ETV Bharat / state

ವಿಜಯಪುರ: 32 ಕೆಜಿ ಸಂಗ್ರಾಣಿ ಕಲ್ಲು ಎತ್ತಿ ಹುಬ್ಬೇರಿಸಿದ 11ರ ಬಾಲಕ

author img

By

Published : Nov 22, 2022, 11:56 AM IST

Basavanabagevadi weightlifting competition
ಭಾರ ಎತ್ತುವ ಸ್ಪರ್ಧೆ

ಬೀರಲಿಂಗೇಶ್ವರ ಜಾತ್ರಾ ಮಹೋತ್ಸವ. ಗಮನ ಸೆಳೆದ ಭಾರ ಎತ್ತುವ ಸ್ಪರ್ಧೆ. ಮಹಾರಾಷ್ಟ್ರ ಹಾಗೂ ಇತರ ಜಿಲ್ಲೆಯ ಪೈಲ್ವಾನ್​​ಗಳು ಭಾಗಿ.

ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ನಡೆದ ಭಂಡಾರದೊಡೆಯ ಬೀರಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾರ ಎತ್ತುವ ಸ್ಪರ್ಧೆ ಏರ್ಪಡಿಸಲಾಗಿತ್ತು. ನೆರೆಯ ಮಹಾರಾಷ್ಟ್ರ ಹಾಗೂ ಇತರ ಜಿಲ್ಲೆಯ ಪೈಲ್ವಾನ್​​ಗಳು ಭಾಗವಹಿಸಿ ತಮ್ಮ ಕಸರತ್ತು ಪ್ರದರ್ಶಿಸಿದರು.

ಭಾರ ಎತ್ತುವ ಸ್ಪರ್ಧೆ..

5ನೇ ತರಗತಿ ಓದುತ್ತಿರುವ ತಾಳಿಕೋಟೆಯ 11 ವರ್ಷದ ಬಾಲಕ ಉಸ್ಮಾನಗಣಿ 32 ಕೆಜಿ ಭಾರದ ಸಂಗ್ರಾಣಿ ಕಲ್ಲು ಎತ್ತುವ ಮೂಲಕ ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾನೆ. ಹಲವು ಯುವ ಪೈಲ್ವಾನ್​​ಗಳು ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ಶಕ್ತಿ ಪ್ರದರ್ಶಿಸಿದರು.

ಇದನ್ನೂ ಓದಿ: ಬಸವೇಶ್ವರ ಜಾತ್ರೆಗಾಗಿ ಮಹಿಳೆಯರಿಂದ ತಿರಂಗಾದೊಂದಿಗೆ ರೊಟ್ಟಿ ಮೆರವಣಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.