ಪಾರಾದೀಪ್ ಕರಾವಳಿಯಲ್ಲಿ 13 ಮೀನುಗಾರರು ನಾಪತ್ತೆ.. ಬಿರುಸಿನ ಕಾರ್ಯಾಚರಣೆ

By

Published : Jan 16, 2023, 3:54 PM IST

Updated : Feb 3, 2023, 8:39 PM IST

thumbnail

ಪಾರಾದೀಪ್ (ಒಡಿಶಾ) : ಜಗತ್‌ಸಿಂಗ್‌ಪುರ ಜಿಲ್ಲೆಯ ಪಾರಾದೀಪ್ ಕರಾವಳಿಯ ಸಮುದ್ರದಲ್ಲಿ 13 ಮೀನುಗಾರರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಕಿನಾರಾ ಮತ್ತು ದೇಬಿಲಕ್ಷ್ಮಿ ಎಂಬ ಎರಡು ದೋಣಿಗಳು ಐದು ದಿನಗಳ ಹಿಂದೆ ಮೀನುಗಾರಿಕೆಗೆ ತೆರಳಿದ್ದವು ಮತ್ತು ಆಗ ಅವು 163 ಕಿ ಮೀ ಕರಾವಳಿಯಿಂದ ದಿಘಾ ಕಡೆಗೆ ತೆರಳಿ ನಾಪತ್ತೆಯಾಗಿದ್ದವು. ಮೀನುಗಾರರನ್ನು ಸಂಪರ್ಕಿಸಲು ವಿಫಲವಾದ ಪ್ರಯತ್ನಗಳ ನಂತರ, ಎರಡು ದೋಣಿಗಳ ಮಾಲೀಕರು ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲು ಕೋಸ್ಟ್ ಗಾರ್ಡ್ ಹೆಡ್ಕ್ವಾರ್ಟರ್ಸ್ ಮತ್ತು ಮೆರೈನ್ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಮೀನುಗಾರರ ಮತ್ತು ಚಾಲಕರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುವುದರಿಂದ ಅವರೊಂದಿಗೆ ಸಂಪರ್ಕ ಸಾಧಿಸಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ. ಕುಜಾಂಗ್‌ನ ಹೆಚ್ಚುವರಿ ಮೀನುಗಾರಿಕಾ ಅಧಿಕಾರಿ, ನಾಪತ್ತೆಯಾದ ಎರಡು ದೋಣಿಗಳನ್ನು ಹುಡುಕಲು ಮತ್ತು ಮೀನುಗಾರರನ್ನು ರಕ್ಷಿಸಲು ಕೋಸ್ಟ್ ಗಾರ್ಡ್‌ಗೆ ಒತ್ತಾಯಿಸಿದ್ದಾರೆ. 

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.