟ್ಟಿರವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿ ನಡೆದಿದೆ. ಅನಿಲ್​ ಎಂಬಾತ  ಮಾನಸಿಕ ಅಸ್ವಸ್ಥ ವ್ಯಕ್ತಿಯಾಗಿದ್ದು,  ಈತ ಶಿವಶಂಕರಪ್ಪ ಎಂಬುವರಿಗೆ ದೊಣ್ಣೆಯಿಂದ ಥಳಿಸಿದ್ದ. ಪರಿಣಾಮ ಶಿವಶಂಕರಪ್ಪ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಕೊರಟಗೆರೆ ಪೊಲೀಸ್​​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಾನಸಿಕ ಅಸ್ವಸ್ಥ ಅನಿಲ್​ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರು ವರ್ಷದ ಹಿಂದೆ ಸ್ವಂತ ತಂದೆಯನ್ನೇ ಹತ್ಯೆ ಮಾಡಿದ್ದ ಅನಿಲ್​: ಮಾನಸಿಕ ಅಸ್ವಸ್ಥನಾಗಿರುವ ಅನಿಲ್​​ ಇಂದ ಆಗಿರುವುದು ಇದು ಮೊದಲನೆಯ ಕೊಲೆಯಲ್ಲ. ಇದಕ್ಕೂ ಮೊದಲು 6 ವರ್ಷದ ಹಿಂದೆಯೇ ತನ್ನ ಸ್ವಂತ ತಂದೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ‌ಕೊಲೆ ಮಾಡಿದ್ದನು. ಈ ಹಿನ್ನೆಲೆ ಅನಿಲ್​ ಜೈಲು ಶಿಕ್ಷೆ ಅನುಭವಿಸಿ ಹೊರ ಬಂದಿದ್ದನು. ಆದರೆ, ಇದರ ಬಳಿಕ ಆತನ ಮಾನಸಿಕ ಅಸ್ವಸ್ಥನಾಗಿದ್ದು, ಕೊರಟಗೆರೆಯಲ್ಲಿ ಅಲೆದಾಡುತ್ತಿದ್ದನು. 

ಹೀಗೆ ಇದ್ದ ಅನಿಲ್​ ಯಾಕೋ ನಿನ್ನೆ ರಾತ್ರಿ ಶನಿಮಹಾತ್ಮ ದೇವಸ್ಥಾನದ ಬಳಿ ನಡೆದುಕೊಂಡು ಹೋಗುತ್ತಿದ್ದ ಶಿವಶಂಕರಪ್ಪ ಎಂಬಾತನ ತಲೆಗೆ  ಹಿಂದಿನಿಂದ ಬಂದು ದೊಣ್ಣೆಯಿಂದ ಬಲವಾಗಿ ಹೊಡೆದಿದ್ದನು. ಹೊಡೆತದ ರಭಸಕ್ಕೆ ಶಿವಶಂಕರಪ್ಪ ಸಾವನ್ನಪ್ಪಿದ್ದಾರೆ. ಸದ್ಯ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಅನೈತಿಕ ಸಂಬಂಧ, ವ್ಯಕ್ತಿ ಹತ್ಯೆಗೈದ ದಂಪತಿ ಬಂಧನ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.