ETV Bharat / sukhibhava

ಬೆಂಗಳೂರಿನಲ್ಲಿ ವೈರಲ್‌ ಫೀವರ್‌ ಪ್ರಕರಣಗಳು ಹೆಚ್ಚಳ; ಮುನ್ನೆಚ್ಚರಿಕೆ ಮರೆಯದಿರಿ..

author img

By

Published : Jul 21, 2023, 2:22 PM IST

Updated : Jul 21, 2023, 2:46 PM IST

Sinusitis Cases are raising in Bangalore due to dust
Sinusitis Cases are raising in Bangalore due to dust

ಸಾಮಾನ್ಯವಾಗಿ ಮಾನ್ಸೂನ್​ ಆರಂಭದ ಸಮಯದಲ್ಲಿ ಈ ರೀತಿಯ ಸೋಂಕುಗಳ ಪ್ರಮಾಣ ಹೆಚ್ಚುತ್ತವೆ.

ವಾತಾವರಣದಲ್ಲಿನ ಬದಲಾವಣೆ ಮತ್ತು ಮೋಡ ಕವಿದ ವಾತಾವರಣದಿಂದ ನಗರದಲ್ಲಿ ವೈರಲ್​ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಕಳೆದ ಮೂರು-ನಾಲ್ಕು ದಿನದಿಂದ ಭಾಗಶಃ ಮೋಡ ಕವಿದ ವಾತಾವರಣವಿದ್ದು ಗಂಟೆಗೆ 28 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಆರ್ದ್ರತೆಯ ಪ್ರಮಾಣದಿಂದಾಗಿ ಅನೇಕರಲ್ಲಿ ಜ್ವರ, ಕೆಮ್ಮು ಮತ್ತು ನೆಗಡಿಯಂತಹ ಸೋಂಕು ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಗಾಳಿ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಸೈನಸೈಟಿಸ್​ ಸಮಸ್ಯೆ ಹೆಚ್ಚಿರುವವರು ಸೋಂಕಿಗೆ ಬಲು ಬೇಗ ತುತ್ತಾಗುತ್ತಿದ್ದಾರೆ.

ಸಾಮಾನ್ಯವಾಗಿ ಮಳೆಗಾಲ​ ಆರಂಭದ ಸಮಯದಲ್ಲಿ ಈ ರೀತಿಯ ಸೋಂಕುಗಳ ಪ್ರಮಾಣ ವಿಪರೀತ. ಇದು ಸೊಳ್ಳೆಗಳ ಸಂತಾನೋತ್ಪತ್ತಿ ಸಮಯವೂ ಆಗಿರುವುದರಿಂದ ಡೆಂಗ್ಯೂ, ಚಿಕನ್​ ಗುನ್ಯಾ ಪ್ರಕರಣಗಳು ಹೆಚ್ಚುತ್ತವೆ. ಈ ಹಿನ್ನೆಲೆಯಲ್ಲಿ ಜನರು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಇದು ಮೇ ಆರಂಭದಲ್ಲಿ ಶುರುವಾದ ಅಕಾಲಿಕ ಮಳೆಯ ಪರಿಣಾಮವಾಗಿ ಇದೀಗ ಸೊಳ್ಳೆಗಳ ಸೋಂಕು ಹೆಚ್ಚಾಗಿದೆ. ಡೆಂಗ್ಯೂ ಹೊರತಾಗಿ ಚಿಕುನ್​ಗುನ್ಯಾ ಮತ್ತು ಕಾಂಜಂಕ್ಟಿವಿಟಿಸ್‌ನಂತಹ ಋತುಮಾನದ ಜ್ವರಗಳು ಬಾಧಿಸುತ್ತವೆ.

ಹೆಚ್ಚಿದ ತಂಪು ವಾತಾವರಣ: ಸಾಮಾನ್ಯವಾಗಿ ತಂಪು ವಾತಾವರಣದಿಂದ ಮನುಷ್ಯರಲ್ಲಿ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ. ಸೋಂಕು ಉಂಟು ಮಾಡುವ ವೈರಸ್​ ಮತ್ತು ಗಾಳಿಯಲ್ಲಿ ಬೇಗ ಹರಡುತ್ತದೆ. ನಗರದಲ್ಲಿ ತಂಪು ವಾತಾವರಣ ಹೆಚ್ಚಿದ ಕಾರಣ ನೆಗಡಿ, ಕೆಮ್ಮು, ಸೈನಸೈಟಿಸ್ ಸಮಸ್ಯೆ,​​ ಮೈ-ಕೈ ನೋವು ಕಾಣಿಸಿಕೊಳ್ಳುತ್ತಿದೆ.

ಗಾಳಿಯಿಂದಾಗಿ ಧೂಳಿನ ಪ್ರಮಾಣ ನಗರದಲ್ಲಿ ಹೆಚ್ಚುತ್ತಿದ್ದು, ಧೂಳಿನ ಅಲರ್ಜಿ ಉಂಟಾಗುತ್ತದೆ. ಇದರ ಪರಿಣಾಮವಾಗಿ ಅಲರ್ಜಿಕ್​ ಸೈನಸೈಟಿಸ್​ ಇರುವವರು ಹೆಚ್ಚು ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಇಂತಹ ಧೂಳಿನ ಅಥವಾ ಸೈನಸೈಟಿಸ್​ ಸಮಸ್ಯೆ ಹೊಂದಿರುವವರು ಮಾಸ್ಕ್​ ಧರಿಸಿ ಓಡಾಡುವುದು ಸೂಕ್ತ. ಇದರಿಂದ ಅಲರ್ಜಿ ಉಂಟಾಗುವ ವೈರಾಣುಗಳು ಸೈನಾಸ್​ಗೆ ಹೋಗದಂತೆ ತಡೆಯಬಹುದು.

ಇಂತಹ ಗಾಳಿ ಮತ್ತು ಧೂಳಿನ ವಾತಾವರಣವನ್ನು ನಿರ್ಲಕ್ಷ್ಯಿಸುವುದಿಂದ ಅದು ಸೈನಸೈಟಿಸ್​ನಿಂದ ಫರಂಜೈಟಿಸ್​, ಅಪ್ಪರ್​ ರೆಸ್ಪರೆಟರಿ ಇನ್​ಫೆಕ್ಷನ್​ (ಕೆಮ್ಮು) ಹೆಚ್ಚಾದಾಗ ಜ್ವರದಂತಹ ಸೋಂಕು ಕೂಡ ಹೆಚ್ಚುತ್ತದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಮುಂಜಾಗ್ರತೆ ವಹಿಸುವುದು ಸೂಕ್ತ ಎಂದು ರಾಜಾಜಿನಗರದ ಖಾಸಗಿ ಕ್ಲಿನಿಕ್​ನ ವೈದ್ಯರಾದ ಡಾ.ರಾಘವೇಂದ್ರ ಎನ್ ಸಲಹೆ ನೀಡಿದ್ದಾರೆ.

ಪೋರ್ಟಿಸ್​ ಆಸ್ಪತ್ರೆಯ ಇಂಟರನಲ್​​​ ಮೆಡಿಸಿನ್​ನ ವೈದ್ಯರಾದ ಡಾ.ಆದಿತ್ಯ ಚೌತಿ ಮಾತನಾಡಿ, ಹೆಚ್ಚಾದ ತಂಪಾದ ವಾತಾವರಣದಲ್ಲಿ ಇರುವುದನ್ನು ನಿಯಂತ್ರಿಸುವುದು ಸೂಕ್ತ. ಆದಷ್ಟು ಬೆಚ್ಚಗಿನ ಉಡುಪು ಧರಿಸಿ, ಜ್ವರ ಬಂದ ಕೂಡಲೇ ನಿರ್ಲಕ್ಷಿಸದೇ, ಮನೆ ಮದ್ದು ಪ್ರಯೋಗಿಸದೇ ವೈದ್ಯರನ್ನು ಕಾಣುವುದು ಒಳ್ಳೆಯದು ಎಂದಿದ್ದಾರೆ.

ಮಕ್ಕಳ ಬಗ್ಗೆ ಇರಲಿ ಕಾಳಜಿ: 10 ವರ್ಷದೊಳಗಿನ ಮಕ್ಕಳಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಕಡಿಮೆ ಇರುವುದರಿಂದ ಅವರಿಗೆ ಬಲು ಬೇಗ ಸೋಂಕುಗಳು ಹರಡುತ್ತದೆ. ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸುವುದೊಳ್ಳೆದು. ಇಂತಹ ಸೋಂಕಿತ ಮಕ್ಕಳನ್ನು ಶಾಲೆಗೆ ಕಳುಹಿಸದೇ, ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಬಹುದು.

ಈ ರೀತಿ ಇರಲಿ ಆರೈಕೆ: ಈ ಸಮಯದಲ್ಲಿ ಕಾಯಿಸಿ, ಆರಿಸಿದ ಶುದ್ದ ನೀರನ್ನು ಕುಡಿಯುವುದು ಉತ್ತಮ. ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡುವ ಜೊತೆಗೆ ಸ್ವಚ್ಛವಾದ ಬಿಸಿಯಾದ ತಾಜಾ ಆಹಾರ ಸೇವನೆ ಮಾಡಬೇಕು. ಹೆಚ್ಚು ಬೆಚ್ಚಿಗಿನ ಬಟ್ಟೆ ಹಾಕುವುದು ಉತ್ತಮ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 11 ದಿನದಲ್ಲಿ 178 ಡೆಂಘೀ ಪ್ರಕರಣ ದಾಖಲು

Last Updated :Jul 21, 2023, 2:46 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.